Bengaluru weather update: ಜನವರಿ 14ರವರೆಗೆ ವಿಪರೀತ ಚಳಿ, ದಟ್ಟ ಮಂಜು: ಹವಾಮಾನ ಮುನ್ಸೂಚನೆ
ಬೆಂಗಳೂರು, ಜನವರಿ 09: ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಸಹ ಅಲ್ಲಲ್ಲಿ ಮಳೆ ಬರಲಿದೆ. ಇತ್ತೀಚೆಗೆ ಚಳಿ ಹೆಚ್ಚಾಗುತ್ತಿದೆ. ಜನವರಿ 14ರವರೆಗೆ ನಗರವು ಅತ್ಯಧಿಕ ಚಳಿಗೆ ಸಾಕ್ಷಿಯಾಗಲಿದೆ. ಹಾಗಾದರೆ ಚಳಿ, ತಾಪಮಾನ ಪ್ರಮಾಣ, ವಾತಾವರಣ ಹೇಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯ ವಿವರ ಇಲ್ಲಿದೆ.
ವಾತಾವರದಲ್ಲಿನ ತೀವ್ರ ಸ್ವರೂಪದ ಬದಲಾವಣೆಗಳು, ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವು ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ಚಳಿಗಾಲದ ಕೊನೆಯಲ್ಲಿ ಮಳೆಗಾಲದ ವಾತಾವರಣ ಸೃಷ್ಟಿಯಾಗುವಂತೆ ಮಾಡಿದೆ.

ಬಿರು ಬಿಸಿಲು ಕಂಡು ಬಂದಿದ್ದ ಉದ್ಯಾನನಗರಿ ಬೆಂಗಳೂರಿನಲ್ಲಿ ಎರಡು ದಿನದಿಂದ ತಂಪು ವಾತಾವರಣ, ಅತ್ಯಧಿಕ ಚಳಿ ಸೃಷ್ಟಿಯಾಗಿದೆ. ಅಲ್ಲದೇ ಎರಡು ದಿನದಿಂದ ನಗರದ ವಿವಿಧೆಡೆ ಸೋನೆ ಮಳೆ ಬೀಳುತ್ತಿದೆ. ಭಾನುವಾರ ಸಂಜೆಯಿಂದ ಸುರಿದ ತುಂತುರು ಮಳೆ ಇದೀಗ ಮಂಗಳವಾರವು ಮುಂದುವರಿಯಲಿದೆ. ಒಂದೆರಡು ಕಡೆಗಳಲ್ಲಿ ಜೋರು ಮಳೆಯಾಗುವ ಸಾಧ್ಯತೆಗಳು ಇವೆ ಎಂದು ಐಎಂಡಿ ತಿಳಿಸಿದೆ.
ನಾಳೆಯಿಂದ ಚಳಿ ಹೆಚ್ಚಳ: ದಟ್ಟ ಮಂಜು
ಇಂದು ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇದೆ. ಈಗಲೇ ಆಗಲೇ ಮಳೆ ಬರುವಂತೆ ಭಾಸವಾಗುತ್ತಿದೆ. ಬಿಸಿಲಿನ ದರ್ಶನ ಇವತ್ತು ಅಪರೂಪ ಎನ್ನಬಹುದು. ಅದೇ ರೀತಿ ಬುಧವಾರದಿಂದ ಬೆಂಗಳೂರಿನಲ್ಲಿ ಹಂತ ಹಂತವಾಗಿ ಚಳಿ ಹೆಚ್ಚಾಗಲಿದೆ. ಈ ವೇಳೆ ತಾಪಮಾನ ಇಳಿಕೆ ಆಗಲಿದೆ. ಬೆಳಗ್ಗೆ ದಟ್ಟ ಮಂಜು ಕವಿಯುವ ಲಕ್ಷಣಗಳು ಇವೆ. ಅತ್ಯಧಿಕ ತಂಪು ಗಾಳಿ ಬೀಸಲಿದ್ದು, ಚಳಿ ಏರಿಕೆ ಆಗಲಿದೆ.

ನಗರದಲ್ಲಿ ತಾಪಮಾನ-ಚಳಿ ಮುನ್ಸೂಚನೆ ಹೀಗಿದೆ
ಜನವರಿ 9 ರಿಂದ 14ರವರೆಗೆ ಮಬ್ಬು ವಾತಾವರಣ ಜೊತೆಗೆ ತೇವಾಂಶ ಭರಿತ ಗಾಳಿ ಬೀಸಲಿದೆ. ಇದರಿಂದ ವಾತಾವರಣ ಇನ್ನಷ್ಟು ಶೀತಮಯವಾಗಲಿದೆ. ಈಗಿರುವ ಕನಿಷ್ಠ ತಾಪಮಾನ 20-18 ಡಿಗ್ರಿ ಸೆಲ್ಸಿಯಸ್ ಮುಂದಿನ ದಿನಗಳಲ್ಲಿ 17 ಡಿಗ್ರಿ ಸೆಲ್ಸಿಯಸ್ಗೆ ಇಳಿಕೆ ಆಗಲಿದೆ.
ಇನ್ನೂ ನಗರದ ಗರಿಷ್ಠ ತಾಪಮಾನ ಎರಡು ದಿನದಿಂದ 23 ಡಿಗ್ರಿ ಆಸುಪಾಸಲ್ಲಿದೆ. ಇದು ಜನವರಿ 14ರ ಹೊತ್ತಿಗೆ ಕ್ರಮೇಣ 28 ಡಿಗ್ರಿ ಸೆಲ್ಸಿಯಸ್ವರೆಗೆ ಏರಿಕೆ ಆಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಎರಡು ವಾರ್ಡ್ಗಳಲ್ಲಿ ಸೋಮವಾರ ತುಸು ಬಿರುಸು ಮಳೆ ಆಗಿದೆ. ಉಳಿದಂತೆ ಸೋನೆ ಮಳೆ ಆಗಾಗ ಕಂಡು ಬಂದಿದೆ. ಇದೇ ವೇಳೆ ರಾಜ್ಯದ ಮಂಗಳೂರು, ಪಣಂಬೂರು, ತಾಳಗುಪ್ಪ, ಅಂಕೋಲಾ, ಕೊಪ್ಪಾದಲ್ಲಿ ಅತ್ಯಧಿಕ ಮಳೆ ಆಗಲಿದೆ..
ಅದೇ ರೀತಿ ಬೆಂಗಳೂರಿನ ಒಂದೆರಡು ಕಡೆಗಳಲ್ಲಿ ಸೋಮವಾರ ವಿವಿಧ ಬಡಾವಣೆಗಳಲ್ಲಿ ತುಂತರು-ಸೋನೆ ಮಳೆ ದಾಖಲಾಯಿತು ಎಂದು ಐಎಂಡಿ ವರದಿ ತಿಳಿಸಿದೆ.
-
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Bengaluru Rain: ಬೆಂಗಳೂರಲ್ಲಿ ಮಳೆ ಬಂದಾಗ ಪವರ್ ಕಟ್ ಆಗುವುದ್ಯಾಕೆ, ಡಾಕ್ಟರ್ ಪ್ರಶ್ನೆಗೆ ನೆಟ್ಟಿಗರು ಹೇಳಿದ್ದೇನು -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ












Click it and Unblock the Notifications