Bengaluru: ನೌಕರಿ ಕಳೆದುಕೊಳ್ಳುವ ಆತಂಕ- ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿರುವ ಶೇ 30 ವೃತ್ತಿಪರರು- ಅಂಕಿಅಂಶ, ಮಾಹಿತಿ
ಬೆಂಗಳೂರು, ಏಪ್ರಿಲ್ 03: ಜಗತ್ತಿನಾದ್ಯಂತ ಹಾಗೂ ಭಾರತದಲ್ಲಿ ನಡೆಯುತ್ತಿರುವ ವಜಾಗಳ ಸರಣಿಯು ವೃತ್ತಿಪರರ ಅದರಲ್ಲೂ ಯುವಜನರ ಮಾನಸಿಕ ಆರೋಗ್ಯದ ಮೇಲೆ ಗಣನೀಯವಾಗಿ ಪರಿಣಾಮ ಬೀರಿದೆ. ಇತ್ತೀಚಿನ ಅಧ್ಯಯನದ ಪ್ರಕಾರ ಸುಮಾರು 30 ಪ್ರತಿಶತದಷ್ಟು ಬೆಂಗಳೂರಿಗರು ಕೆಲಸದಿಂದ ವಜಾಗೊಳಿಸುವ ಬಗ್ಗೆ ಚಿಂತಿತರಾಗಿದ್ದಾರೆ ಮತ್ತು ಅವರು ತಮ್ಮ ಅನಿಶ್ಚಿತ ಭವಿಷ್ಯದ ಬಗ್ಗೆ ಯೋಚಿಸುತ್ತಾ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ.
ವೇಕ್ಫಿಟ್ ನಡೆಸಿದ 'ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್ಕಾರ್ಡ್' ಸಮೀಕ್ಷೆಯ ಪ್ರಕಾರ, ಶೇಕಡಾ 26 ರಷ್ಟು ಬೆಂಗಳೂರಿಗರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ, ಇದು ನಿದ್ರಾಹೀನತೆಯನ್ನು ಉಂಟುಮಾಡುತ್ತದೆ.

ಐಟಿ ನಗರದಲ್ಲಿ ಸುಮಾರು 4000 ವೃತ್ತಿಪರರ ಸಂದರ್ಶನ ನಡೆಸಿದ ಅಧ್ಯಯನವು ಈ ಅಂಕಿಅಂಶವನ್ನು ಬಹಿರಂಗ ಪಡಿಸಿದೆ. ಶೇ 29 ರಷ್ಟು ನಗರದ ನಿವಾಸಿಗಳು ಬೆಳಿಗ್ಗೆ 7 ರಿಂದ 8 ರ ನಡುವೆ ಎಳುತ್ತಾರೆ. ಆದರೂ ಅವರು ರಾತ್ರಿ 11 ರ ನಂತರ ಮಲಗಲು ಹೋಗುತ್ತಾರೆ.
ಪ್ರತಿಕ್ರಿಯಿಸಿದವರಲ್ಲಿ ಸುಮಾರು 60 ಪ್ರತಿಶತದಷ್ಟು ಜನರು ಕೆಲಸ ವೇಳೆಯಲ್ಲಿ ನಿದ್ರಿಸುತ್ತಿದ್ದಾರೆ. 34 ಪ್ರತಿಶತ ಜನರು ಬೆಳಿಗ್ಗೆ ಉಲ್ಲಾಸದಿಂದ ಇರುವುದಿಲ್ಲವೆಂದು ಹೇಳಿದ್ದಾರೆ.
ಅವರ ಜೀವನಶೈಲಿ ಹಾಗೂ ಬ್ಯೂಜಿಯಾಗಿಡುವ ಡಿಜಿಟಲ್ ಜೀವನವು ನಿದ್ರೆಯ ಬಿಕ್ಕಟ್ಟುಗಳಿಗೆ ಕಾರಣವಾಗುತ್ತದೆ ಎಂದು ಅಧ್ಯಯನವು ಸೂಚಿಸಿದೆ. ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 91 ರಷ್ಟು ಜನರು ನಿದ್ರಿಸುವವರೆಗೂ ತಮ್ಮ ಸ್ಮಾರ್ಟ್ಫೋನ್ಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರಲ್ಲಿ ಶೇಕಡಾ 38 ರಷ್ಟು ಜನರು ಮಲಗಿರುವಾಗ ಸಾಮಾಜಿಕ ಮಾಧ್ಯಮದಲ್ಲಿದ್ದರೆ, ಇತರರು ಅತಿಯಾಗಿ ವಿಡಿಯೊ ನೋಡುವುದು, ಗೇಮ್ಗಳಲ್ಲಿ ತೊಡಿಗಿಕೊಳ್ಳುವುದು ಸೇರಿದಂತೆ ಚಟುವಟಿಕೆಗಳಲ್ಲಿ ನಿರತರಾಗಿರುತ್ತಾರೆ.

ಈ ಅಧ್ಯಯನವು 13 ತಿಂಗಳುಗಳಲ್ಲಿ ಪೂರ್ಣಗೊಂಡಿದೆ. ಇದಕ್ಕೆ ಪ್ರತಿಕ್ರಿಯಿಸಿದವರಲ್ಲಿ 40 ಪ್ರತಿಶತದಷ್ಟು ಜನರು ನಿದ್ರೆಯ ಗುಣಮಟ್ಟವು ಅವರ ಮಲಗುವ ಕೋಣೆಯ ವಾತಾವರಣದಿಂದ ಪ್ರಭಾವಿತವಾಗಿದೆ ಎಂದು ಹೇಳಿದ್ದಾರೆ.
ಇದೇ ಸಮೀಕ್ಷೆಯು ಭಾರತದ ಆರ್ಥಿಕ ರಾಜಧಾನಿ ಮುಂಬೈನಲ್ಲಿಯೂ ನಡೆದಿದೆ. ಇಲ್ಲಿನ ಜನರು ಕೆಲಸದ ವೇಳೆಯಲ್ಲಿ ನಿದ್ರಿಸುವವರ ಸಂಖ್ಯೆ ಹೆಚ್ಚಾಗಿದೆ ಎಂದು ಬಹಿರಂಗಪಡಿಸಿದೆ. ಪ್ರತಿಕ್ರಿಯಿಸಿದವರಲ್ಲಿ ಕೆಲಸದಲ್ಲಿದ್ದಾಗ ಶೇಕಡಾ 61 ಕ್ಕಿಂತ ಹೆಚ್ಚು ಜನರು ತೂಕಡಿಕೆ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇದು 2022 ಕ್ಕೆ ಹೋಲಿಸಿದರೆ ಗಮನಾರ್ಹ ಜಿಗಿತವನ್ನು ಸೂಚಿಸುತ್ತದೆ. ಆ ಸಮಯದಲ್ಲಿ ಇದರ ಎಣಿಕೆ ಪ್ರಮಾಣವು ಶೇಕಡಾ 53 ರಷ್ಟಿತ್ತು. ಮುಂಬೈನಲ್ಲಿ ಬೆಳಿಗ್ಗೆ ದಣಿವು ಮತ್ತು ದಣಿದ ಜನರ ಸಂಖ್ಯೆಯು ಕಳೆದ ವರ್ಷಕ್ಕಿಂತ 34 ಪ್ರತಿಶತದಷ್ಟು ಜಿಗಿತವನ್ನು ದಾಖಲಿಸಿದೆ.
ಜಗತ್ತಿನಾದ್ಯಂತ ಉದ್ಯೋಗಗಳನ್ನು ಕಡಿತಗೊಳಿಸಿದ ಕಂಪನಿಗಳ ಪಟ್ಟಿ ಇಲ್ಲಿದೆ
ಆಲ್ಫಾಬೆಟ್: ಆಲ್ಫಾಬೆಟ್ ಜನವರಿಯಲ್ಲಿ 12,000 ಉದ್ಯೋಗಗಳನ್ನು ಕಡಿತಗೊಳಿಸಿದೆ.
ಮೈಕ್ರೋಸಾಫ್ಟ್: 2023 ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದ ಅಂತ್ಯದ ವೇಳೆಗೆ 10,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಕಂಪನಿಯು ಜನವರಿಯಲ್ಲಿ ಘೋಷಿಸಿತು.

ಅಮೆಜಾನ್: ಜನವರಿಯಲ್ಲಿ 18,000 ಕಾರ್ಪೊರೇಟ್ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದ ಕೆಲವು ತಿಂಗಳ ನಂತರ, ಅಮೆಜಾನ್ ತನ್ನ ಕ್ಲೌಡ್ ಕಂಪ್ಯೂಟಿಂಗ್ ಮತ್ತು ಜಾಹೀರಾತು ಕಂಪನಿಗಳು ಸೇರಿದಂತೆ ವಿವಿಧ ವ್ಯಾಪಾರ ಘಟಕಗಳಲ್ಲಿ 9,000 ಕಾರ್ಪೊರೇಟ್ ಉದ್ಯೋಗಗಳನ್ನು ತೆಗೆದುಹಾಕುವುದಾಗಿ ಘೋಷಿಸಿತು.
ಮೆಟಾ: ಫೇಸ್ಬುಕ್-ಪೋರೆಂಟ್ ಮೆಟಾ ಪ್ಲಾಟ್ಫಾರ್ಮ್ಗಳು ಕಳೆದ ವಾರ 10,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಹೇಳಿದ್ದವು, ಕೇವಲ ನಾಲ್ಕು ತಿಂಗಳ ನಂತರ 11,000 ಉದ್ಯೋಗಿಗಳನ್ನು ತೆಗೆದುಹಾಕಿದೆ. ಎರಡನೇ ಸುತ್ತಿನ ಸಾಮೂಹಿಕ ವಜಾಗಳನ್ನು ಘೋಷಿಸಿದ ಮೊದಲ ದೊಡ್ಡ ತಂತ್ರಜ್ಞಾನ ಕಂಪನಿಯಾಗಿದೆ.
ಟ್ವಿಟರ್: ಬಿಲಿಯನೇರ್ ಎಲೋನ್ ಮಸ್ಕ್ ಅಕ್ಟೋಬರ್ ಅಂತ್ಯದಲ್ಲಿ ಮೈಕ್ರೋಬ್ಲಾಗಿಂಗ್ ಸೈಟ್ ಅನ್ನು ಖರೀದಿಸಿದ ನಂತರ, ಟ್ವಿಟರ್ ತನ್ನ ಮೊದಲ ಸುತ್ತಿನ ವಜಾಗೊಳಿಸುವಿಕೆಯಲ್ಲಿ 3,700 ಜನರನ್ನು ತೆಗೆದುಹಾಕಿದೆ.
ಜೂಮ್: ಸಂವಹನ ತಂತ್ರಜ್ಞಾನ ಸಂಸ್ಥೆ ಜೂಮ್ ಫೆಬ್ರವರಿಯಲ್ಲಿ 1,300 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತು.
ಸ್ಪಾಟಿಫೈ: ಮ್ಯೂಸಿಕ್ ಸ್ಟ್ರೀಮಿಂಗ್ ಸಂಸ್ಥೆ ಸ್ಪಾಟಿಫೈ ಟೆಕ್ನಾಲಜಿ ತನ್ನ ವೆಚ್ಚ ಕಡಿತ ಕ್ರಮಗಳ ಭಾಗವಾಗಿ ತನ್ನ ಉದ್ಯೋಗಿಗಳ ಶೇಕಡಾ ಆರರಷ್ಟನ್ನು ಕಡಿತಗೊಳಿಸುತ್ತಿದೆ ಎಂದು ಹೇಳಿದೆ.
ಆಕ್ಸೆಂಚರ್: ಆಕ್ಸೆಂಚರ್ ಇತ್ತೀಚೆಗೆ 19,000 ಉದ್ಯೋಗಗಳನ್ನು ಅಥವಾ ಅದರ ಉದ್ಯೋಗಿಗಳ ಶೇಕಡಾ 2.5 ರಷ್ಟು ಕಡಿತಗೊಳಿಸುವ ಯೋಜನೆಯನ್ನು ಪ್ರಕಟಿಸಿದೆ.
ಐಬಿಎಂ: ಐಬಿಎಂ ಜನವರಿಯಲ್ಲಿ 3,900 ವಜಾಗಳನ್ನು ಘೋಷಿಸಿತು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications