Get Updates
Get notified of breaking news, exclusive insights, and must-see stories!

ಬೆಂಗಳೂರು: ಹಿಟ್‌ ಆಂಡ್‌ ರನ್‌ ಕ್ಯಾಶಿಯರ್‌ ಸಾವು

crime news
ಬೆಂಗಳೂರು,ಜೂ.5: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಕ್ಯಾಷಿಯರ್ ಒಬ್ಬರು ಮೃತಪಟ್ಟಿರುವ ಘಟನೆ ಶೇಷಾದ್ರಿಪುರಂನಲ್ಲಿ ನಡೆದಿದೆ.

ಪುಟ್ಟಸ್ವಾಮಿಗೌಡ (43) ಮೃತಪಟ್ಟ ದುರ್ದೈವಿ. ಜೂ.4 ಬುಧವಾರ ರಾತ್ರಿ ಹೊಂಡಾ ಆಕ್ಟೀವಾದಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಶೇಷಾದ್ರಿಪುರಂನ ಕೃಷ್ಣ ಪ್ಲೋರ್‍ಮಿಲ್ ಜಂಕ್ಷನ್ ಬಳಿ ಅತಿ ವೇಗದಿಂದ ಬಂದ ವಾಹನವೊಂದು ಪುಟ್ಟಸ್ವಾಮಿಗೌಡರವರಿದ್ದ ಆಕ್ಟೀವಾಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ತಲೆಗೆ ಪೆಟ್ಟು ಬಿದ್ದು ಕೆಳಗೆ ಬಿದ್ದಿದ್ದ ಇವರನ್ನು ಬೌರಿಂಗ್‌ ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ ಮಾರ್ಗ‌ ಮಧ್ಯೆ ಮೃತಪಟ್ಟಿದ್ದಾರೆ.

ಈ ಅಪಘಾತಕ್ಕೆ ಅಪರಿಚಿತ ವಾಹನದ ಚಾಲಕನ ಅತಿವೇಗವೇ ಕಾರಣ ಎಂದು ಹೇಳಲಾಗುತ್ತಿದ್ದು, ಸಂಬಂಧಿ ಶ್ರೀನಿವಾಸ್ ಎಂಬವರು ಹೈಗ್ರೌಂಡ್ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ರೂಂ ಬಾಡಿಗೆ ಕೇಳುವ ನೆಪದಲ್ಲಿ ಕಳ್ಳತನ: ರೂಂ ಬಾಡಿಗೆಗೆ ಕೇಳುವ ನೆಪದಲ್ಲಿ ಮನೆಗೆ ಬಂದ ಅಪರಿಚಿತರು ಮಾಲೀಕನಿಗೆ ಚಾಕು ತೋರಿಸಿ 21 ಸಾವಿರ ರೂ ಹಣ ಮತ್ತು ಮೊಬೈಲ್‌ ಫೋನ್‌ ಕದ್ದಿರುವ ಘಟನೆ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅಶೋಕನಗರದ ಪುಷ್ಪಕರಿಂಗ್ ಸರ್ವಿಸ್ ಅಪಾರ್ಟ್‍ಮೆಂಟ್ ಅನಂದ್‍ಕುಮಾರ್ ಎಂಬವರ ಮನೆಗೆ ಬುಧವಾರ ರಾತ್ರಿ ಹತ್ತು ಗಂಟೆಯ ವೇಳೆ 7 ಜನ ಅಪರಿಚಿತರು ರೂಂ ಬಾಡಿಗೆಗೆ ಕೇಳುವ ನೆಪದಲ್ಲಿ ಬಂದಿದ್ದಾರೆ. ಮನೆಗೆ ಬಾಗಿಲನ್ನು ತೆರೆಯುತ್ತಿದ್ದಂತೆ ಚಾಕು ತೋರಿಸಿ ಅವರಲ್ಲಿದ್ದ ಹಣ ಮತ್ತು ನೋಕಿಯಾ ಮೊಬೈಲ್‌ನ್ನು ಕದ್ದು ಪರಾರಿಯಾಗಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಅನಂದ್‍ಕುಮಾರ್ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+