Namma Metro: ಹಳದಿ ಮಾರ್ಗದಲ್ಲಿ ಏನಿದು ಹೊಸ ಗೊಂದಲ! ಪ್ರಯಾಣಿಕರು ದಂಡ ಕಟ್ಟಬೇಕೆ?
ಬೆಂಗಳೂರು, ಆಗಸ್ಟ್ 14: ಬೆಂಗಳೂರಿನ ನಾಗರಿಕರು ಮೂರು ವರ್ಷಗಳಿಂದ ಕಾಯುತ್ತಿದ್ದ 19 ಕಿಲೋ ಮೀಟರ್ 'ಹಳದಿ ಮೆಟ್ರೋ ಹೊಸ ಮಾರ್ಗ'ವನ್ನು ಆ.10ರಂದು ಪ್ರದಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಜನರ ಕಾಯುವಿಕೆ ಅಂತ್ಯಗೊಂಡ ಬೆನ್ನಲ್ಲೆ, ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ. ಒಟ್ಟು ಮೆಟ್ರೋ ಪ್ರಯಾಣಿಕರ ಸಂಖ್ಯೆ 10 ಲಕ್ಷ ದಾಟಿದೆ. ಇದೀಗ ಹಳದಿ ಮಾರ್ಗದಲ್ಲಿ ಹೊಸ ಗೊಂದಲ ಸೃಷ್ಟಿಯಾಗಿದೆ. ಹೆಚ್ಚು ಹೊತ್ತು ಕಾಯ್ದರೆ ಪ್ರಯಾಣಿಕರು ದಂಡ ಕಟ್ಟುವ ಅನಿವಾರ್ಯತೆ ಎದುರಿಸುವ ಸಾಧ್ಯತೆ ಇದೆ.
ಹೌದು, ಇದಕ್ಕೆ ನಿದರ್ಶನವೆಂಬಂತೆ ಪ್ರಯಾಣಿಕರೊಬ್ಬರು ಆರ್.ವಿ.ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗದಲ್ಲಿ ರೈಲು ಮಿಸ್ ಮಾಡಿಕೊಂಡಿದ್ದಕ್ಕಾಗಿ ದಂಡ ಕಟ್ಟಿದ್ದಾರೆ. ಈ ಮಾರ್ಗದಲ್ಲಿ 25 ನಿಮಿಷಕ್ಕೆ ಒಂದರಂತೆ ಮೂರು ರೈಲುಗಳು ಕಾರ್ಯಾಚರಣೆ ಮಾಡುತ್ತಿವೆ. ನಾಲ್ಕನೇ ರೈಲಿನ ಮೂರು ಬೋಗಿಗಳು ಈಗಷ್ಟೇ ಬೆಂಗಳೂರಿಗೆ ಆಗಮಿಸಿವೆ. ಹೆಚ್ಚುವರಿ ರೈಲುಗಳು ಕಾರ್ಯ ನಿರ್ವಹಣೆಗೆ ಸಮಯ ಹಿಡಯುಲಿದೆ.

ಹೀಗಿರುವಾಗ ಮಂಗಳವಾರ (ಆ.13) ಪ್ರಯಾಣಿಕರೊಬ್ಬು ಪ್ಲಾಟ್ಫಾರ್ಮ್ನಲ್ಲಿ 20 ನಿಮಿಷಕ್ಕೂ ಹೆಚ್ಚು ಸಮಯ ಕಾಯ್ದಿದ್ದಕ್ಕೆ ಅವರಿಗೆ BMRCL 50 ರೂಪಾಯಿ ದಂಡ ವಿಧಿಸಿದ ಘಟನೆ ನಡೆದಿದೆ. ಪ್ಲಾರ್ಟ್ ಫಾರ್ಮ್ನಲ್ಲಿ 20 ನಿಮಿಷಕ್ಕಿಂತ ಹೆಚ್ಚು ಸಮಯ ಇದ್ದರೆ ದಂಡ ಕಟ್ಟಬೇಕು ಎಂಬ ನಿಯಮ ಇದೆ. ಆದರೆ ಇದು ಹೊಸ ಮಾರ್ಗಕ್ಕೆ ಅನ್ವಯಿಸುತ್ತಿರುವ ಕಾರಣ ಸಮಸ್ಯೆ ಉಂಟಾಗುವ ನಿರೀಕ್ಷೆ ಇದೆ. ಏಕೆಂದರೆ ಯೆಲ್ಲೋ ಮಾರ್ಗದಲ್ಲಿ ಒಂದು ರೈಲು ಬಂದು ಹೋದ ಬಳಿಕ ಇನ್ನೊಂದು ರೈಲು ಬರಲು 25 ನಿಮಿಷ ಬೇಕು. ಹಾಗಾದ್ರೆ ಹೆಚ್ಚಿನ ಜನದಟ್ಟಣೆ ಇದ್ದಾಗ ರೈಲು ಮಿಸ್ ಮಾಡಿಕೊಂಡವರೆಲ್ಲ ದಂಡ ಕಟ್ಟಬೇಕೆ? ಎಂಬ ಅನುಮಾನ, ಸಮಸ್ಯೆ ಪ್ರಯಾಣಿಕರಿಗೆ ಎದುರಾಗಿದೆ.
ಅಸಲಿಗೆ ಹಳದಿ ಮಾರ್ಗದಲ್ಲಿ ಆಗಿದ್ದೇನು?
ಆರ್ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಸಂಚರಿಸಲು ಪ್ರಯಾಣಿಕರೊಬ್ಬರು ಟಿಕೆಟ್ ಪಡೆದು ಒಳ ಬಂದಿದ್ದಾರೆ. ಆದರೆ ಮೆಟ್ರೋ ರೈಲು ರಶ್ ಇದ್ದ ಕಾರಣ ಆ ರೈಲನ್ನು ಮಿಸ್ ಮಾಡಿಕೊಂಡಿದ್ದಾರೆ. ಮುಂದಿನ ರೈಲು ಬರಲು 25 ನಿಮಿಷ ಬೇಕಾಗುತ್ತದೆ. ಇಲ್ಲಿ ಕಾಯುವ ಬದಲು ನಿಲ್ದಾಣದಿಂದ ಹೊರ ಬರಲು ಅವರು ನಿರ್ಧರಿಸಿದ್ದಾರೆ. ಹೊರ ಬರುವಾಗ ನೀವು 20 ನಿಮಿಷಕ್ಕು ಹೆಚ್ಚು ಸಮಯ ಪ್ಲಾಟ್ಫಾರ್ಮ್ನಲ್ಲಿದ್ದೀರಿ ಎಂದು 50 ರೂಪಾಯಿ ದಂಡ ವಿಧಿಸಲಾಗಿದೆ.
ನೇರಳೆ ಮಾರ್ಗ, ಹಸಿರು ಮಾರ್ಗದಲ್ಲಿ ಬೆಳಗ್ಗೆ ಮತ್ತು ಸಂಜೆ ಪೀಕ್ ಸಮಯದಲ್ಲಿ ಮೂರು ನಿಮಿಷಕ್ಕೆ ಒಂದರಂತೆ ರೈಲು ಸಂಚರಿಸುತ್ತವೆ. ದಟ್ಟಣೆ ವೇಳೆ ಶಾರ್ಟ್ ಲೂಪ್ ರೈಲು ಸಂಚಾರ ವ್ಯವಸ್ಥೆ ಸಹ ಇದೆ. ಸಾಮಾನ್ಯ ಸಮಯದಲ್ಲಿ ಪ್ರತಿ ದಿನ ಈ ಮಾರ್ಗಗಳಲ್ಲಿ 10 ನಿಮಿಷಕ್ಕೆ ಒಂದಂತೆ ರೈಲು ಸಂಚರಿಸುತ್ತವೆ. ಇಲ್ಲಿ ಹೆಚ್ಚು ಸಮಯ ಕಾಯ್ದರೆ ದಂಡ ವಿಧಿಸಿದರೆ ಸರಿ ಎನ್ನಬಹುದು. ಆದರೆ ಮೂರೇ ರೈಲು ಓಡಾಡುವ ಹೊಸ ಮಾರ್ಗದಲ್ಲಿ ಈ ನಿಮಯ ಜಾರಿಯಿಂದ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗುತ್ತಿದೆ.
ನಾನು ಮೆಟ್ರೋ ಬಿಟ್ಟು ಬಿಎಂಟಿಸಿ ಬಸ್ನಲ್ಲಿ ಸಂಚರಿಸುತ್ತೇನೆ ಎಂದು ದಂಡ ಕಟ್ಟಿದ ಪ್ರಯಾಣಿಕ ಬೇಸರ ವ್ಯಕ್ತಪಡಿಸಿದ್ದಾರೆ. ಆಕ್ರೋಶ ಹೊರ ಹಾಕಿದ್ದಾರೆ. ಹಳದಿ ಮಾರ್ಗದಲ್ಲಿ ಮೆಟ್ರೋ ರೈಲಿನ ಕೊರತೆ ಇದೆ. ಒಂದು ರೈಲಿನಲ್ಲಿ ಪ್ರಯಾಣಿಸಲು ಜನರು 25 ನಿಮಿಷ ಕಾಯಬೇಕಿದೆ. ಹೀಗಿದ್ದಾಗ ದಂಡ ನಿಯಮ ಬೇಕಾ? ಎಂದು ಜನರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ BMRCL ಉತ್ತರಿಸಬೇಕಿದೆ.
-
RCB: ಆರ್ ಸಿಬಿ ತಂಡದ ಅಧಿಕೃತ ಪೇಮೆಂಟ್ಸ್ ಪಾಲುದಾರ ನವಿ ಯುಪಿಐ, ಫ್ಯಾನ್ಸ್ ಗಮನಿಸಿ -
Viral Post: ವಿಮಾನದ ಸೀಟುಗಳ ತುಂಬಾ ಕಸದ ರಾಶಿ: ಪ್ರಯಾಣಿಕರ 'ಸಿವಿಕ್ ಸೆನ್ಸ್' ಪ್ರಶ್ನಿಸಿದ ಮಹಿಳೆ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್












Click it and Unblock the Notifications