ಸಂಗೀತ, ನೃತ್ಯದ ಮೈತ್ರಿಯಲ್ಲಿ 'ತರಂಗ ಉತ್ಸವ'
ಬೆಂಗಳೂರು, ಅಕ್ಟೋಬರ್, 29 : ನಗರದ ತರಂಗ ಕಲಾ ಅಕಾಡೆಮಿಯು 'ತರಂಗ ಉತ್ಸವ-2015' ಎಂಬ ಎರಡು ದಿನದ ಸಂಗೀತ ಮತ್ತು ನೃತ್ಯ ಹಬ್ಬವನ್ನು ಆಚರಿಸಲು ಮುಂದಾಗಿದ್ದು, ಕಲಾ ರಸಿಕರ ಮನಸ್ಸಿಗೆ ಮುದ ನೀಡಲು ತಯಾರಾಗಿದೆ.
ತರಂಗ ಉತ್ಸವ-2015 ನೃತ್ಯ ಸಮಾರಂಭವು ನಗರದ ಜೆ ಸಿ ರಸ್ತೆಯ ಎಡಿಎ ಕಲಾ ಮಂದಿರದಲ್ಲಿ ಅಕ್ಟೋಬರ್ 31ರ ಶನಿವಾರ ಮತ್ತು ನವೆಂಬರ್ 1ರ ಭಾನುವಾರದಂದು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭರತನಾಟ್ಯ, ಒಡಿಸ್ಸಿ ಹೀಗೆ ನಾನಾ ರಾಜ್ಯದ ನೃತ್ಯಗಳು ಒಂದೇ ವೇದಿಕೆಯಲ್ಲಿ ಸಿಗಲಿದೆ ಎಂದು ತರಂಗ ಕಲಾ ಅಕಾಡೆಮಿಯ ಮುಖ್ಯಸ್ಥರಾದ ಅಪರ್ಣಾ ವಿನೋದ್ ತಿಳಿಸಿದರು.[ಎಂ.ಎಸ್ ಸತ್ಯು ಸೇರಿ 40 ಮಂದಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ]

ತರಂಗ ಉತ್ಸವ-2015 :
ಅಕ್ಟೋಬರ್ 31ರ ಶನಿವಾರ ನಡೆಯುವ ಕಾರ್ಯಕ್ರಮಗಳು :
ಸಂಜೆ - 4.30 ಕ್ಕೆ - ಭರತನಾಟ್ಯ
ಸಂಜೆ - 5 ಕ್ಕೆ - ಜನನಿ ಮುರಳಿ ಮತ್ತು ಪೂರ್ಣಿಮಾ ಕೌಶಿಕ್ (ಭರತನಾಟ್ಯ)
ಸಂಜೆ - 5.40 ಕ್ಕೆ - ನೃತ್ಯಾಂತರ (ಒಡಿಸ್ಸಿ ನೃತ್ಯ)
ಸಂಜೆ - 6.25 ಕ್ಕೆ - ಸಾಕೇತ್ ಮೊಘೆ ಮತ್ತು ಸಿದ್ಧಾರ್ಥ ಬೆಳ್ಮಣ್ಣು (ಹಿಂದೂಸ್ತಾನಿ ಸಂಗೀತ ಜುಗಲ್ ಬಂದಿ)
ಸಂಜೆ - 7.30 ಕ್ಕೆ - ಕರ್ನಾಟಕ ಕಲಾಶ್ರೀ ದೇಬೂರ್ ಶ್ರೀವತ್ಸ (ಕರ್ನಾಟಕ ಸಂಗೀತ)
ನವೆಂಬರ್ 1ರ ಭಾನುವಾರದ ಕಾರ್ಯಕ್ರಮಗಳು :
ಸಂಜೆ - 4.30 ಕ್ಕೆ - ವಿವೇಕ್ ಕೃಷ್ಣ ಮತ್ತು ಅರಣ್ಯ ನರೈನ್ (ಕೊಳಲು ನಾದಕ್ಕೆ ಹೆಜ್ಜೆ ಹಾಕಲಿದ್ದಾರೆ)
ಸಂಜೆ - 5.30 ಕ್ಕೆ - ರಾಧಿಕ ರಾಮಾನುಜಮ್ (ಭರತನಾಟ್ಯ)
ಸಂಜೆ - 6.15 ಕ್ಕೆ - ರಾಧಿಕ ಜೋಶಿ (ಹಿಂದೂಸ್ತಾನಿ ಸಂಗೀತ)
ಸಂಜೆ - 7.15 ಕ್ಕೆ - ಶಂಕರ್ ಕಂದಾಸ್ವಾಮಿ (ಭರತನಾಟ್ಯ)












Click it and Unblock the Notifications