ಕುಮಾರಣ್ಣನ ಬಜೆಟ್ಗೆ ಬಿಜೆಪಿ ಪ್ರತಿಭಟನೆಯ ಪ್ರತಿಕ್ರಿಯೆ
ಬೆಂಗಳೂರು, ಜುಲೈ 06: ಕುಮಾರಸ್ವಾಮಿ ಅವರು ನಿನ್ನೆ ಮಂಡಿಸಿದ ಕರ್ನಾಟಕ ಬಜೆಟ್ 2018ರಲ್ಲಿ ಕರಾವಳಿ ಜಿಲ್ಲೆಗಳನ್ನು ನಿರ್ಲಕ್ಷ ಮಾಡಿದ್ದಾರೆಂದು ಆರೋಪಿಸಿ ಬಿಜೆಪಿ ಶಾಸಕರು ಇಂದು ವಿಧಾನಸೌಧದ ಹೊರಗೆ ಪ್ರತಿಭಟನೆ ಮಾಡಿದರು.
ವಿಧಾನಸೌಧದ ಹೊರಗಿನ ಗಾಂಧಿ ಪ್ರತಿಮೆ ಎದುರು ಉತ್ತರ ಕನ್ನಡ, ಮಂಗಳೂರು, ಉಡುಪಿ ಜಿಲ್ಲೆಯ ಎಲ್ಲಾ ಶಾಸಕರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ಮಾಡಿದರು.
ಬಜೆಟ್ ಬಗ್ಗೆ ಬಿಜೆಪಿ ಟೀಕೆಗೆ ಕುಮಾರಸ್ವಾಮಿ ಪ್ರತ್ಯುತ್ತರ
ದಕ್ಷಿಣ ಕನ್ನಡದ 7, ಉಡುಪಿಯ 5, ಉತ್ತರ ಕನ್ನಡದ 4 ಶಾಸಕರು ಇನ್ನೂ ಕೆಲವು ಶಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸದನದ ಹೊರಗೆ ಮಾತ್ರವಲ್ಲದೆ ಒಳಗೂ ಕೂಡ ಪ್ರತಿಭಟನೆ ನಡೆಸಲಿದ್ದಾರೆ.
ಇದು ಅಣ್ಣ-ತಮ್ಮಂದಿರ ಬಜೆಟ್: ಯಡಿಯೂರಪ್ಪ ಕಟು ಟೀಕೆ
ಕುಮಾರಸ್ವಾಮಿ ಅವರ ಬಜೆಟ್ನಲ್ಲಿ ಕರಾವಳಿ ಹಾಗೂ ಉತ್ತರ ಕರ್ನಾಟಕ ಭಾಗಗಳಿಗೆ ಅನುದಾನ ನೀಡಲಾಗಿಲ್ಲ ಎಂದು ನಿನ್ನೆಯಿಂದಲೂ ವಿರೋಧ ಪಕ್ಷ ಸೇರಿದಂತೆ ಕೆಲವು ಕಾಂಗ್ರೆಸ್ ಶಾಸಕರೂ ಅಸಮಾಧಾನ ವ್ಯಕ್ತಪಡಿಸಿದ್ದರು.
karnataka budget 2018 hd kumaraswamy bengaluru bjp protest ಕರ್ನಾಟಕ ಬಜೆಟ್ 2018 ಬೆಂಗಳೂರು ಬಿಜೆಪಿ ಪ್ರತಿಭಟನೆ ಕುಮಾರಸ್ವಾಮಿ
English summary
BJP's coastal karnataka MLAs did protest against Karnataka budget 2018. They alleged that Kumaraswamy neglects coastal karnataka.
Story first published: Friday, July 6, 2018, 16:52 [IST]