Namma Metro: ಹಳದಿ ಮಾರ್ಗದಲ್ಲಿ ಏನಿದು ಹೊಸ ಗೊಂದಲ! ಪ್ರಯಾಣಿಕರು ದಂಡ ಕಟ್ಟಬೇಕೆ?
ಬೆಂಗಳೂರು, ಆಗಸ್ಟ್ 14: ಬೆಂಗಳೂರಿನ ನಾಗರಿಕರು ಮೂರು ವರ್ಷಗಳಿಂದ ಕಾಯುತ್ತಿದ್ದ 19 ಕಿಲೋ ಮೀಟರ್ 'ಹಳದಿ ಮೆಟ್ರೋ ಹೊಸ ಮಾರ್ಗ'ವನ್ನು ಆ.10ರಂದು ಪ್ರದಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಜನರ ಕಾಯುವಿಕೆ ಅಂತ್ಯಗೊಂಡ ಬೆನ್ನಲ್ಲೆ, ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ. ಒಟ್ಟು ಮೆಟ್ರೋ ಪ್ರಯಾಣಿಕರ ಸಂಖ್ಯೆ 10 ಲಕ್ಷ ದಾಟಿದೆ. ಇದೀಗ ಹಳದಿ ಮಾರ್ಗದಲ್ಲಿ ಹೊಸ ಗೊಂದಲ ಸೃಷ್ಟಿಯಾಗಿದೆ. ಹೆಚ್ಚು ಹೊತ್ತು ಕಾಯ್ದರೆ ಪ್ರಯಾಣಿಕರು ದಂಡ ಕಟ್ಟುವ ಅನಿವಾರ್ಯತೆ ಎದುರಿಸುವ ಸಾಧ್ಯತೆ ಇದೆ.
ಹೌದು, ಇದಕ್ಕೆ ನಿದರ್ಶನವೆಂಬಂತೆ ಪ್ರಯಾಣಿಕರೊಬ್ಬರು ಆರ್.ವಿ.ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗದಲ್ಲಿ ರೈಲು ಮಿಸ್ ಮಾಡಿಕೊಂಡಿದ್ದಕ್ಕಾಗಿ ದಂಡ ಕಟ್ಟಿದ್ದಾರೆ. ಈ ಮಾರ್ಗದಲ್ಲಿ 25 ನಿಮಿಷಕ್ಕೆ ಒಂದರಂತೆ ಮೂರು ರೈಲುಗಳು ಕಾರ್ಯಾಚರಣೆ ಮಾಡುತ್ತಿವೆ. ನಾಲ್ಕನೇ ರೈಲಿನ ಮೂರು ಬೋಗಿಗಳು ಈಗಷ್ಟೇ ಬೆಂಗಳೂರಿಗೆ ಆಗಮಿಸಿವೆ. ಹೆಚ್ಚುವರಿ ರೈಲುಗಳು ಕಾರ್ಯ ನಿರ್ವಹಣೆಗೆ ಸಮಯ ಹಿಡಯುಲಿದೆ.

ಹೀಗಿರುವಾಗ ಮಂಗಳವಾರ (ಆ.13) ಪ್ರಯಾಣಿಕರೊಬ್ಬು ಪ್ಲಾಟ್ಫಾರ್ಮ್ನಲ್ಲಿ 20 ನಿಮಿಷಕ್ಕೂ ಹೆಚ್ಚು ಸಮಯ ಕಾಯ್ದಿದ್ದಕ್ಕೆ ಅವರಿಗೆ BMRCL 50 ರೂಪಾಯಿ ದಂಡ ವಿಧಿಸಿದ ಘಟನೆ ನಡೆದಿದೆ. ಪ್ಲಾರ್ಟ್ ಫಾರ್ಮ್ನಲ್ಲಿ 20 ನಿಮಿಷಕ್ಕಿಂತ ಹೆಚ್ಚು ಸಮಯ ಇದ್ದರೆ ದಂಡ ಕಟ್ಟಬೇಕು ಎಂಬ ನಿಯಮ ಇದೆ. ಆದರೆ ಇದು ಹೊಸ ಮಾರ್ಗಕ್ಕೆ ಅನ್ವಯಿಸುತ್ತಿರುವ ಕಾರಣ ಸಮಸ್ಯೆ ಉಂಟಾಗುವ ನಿರೀಕ್ಷೆ ಇದೆ. ಏಕೆಂದರೆ ಯೆಲ್ಲೋ ಮಾರ್ಗದಲ್ಲಿ ಒಂದು ರೈಲು ಬಂದು ಹೋದ ಬಳಿಕ ಇನ್ನೊಂದು ರೈಲು ಬರಲು 25 ನಿಮಿಷ ಬೇಕು. ಹಾಗಾದ್ರೆ ಹೆಚ್ಚಿನ ಜನದಟ್ಟಣೆ ಇದ್ದಾಗ ರೈಲು ಮಿಸ್ ಮಾಡಿಕೊಂಡವರೆಲ್ಲ ದಂಡ ಕಟ್ಟಬೇಕೆ? ಎಂಬ ಅನುಮಾನ, ಸಮಸ್ಯೆ ಪ್ರಯಾಣಿಕರಿಗೆ ಎದುರಾಗಿದೆ.
ಅಸಲಿಗೆ ಹಳದಿ ಮಾರ್ಗದಲ್ಲಿ ಆಗಿದ್ದೇನು?
ಆರ್ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಸಂಚರಿಸಲು ಪ್ರಯಾಣಿಕರೊಬ್ಬರು ಟಿಕೆಟ್ ಪಡೆದು ಒಳ ಬಂದಿದ್ದಾರೆ. ಆದರೆ ಮೆಟ್ರೋ ರೈಲು ರಶ್ ಇದ್ದ ಕಾರಣ ಆ ರೈಲನ್ನು ಮಿಸ್ ಮಾಡಿಕೊಂಡಿದ್ದಾರೆ. ಮುಂದಿನ ರೈಲು ಬರಲು 25 ನಿಮಿಷ ಬೇಕಾಗುತ್ತದೆ. ಇಲ್ಲಿ ಕಾಯುವ ಬದಲು ನಿಲ್ದಾಣದಿಂದ ಹೊರ ಬರಲು ಅವರು ನಿರ್ಧರಿಸಿದ್ದಾರೆ. ಹೊರ ಬರುವಾಗ ನೀವು 20 ನಿಮಿಷಕ್ಕು ಹೆಚ್ಚು ಸಮಯ ಪ್ಲಾಟ್ಫಾರ್ಮ್ನಲ್ಲಿದ್ದೀರಿ ಎಂದು 50 ರೂಪಾಯಿ ದಂಡ ವಿಧಿಸಲಾಗಿದೆ.
ನೇರಳೆ ಮಾರ್ಗ, ಹಸಿರು ಮಾರ್ಗದಲ್ಲಿ ಬೆಳಗ್ಗೆ ಮತ್ತು ಸಂಜೆ ಪೀಕ್ ಸಮಯದಲ್ಲಿ ಮೂರು ನಿಮಿಷಕ್ಕೆ ಒಂದರಂತೆ ರೈಲು ಸಂಚರಿಸುತ್ತವೆ. ದಟ್ಟಣೆ ವೇಳೆ ಶಾರ್ಟ್ ಲೂಪ್ ರೈಲು ಸಂಚಾರ ವ್ಯವಸ್ಥೆ ಸಹ ಇದೆ. ಸಾಮಾನ್ಯ ಸಮಯದಲ್ಲಿ ಪ್ರತಿ ದಿನ ಈ ಮಾರ್ಗಗಳಲ್ಲಿ 10 ನಿಮಿಷಕ್ಕೆ ಒಂದಂತೆ ರೈಲು ಸಂಚರಿಸುತ್ತವೆ. ಇಲ್ಲಿ ಹೆಚ್ಚು ಸಮಯ ಕಾಯ್ದರೆ ದಂಡ ವಿಧಿಸಿದರೆ ಸರಿ ಎನ್ನಬಹುದು. ಆದರೆ ಮೂರೇ ರೈಲು ಓಡಾಡುವ ಹೊಸ ಮಾರ್ಗದಲ್ಲಿ ಈ ನಿಮಯ ಜಾರಿಯಿಂದ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗುತ್ತಿದೆ.
ನಾನು ಮೆಟ್ರೋ ಬಿಟ್ಟು ಬಿಎಂಟಿಸಿ ಬಸ್ನಲ್ಲಿ ಸಂಚರಿಸುತ್ತೇನೆ ಎಂದು ದಂಡ ಕಟ್ಟಿದ ಪ್ರಯಾಣಿಕ ಬೇಸರ ವ್ಯಕ್ತಪಡಿಸಿದ್ದಾರೆ. ಆಕ್ರೋಶ ಹೊರ ಹಾಕಿದ್ದಾರೆ. ಹಳದಿ ಮಾರ್ಗದಲ್ಲಿ ಮೆಟ್ರೋ ರೈಲಿನ ಕೊರತೆ ಇದೆ. ಒಂದು ರೈಲಿನಲ್ಲಿ ಪ್ರಯಾಣಿಸಲು ಜನರು 25 ನಿಮಿಷ ಕಾಯಬೇಕಿದೆ. ಹೀಗಿದ್ದಾಗ ದಂಡ ನಿಯಮ ಬೇಕಾ? ಎಂದು ಜನರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ BMRCL ಉತ್ತರಿಸಬೇಕಿದೆ.
-
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ












Click it and Unblock the Notifications