Vinay Kulkarni: ಕೊಲೆ ಆರೋಪಿಗಳಿಗೆ ರೆಡ್ ಕಾರ್ಪೆಟ್ ‘ಕೈ’ ಸಂಸ್ಕೃತಿ: ಬಿಜೆಪಿ
ಬೆಂಗಳೂರು: ಅತ್ತ ಬಿಜೆಪಿ ವಿರುದ್ಧ ಕಾಂಗ್ರೆಸ್ ಟ್ವೀಟ್ ಮೂಲಕ ಲಿಂಗಾಯತ ಅಸ್ತ್ರ ಪ್ರಯೋಗಿಸುತ್ತಿದೆ, ಇನ್ನೊಂದು ಕಡೆ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಕೂಡ ಹಲವು ಅಸ್ತ್ರಗಳನ್ನ ಪ್ರಯೋಗಿಸಲು ಮುಂದಾಗಿದೆ. ಇದೀಗ ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಹಾಗೂ ಹಾಲಿ ಅಭ್ಯರ್ಥಿ ವಿನಯ್ ಕುಲಕರ್ಣಿ ವಿರುದ್ಧ ಬಿಜೆಪಿ ಟ್ವೀಟ್ ವಾರ್ ಶುರುಮಾಡಿದೆ.
'ಕೊಲೆ ಆರೋಪಿಗಳಿಗೆ ರೆಡ್ ಕಾರ್ಪೆಟ್ ಹಾಕಿ ಟಿಕೆಟ್ ಕೊಟ್ಟು ಆದರಿಸುವುದು @INCKarnatakaದ ಸಂಸ್ಕೃತಿ. ಆದರೆ ನ್ಯಾಯಾಂಗ ವ್ಯವಸ್ಥೆ ಸಮಾಜಘಾತುಕ ವ್ಯಕ್ತಿಗಳನ್ನು ಸುಮ್ಮನೆ ಬಿಡುವುದಿಲ್ಲ ಎನ್ನುವುದಕ್ಕೆ ಧಾರವಾಡದಿಂದ ಗಡಿಪಾರಾಗಿರುವ A1 ಕೊಲೆ ಆರೋಪಿ @vinaykulkarniJH ಅವರೇ ಪ್ರತ್ಯಕ್ಷ ಸಾಕ್ಷಿ #CriminalCongress' ಎಂದು ಟ್ವೀಟ್ ಮಾಡಿದೆ ಬಿಜೆಪಿ. ಇಷ್ಟಕ್ಕೇ ತನ್ನ ಟ್ವೀಟ್ ವಾರ್ ಮಗಿಸದೆ, ವಿನಯ್ ಕುಲಕರ್ಣಿಗೆ ಸಂಬಂಧಿಸಿದ ಹಳೆಯ ವಿಡಿಯೋ ಕೂಡ ಪೋಸ್ಟ್ ಮಾಡಲಾಗಿದೆ.

'ಬೇಲ್ ಮೇಲೆ ಹೊರಗಿರುವ..'
'ಬಿಜೆಪಿ ಕಾರ್ಯಕರ್ತನ ಕೊಲೆಯ ಕೇಸಿನಲ್ಲಿ ಹಿಂಡಲಗಾ ಜೈಲು ಸೇರಿ ಬೇಲ್ ಮೇಲೆ ಹೊರಗಿರುವ
@vinaykulkarniJHಗೆ ಧಾರವಾಡ ಜಿಲ್ಲೆಗೆ ನ್ಯಾಯಾಲಯ ಪ್ರವೇಶವನ್ನು ನಿರಾಕರಿಸಿದೆ. ಈತನ ವಿರುದ್ಧ 90 ಸಾಕ್ಷಿಗಳಿದ್ದು, ಚುನಾವಣೆ ಸಮಯದಲ್ಲಿ ಸಾಕ್ಷಿನಾಶ ಮಾಡುವುದಕ್ಕೆ ನಿಂತಿದ್ದ ಗೂಂಡಾಗಳಿಗೆ ಇದರಿಂದ ಹಿನ್ನಡೆಯಾಗಿದೆ. #CriminalCongress' ಎಂಬ ಗಂಭೀರ ಆರೋಪವನ್ನ ಕರ್ನಾಟಕ ಕಾಂಗ್ರೆಸ್ ವಿರುದ್ಧ ಟ್ವೀಟ್ ಮೂಲಕ ಮಾಡಿದೆ ಕರ್ನಾಟಕ ಬಿಜೆಪಿ ಘಟಕ.
ಕೊಲೆ ಆರೋಪಿಗಳಿಗೆ ರೆಡ್ ಕಾರ್ಪೆಟ್ ಹಾಕಿ ಟಿಕೆಟ್ ಕೊಟ್ಟು ಆದರಿಸುವುದು @INCKarnatakaದ ಸಂಸ್ಕೃತಿ.
— BJP Karnataka (@BJP4Karnataka) April 19, 2023
ಆದರೆ ನ್ಯಾಯಾಂಗ ವ್ಯವಸ್ಥೆ ಸಮಾಜಘಾತುಕ ವ್ಯಕ್ತಿಗಳನ್ನು ಸುಮ್ಮನೆ ಬಿಡುವುದಿಲ್ಲ ಎನ್ನುವುದಕ್ಕೆ ಧಾರವಾಡದಿಂದ ಗಡಿಪಾರಾಗಿರುವ A1 ಕೊಲೆ ಆರೋಪಿ @vinaykulkarniJH ಅವರೇ ಪ್ರತ್ಯಕ್ಷ ಸಾಕ್ಷಿ.#CriminalCongress
1/4 pic.twitter.com/fQT1kU1Nt2
'ಎಂತೆಂಥ ಮುತ್ತುಗಳನ್ನು ಕಣಕ್ಕಿಳಿಸಿದೆ'
'#ReverseGearCongress ಎಂತೆಂಥ ಮುತ್ತುಗಳನ್ನು ಕಣಕ್ಕಿಳಿಸಿದೆ ಎನ್ನುವುದರ ತಾಜಾ ಮತ್ತು ಅತ್ಯುತ್ತಮ ಉದಾಹರಣೆಯೇ ಈ ವಿನಯ್ ಕುಲಕರ್ಣಿ. ಕರ್ತವ್ಯನಿರತ ಸರ್ಕಾರಿ ವೈದ್ಯರ ಮೇಲೆ ಖುದ್ದು ಹಲ್ಲೆ ಮಾಡಿದ್ದ ಈತನಿಂದ ಸಾಮಾನ್ಯ ಜನ ಯಾವ ಸುರಕ್ಷತೆ ಬಯಸಿಯಾರು? #CriminalCongress' ಎಂದು ಹಳೆಯ ವಿಡಿಯೋ ಒಂದನ್ನ ತನ್ನ ಟ್ವೀಟ್ನಲ್ಲಿ ಪೋಸ್ಟ್ ಮಾಡಿದೆ ಕರ್ನಾಟಕ ಬಿಜೆಪಿ ಘಟಕ. ಇನ್ನು ಈ ಟ್ವೀಟ್ ಕುರಿತು ಈಗಾಗಲೇ ಸಾಕಷ್ಟು ಚರ್ಚೆಗಳು ಶುರುವಾಗಿವೆ.
ಬಿಜೆಪಿ ಕಾರ್ಯಕರ್ತನ ಕೊಲೆಯ ಕೇಸಿನಲ್ಲಿ ಹಿಂಡಲಗಾ ಜೈಲು ಸೇರಿ ಬೇಲ್ ಮೇಲೆ ಹೊರಗಿರುವ @vinaykulkarniJHಗೆ ಧಾರವಾಡ ಜಿಲ್ಲೆಗೆ ನ್ಯಾಯಾಲಯ ಪ್ರವೇಶವನ್ನು ನಿರಾಕರಿಸಿದೆ.
— BJP Karnataka (@BJP4Karnataka) April 19, 2023
ಈತನ ವಿರುದ್ಧ 90 ಸಾಕ್ಷಿಗಳಿದ್ದು, ಚುನಾವಣೆ ಸಮಯದಲ್ಲಿ ಸಾಕ್ಷಿನಾಶ ಮಾಡುವುದಕ್ಕೆ ನಿಂತಿದ್ದ ಗೂಂಡಾಗಳಿಗೆ ಇದರಿಂದ ಹಿನ್ನಡೆಯಾಗಿದೆ.#CriminalCongress
2/4
ಮಾಜಿ ಸಿಎಂಗೆ ಬಿಜೆಪಿ ತಿರುಗೇಟು!
'ಅಂದು ಧರ್ಮವನ್ನು ಒಡೆಯಲು ಯತ್ನಿಸಿದ ಬಾದಾಮಿ ಶಾಸಕ @siddaramaiahನವರ ಬೆನ್ನಿಗೆ ನಿಂತಿದ್ದು ಇದೇ @vinaykulkarniJH. ಇಂದು ಕಂಠಮಟ್ಟ ಕುಡಿದ ಅಮಲಿನಲ್ಲಿ ಸ್ವಾಮೀಜಿಗಳಿಗೆ ಕರೆ ಮಾಡಿ ಧಮಕಿ ಹಾಕಿ ತಮ್ಮ ಉತ್ತರ ಕುಮಾರನ ಪೌರುಷ ತೋರಿಸಿದ ಈತನ ಬೆನ್ನಿಗಿರುವ #CriminalCongress ಅನ್ನು ರಾಜ್ಯದ ಲಿಂಗಾಯತ ಸಮುದಾಯ ಕ್ಷಮಿಸುವುದಿಲ್ಲ.' ಎಂದು ಪೋಸ್ಟ್ ಹಾಕುವ ಮೂಲಕ ಹೊಸ ಅಸ್ತ್ರ ಪ್ರಯೋಗ ಮಾಡಿದೆ ಬಿಜೆಪಿ.
#ReverseGearCongress ಎಂತೆಂಥ ಮುತ್ತುಗಳನ್ನು ಕಣಕ್ಕಿಳಿಸಿದೆ ಎನ್ನುವುದರ ತಾಜಾ ಮತ್ತು ಅತ್ಯುತ್ತಮ ಉದಾಹರಣೆಯೇ ಈ ವಿನಯ್ ಕುಲಕರ್ಣಿ.
— BJP Karnataka (@BJP4Karnataka) April 19, 2023
ಕರ್ತವ್ಯನಿರತ ಸರ್ಕಾರಿ ವೈದ್ಯರ ಮೇಲೆ ಖುದ್ದು ಹಲ್ಲೆ ಮಾಡಿದ್ದ ಈತನಿಂದ ಸಾಮಾನ್ಯ ಜನ ಯಾವ ಸುರಕ್ಷತೆ ಬಯಸಿಯಾರು? #CriminalCongress
3/4 pic.twitter.com/e157KnKWsy
ಕಾಂಗ್ರೆಸ್ ಕೂಡ ಬೆಳಗ್ಗೆ ಬಿಜೆಪಿ ವಿರುದ್ಧ ಟ್ವೀಟ್ ಒಂದನ್ನ ಮಾಡಿ, ಉತ್ತರ ಪ್ರದೇಶ ಮಾದರಿ ಎಂಬ ಕೇಸರಿ ಕಲಿಗಳ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಈಗ ಬಿಜೆಪಿಯ ಟ್ವೀಟ್ ಅದೇ ಟ್ವೀಟ್ಗೆ ಕೌಂಟರ್ ಕೊಟ್ಟಂತೆ ಕಾಣುತ್ತಿದೆ. 'ಅತ್ಯಾಚಾರ, ಅನಾಚಾರಗಳ ರಾಜಧಾನಿ ಎಂದೇ ಖ್ಯಾತಿ ಪಡೆದ ಉತ್ತರ ಪ್ರದೇಶವು @BJP4Karnatakaಗೆ ಮಾದರಿಯಂತೆ.' ಎಂದು ಕಾಂಗ್ರೆಸ್ ಬಿಜೆಪಿ ನಾಯಕನ್ನು ಕೆಣಕಿತ್ತು.
ಅಂದು ಧರ್ಮವನ್ನು ಒಡೆಯಲು ಯತ್ನಿಸಿದ ಬಾದಾಮಿ ಶಾಸಕ @siddaramaiahನವರ ಬೆನ್ನಿಗೆ ನಿಂತಿದ್ದು ಇದೇ @vinaykulkarniJH.
— BJP Karnataka (@BJP4Karnataka) April 19, 2023
ಇಂದು ಕಂಠಮಟ್ಟ ಕುಡಿದ ಅಮಲಿನಲ್ಲಿ ಸ್ವಾಮೀಜಿಗಳಿಗೆ ಕರೆ ಮಾಡಿ ಧಮಕಿ ಹಾಕಿ ತಮ್ಮ ಉತ್ತರ ಕುಮಾರನ ಪೌರುಷ ತೋರಿಸಿದ ಈತನ ಬೆನ್ನಿಗಿರುವ #CriminalCongress ಅನ್ನು ರಾಜ್ಯದ ಲಿಂಗಾಯತ ಸಮುದಾಯ ಕ್ಷಮಿಸುವುದಿಲ್ಲ.
4/4
ಒಟ್ಟಾರೆ ಮತದಾನಕ್ಕೆ ಕೌಂಟ್ಡೌನ್ ಶುರುವಾಗಿರುವ ಬೆನ್ನಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಟ್ವೀಟ್ ವಾರ್ ಬಲು ಜೋರಾಗಿದೆ. ಈ ನಡುವೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟಿರುವುದು ಬಿಜೆಪಿ ನಾಯಕರನ್ನು ಕೆರಳಿಸಿದೆ. ಇದರ ಜೊತೆಗೆ ಲಕ್ಷ್ಮಣ ಸವದಿ ವಿಚಾರ ಇಟ್ಟುಕೊಂಡು ಬಿಜೆಪಿಗೆ ತಿರುಗೇಟು ನೀಡುತ್ತಿದ್ದ ಕಾಂಗ್ರೆಸ್ ವಿರುದ್ಧ ಇದೀಗ ಬಿಜೆಪಿ ಬೇರೆಯದ್ದೇ ಅಸ್ತ್ರ ಪ್ರಯೋಗಿಸಿದೆ. ಇಷ್ಟೆಲ್ಲದರ ನಡುವೆ ರಾಜ್ಯದಲ್ಲಿ ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಬಿಜೆಪಿ ಟ್ವೀಟ್ಗೆ ಕಾಂಗ್ರೆಸ್ ಉತ್ತರ ಹೇಗಿರುತ್ತೆ ಎಂಬುದನ್ನ ಕಾದು ನೋಡಬೇಕು.
-
ಮಾರ್ಚ್ 19ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಇನ್ಮುಂದೆ KPSC ಮೂಲಕ ಪ್ರತಿ ವರ್ಷ ಗ್ರೂಪ್ A, B ಅಧಿಕಾರಿಗಳ ನೇಮಕಾತಿ: ಕೃಷ್ಣ ಬೈರೇಗೌಡ ಸ್ಪಷ್ಟನೆ -
ಔಷಧಿ ಪೂರೈಸುವ ಕೆಸ್ಎಂಸಿಎಲ್ಗೆ ಐಎಎಸ್ ಅಧಿಕಾರಿ ಮುಖ್ಯಸ್ಥ, ಇ-ಔಷಧಿ ಸಾಫ್ಟವೇರ್ ಜಾರಿ: ದಿನೇಶ್ ಗುಂಡೂರಾವ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ












Click it and Unblock the Notifications