ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮಹಿಳಾ ಧ್ವನಿ
ಬೆಂಗಳೂರು, ಡಿ. 2: ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣ ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಪುರಭವನದ ಎದುರು ಪ್ರತಿಭಟನೆ ನಡೆಸಿದರು. ಮಾನವ ಸರಪಣಿ ನಿರ್ಮಿಸಿ ರಸ್ತೆ ತಡೆಯಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಯಿತು.
ರಾಜ್ಯ ಸರ್ಕಾರ ಮಹಿಳೆಯರ ಮತ್ತು ಮಕ್ಕಳ ಮೇಲಿನ ಅತ್ಯಾಚಾರ ತಡೆಯುವಲ್ಲಿ ವಿಫಲವಾಗಿದೆ. ಪ್ರತಿನಿತ್ಯ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿವೆ. ಆದರೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಮೌನ ತಾಳಿದ್ದಾರೆ. ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.[ಭ್ರಷ್ಟ ಸಚಿವರನ್ನು ತೊಲಗಿಸಿ, ಬಿಜೆಪಿ ಪ್ರತಿಭಟನೆ]
ವಿಧಾನಪರಿಷತ್
ಸದಸ್ಯೆ,
ಚಿತ್ರನಟಿ
ತಾರಾ,
ಮಾಳವಿಕಾ
ಅವಿನಾಶ್
ಸೇರಿದಂತೆ
ಬಿಜೆಪಿ
ಮಹಿಳಾ
ಮೋರ್ಚಾ
ಕಾರ್ಯಕರ್ತರು
ರಾಜ್ಯ
ಸರ್ಕಾರದ
ವಿರುದ್ಧ
ಘೊಷಣೆ
ಕೂಗಿದರು.
ನಾವು
ಈ
ಹಿಂದೆಯೂ
ಹೋರಾಟ
ಮಾಡಿದ್ದೇವು.
ಆದರೆ
ಸರ್ಕಾರ
ಯಾವುದೇ
ಸುರಕ್ಷತಾ
ಕ್ರಮ
ತೆಗೆದುಕೊಂಡ
ದಾಖಲೆಯಿಲ್ಲ.
ಮತ್ತೊಮ್ಮೆ
ಕಾಂಗ್ರೆಸ್
ಸರ್ಕಾರವನ್ನು
ಬಡಿದೆಬ್ಬಿಸಲು
ಪ್ರತಿಭಟನೆ
ಹಮ್ಮಿಕೊಂಡಿದ್ದೇವೆ
ಎಂದು
ಹೇಳಿದರು.
ರಾಜ್ಯದ 9 ಜಿಲ್ಲಾ ಕೇಂದ್ರಗಳಲ್ಲಿ ಜೈಲ್ ಭರೋ ಚಳವಳಿ ಹಮ್ಮಿಕೊಳ್ಳಲಾಗಿದೆ. ಬೇಜಾವಾಬ್ದಾರಿ ಹೇಳಿಕೆ ನೀಡುತ್ತಿರುವ ಗೃಹ ಸಚಿವ ಕೆ.ಜೆ.ಜಾರ್ಜ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.