ಬಿಎಂಟಿಸಿ ವೊಲ್ವೋ ಪಾಸ್ ದರ ಹೆಚ್ಚಳ
ಬೆ೦ಗಳೂರು, ಜೂನ್ , 24: ಕೇಂದ್ರ ಸರ್ಕಾರ ಜೂನ್ 1 ರಿಂದ ವಿವಿದ ಸೇವೆಗಳ ದರದಲ್ಲಿ ಬದಲಾವಣೆ ಮಾಡಿರುವುದು ಬಿಎಂಟಿಸಿ ಪ್ರಯಾಣಿಕರ ಮೇಲೂ ಪರಿಣಾಮ ಬೀರಿದೆ. ಮೇ 26ರಿ೦ದ ಜೂನ್ 1ರವರೆಗೆ ಹಳೆಯ ಮೊತ್ತಕ್ಕೆ ಬಿಎಂಟಿಸಿ ವೋಲ್ವೋ ಪಾಸ್ ಖರೀದಿಸಿದವರಿ೦ದ ಇದೀಗ ಶೇ. 6 ಹೆಚ್ಚುವರಿ ಮೊತ್ತ ವಸೂಲಿ ಮಾಡಲು ಬಿಎಂಟಿಸಿ ಮುಂದಾಗಿದೆ.
ಕೇ೦ದ್ರ ಸರ್ಕಾರ ಜೂ.1ರಿ೦ದ ಹವಾನಿಯ೦ತ್ರಿತ ಬಸ್ ಸೇವೆಗಳ ಪ್ರಯಾಣ ದರ ಹೆಚ್ಚಳ ಮಾಡಿದೆ. ಇದೇ ಕಾರಣ ಇಟ್ಟುಕೊಂಡು ಬೆ೦ಗಳೂರು ಮಹಾನಗರ ಸಾರಿಗೆ ಸ೦ಸ್ಥೆ (ಬಿಎ೦ಟಿಸಿ) ಹೆಚ್ಚುವರಿ ಹಣ ವಸೂಲಿಗೆ ಮುಂದಾಗಿದೆ.[ಮೊದಲೇ ಹೆಚ್ಚಳದ ಮಾಹಿತಿ ನೀಡಿದ್ದ ಬಿಎಂಟಿಸಿ]

ಹಣ ವಸೂಲಿ ಹೇಗೆ?
ವೋಲ್ವೋ ಬಸ್ನಲ್ಲಿ ಪ್ರಯಾಣಿಸುವ ಪಾಸುದಾರರು ಹೆಚ್ಚುವರಿ ಶೇ. 6 ಮೊತ್ತಕ್ಕೆ ನಿವಾ೯ಹಕರು ನೀಡುವ ಸ್ಟಿಕ್ಕರ್ ಖರೀದಿಸಬೇಕು. ಅಲ್ಲದೆ, ಹಾಗೆ ಪಡೆದ ಸ್ಟಿಕ್ಕರ್ ಅನ್ನು ಪಾಸ್ ಗೆ ಅ೦ಟಿಸಿಕೊ೦ಡು ಪ್ರಯಾಣಿಸಬೇಕಾಗುತ್ತದೆ.
ವೋಲ್ವೋ ಬಸ್ಸುಗಳ ದಿನದ ಪಾಸಿನ ದರ 140 ರೂ., ಮಾಸಿಕ ಪಾಸಿನ ದರ 2,300 ರೂ. ಹಾಗೂ ವಾಯುವಜ್ರ ಮಾಸಿಕ ಪಾಸ್ ದರ 3,350 ರೂ.ಗಳು ಇತ್ತು. ಹೊಸ ನಿಯಮದ ಅನ್ವಯ ಪ್ರಯಾಣಿಕರು ಹೆಚ್ಚುವರಿಯಾಗಿ ನೂರಿನ್ನೂರು ರು. ನೀಡಬೇಕಾಗುತ್ತದೆ.[ಬೆಂಗಳೂರು ಸಾರ್ವಜನಿಕ ಸಾರಿಗೆ ಎಲ್ಲ ಮಾಹಿತಿ ಅಂಗೈನಲ್ಲಿ]
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ 700 ಹವಾ ನಿಯಂತ್ರಿತ ಬಸ್ಸುಗಳು ಸಂಚಾರ ನಡೆಸುತ್ತಿವೆ. ಅವುಗಳಲ್ಲಿ 15 ರೂ.ಗಳಿಂದ 65 ರೂ.ವರೆಗೆ ಟಿಕೆಟ್ ದರವಿದೆ. ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸೇವೆ ನೀಡುವ ವಾಯುವಜ್ರ ಬಸ್ಸುಗಳ ಟಿಕೆಟ್ ದರ 170 ರೂ.ನಿಂದ 300 ರೂ. ಇದೆ.
-
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ












Click it and Unblock the Notifications