ಎಲೆಕ್ಟ್ರಾನಿಕ್ಸ್ ಸಿಟಿ ಟ್ರಾಫಿಕ್ಗೆ ಪರಿಹಾರ: ಬೆಳ್ಳಂದೂರು ರಸ್ತೆ-ಕಾರ್ಮೆಲರಾಮ್ ಲೈನ್ ಡಬ್ಲಿಂಗ್ ಕಾಮಗಾರಿ ಪೂರ್ಣ- ವಿವರ
ಬೆಂಗಳೂರು, ನವೆಂಬರ್ 03: ಆರ್ವಿ ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಮೆಟ್ರೊ ಮಾರ್ಗದ ಕಾರ್ಯಾರಂಭವನ್ನು ಬೆಂಗಳೂರಿನ ಜನರು ಎದುರು ನೋಡುತ್ತಿದ್ದಾರೆ. ಇದರ ಕಾರ್ಯಾಚರಣೆ ಶುರುವಾದ ನಂತರ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೆಲಸ ಮಾಡುವ ಐಟಿ ಉದ್ಯೋಗಿಗಳಿಗೆ ಟ್ರಾಫಿಕ್ ತಾಪತ್ರಯ ಕಡಿಮೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಎಲೆಕ್ಟ್ರಾನಿಕ್ಸ್ ಸಿಟಿ ಟ್ರಾಫಿಕ್ಗೆ ಇನ್ನೊಂದು ಪರಿಹಾರ ಇಷ್ಟರಲ್ಲೇ ದೊರೆಯುವಂತೆ ಕಾಣುತ್ತಿದೆ.
ಬೆಳ್ಳಂದೂರು ರಸ್ತೆ-ಕಾರ್ಮೆಲರಾಮ್ ಲೈನ್ ಡಬ್ಲಿಂಗ್ ( 48 ಕಿಮೀ ಉದ್ದದ ಡಬ್ಲಿಂಗ್ ಯೋಜನೆ ) ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಇದು ಎಲೆಕ್ಟ್ರಾನಿಕ್ ಸಿಟಿಗೆ ಭಾರೀ ಪರಿಹಾರ ಒದಗಿಸುತ್ತದೆ ಎಂದು ಹೇಳಲಾಗುತ್ತಿದೆ.

ಇದು ಹೊಸೂರಿನಲ್ಲಿ ಕೊನೆಗೊಳ್ಳಲಿದೆ. ಹೀಲಲಿಗೆ ನಿಲ್ದಾಣವು ಚಂದಾಪುರದ ಸಮೀಪದಲ್ಲಿದ್ದು ಇದರ ಮೂಲಕ ರೈಲು ಸಂಚರಿಸಲಿದೆ. ಇದು ಎಲೆಕ್ಟ್ರಾನಿಕ್ಸ್ ಸಿಟಿ-2 ಮತ್ತು ಎಲೆಕ್ಟ್ರಾನಿಕ್ ಸಿಟಿ-1 ರಿಂದ ಕ್ರಮವಾಗಿ 3 ಕಿಮೀ ಮತ್ತು 5 ಕಿಮೀ ದೂರದಲ್ಲಿದೆ.
ಬೈಯಪ್ಪನಹಳ್ಳಿಯಿಂದ ಬೆಳ್ಳಂದೂರು ರಸ್ತೆ, ಕಾರ್ಮೆಲರಾಮ್, ಹುಸ್ಕೂರು, ಹೀಲಳಿಗೆ, ಆನೇಕಲ್ ಮತ್ತು ಮಾರಾಯನಾಯಕನಹಳ್ಳಿ ಮಾರ್ಗವಾಗಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದು ಹೊಸೂರಿನಲ್ಲಿ ಕೊನೆಗೊಳ್ಳುತ್ತದೆ. ಇದನ್ನು ರೂ 498.73 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ.
ಈ ಕುರಿತು 'ನ್ಯೂ ಇಂಡಿಯನ್ ಎಕ್ಸ್ಪ್ರೆಸ್'ಗೆ ಮಾತನಾಡಿರುವ ಕರ್ನಾಟಕ ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಎಂಟರ್ಪ್ರೈಸಸ್ (ಕೆ-ರೈಡ್) ಪ್ರಾಜೆಕ್ಟ್ಗಳ ನಿರ್ದೇಶಕ ಆರ್ಕೆ ಸಿಂಗ್, 'ಕಾರ್ಮೇಲರಂನಿಂದ ಹೀಲಲಿಗೆ ನಿಲ್ದಾಣಗಳವರೆಗಿನ 10.5 ಕಿ.ಮೀ ಮಾರ್ಗವು ಈ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಕೊನೆಗೊಳ್ಳಲಿದೆ. ನಾವು ಬೆಳ್ಳಂದೂರು ರಸ್ತೆಯಿಂದ ಕಾರ್ಮೆಲಾರಂಗೆ 3.5 ಕಿಮೀ ದೂರವನ್ನು ಕಾರ್ಯಗತಗೊಳಿಸುತ್ತಿದ್ದೇವೆ. ಇದು ಮಹತ್ವದ್ದಾಗಿದೆ. ಇದರ ಜೊತೆಗೆ ಆನೇಕಲ್ ಮತ್ತು ಮಾರನಾಯಕನಹಳ್ಳಿ ನಡುವಿನ 7 ಕಿ.ಮೀ ಮಾರ್ಗವೂ ಕೊನೆಗೊಳ್ಳಲಿದೆ' ಎಂದು ತಿಳಿಸಿದ್ದಾರೆ.

'ಬೆಳ್ಳಂದೂರು ರಸ್ತೆಯಲ್ಲಿರುವ ಏಕ ರೈಲು ಹಳಿಯನ್ನು ಈಗ ನಾಲ್ಕು ಹಳಿಗಳೊಂದಿಗೆ ಹೆಚ್ಚಿಸಲಾಗುತ್ತಿದೆ. ಆ ಮೂಲಕ ಇಲ್ಲಿ ಐದು ಹಳಿಗಳನ್ನು ಹೊಂದಲು ನಮಗೆ ಅವಕಾಶ ಮಾಡಿಕೊಡಲಾಗಿದೆ. ಕಾರ್ಮೇಲರಂ ಮತ್ತು ಹೀಲಲಿಗೆ ನಡುವೆ ಹುಸ್ಕೂರಿನಲ್ಲಿ ಹೊಸ ನಿಲ್ದಾಣವನ್ನು ಸಹ ನಿರ್ಮಿಸಲಾಗುತ್ತಿದೆ. ಇವೆಲ್ಲವೂ ಹೆಚ್ಚಿನ ರೈಲುಗಳನ್ನು ಓಡಿಸಲು ಮೂಲಸೌಕರ್ಯಗಳನ್ನು ನವೀಕರಿಸುವ ಕ್ರಮಗಳಾಗಿವೆ' ಎಂದು ಅವರು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಕಂಟೋನ್ಮೆಂಟ್ನಲ್ಲಿ ನಾಲ್ಕು ಹೊಸ ಪ್ಲ್ಯಾಟ್ಫಾರ್ಮ್ ಅನ್ನು ನಿರ್ಮಿಸಲಾಗಿದೆ. ನೈಋತ್ಯ ರೈಲ್ವೆಯು ಮಾರ್ಚ್ 2024 ರಿಂದ ಕಂಟೋನ್ಮೆಂಟ್ನಿಂದ ಹೀಲಲಿಗೆ ಕಡೆಗೆ ಪ್ರತಿ 30 ನಿಮಿಷಗಳಿಗೊಮ್ಮೆ ರೈಲನ್ನು ಓಡಿಸಬಹುದು. ಈ ಟ್ರಿಪ್ಗಳನ್ನು ಚಲಾಯಿಸಲು ಎರಡು ಹೊಸ MEMU 8-ಕೋಚ್ ರೈಲುಗಳನ್ನು ಸಿದ್ಧಪಡಿಸಬೇಕಾಗಿದೆ.
ಡಬ್ಲಿಂಗ್ ಯೋಜನೆಗೆ ಸಂಬಂಧಿಸಿದಂತೆ ಬೈಯಪ್ಪನಹಳ್ಳಿ ಮತ್ತು ವೈಟ್ಫೀಲ್ಡ್ ನಡುವಿನ ಕೆಳ ಸೇತುವೆಯನ್ನು ಸಹ ವಿಸ್ತರಿಸಲಾಗುತ್ತಿದೆ.
ನಗರ ಸಾರಿಗೆ ತಜ್ಞ ಸಂಜೀವ್ ದ್ಯಾಮ್ಮನವರ್ ಮಾತನಾಡಿ, 'ಬೆಂಗಳೂರು ಕಂಟೋನ್ಮೆಂಟ್ ಮತ್ತು ವೈಟ್ಫೀಲ್ಡ್ ನಡುವಿನ ಚತುಷ್ಪಥ ಯೋಜನೆ ಮತ್ತು ಈ ದ್ವಿಗುಣಗೊಳಿಸುವ ಯೋಜನೆಯು ದೊಡ್ಡ ಬದಲಾವಣೆಯನ್ನು ತರಬಹುದು. ಚಂದಾಪುರ ಜಂಕ್ಷನ್ ಹೇಲಲಿಗೆ ನಿಲ್ದಾಣದ ಆಸುಪಾಸಿನಲ್ಲಿದೆ. ಇದು ಎಲೆಕ್ಟ್ರಾನಿಕ್ಸ್ ಸಿಟಿ-2 ಗೆ ಸಮೀಪದಲ್ಲಿದೆ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ-1 ರಿಂದ 5 ಕಿ.ಮೀ ದೂರದಲ್ಲಿದೆ' ಎಂದು ಅವರು ಹೇಳಿದ್ದಾರೆ.
ಸರ್ಜಾಪುರಕ್ಕೆ, ಉದಾಹರಣೆಗೆ ವಿಪ್ರೋ ಕಚೇರಿಗೆ ಹೋಗುವವರು ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಾರೆ. ಆನೇಕಲ್ ಮತ್ತು ಕರ್ಮೇಲರಂಗೆ ಭೇಟಿ ನೀಡುವವರು ಈ ಯೋಜನೆಯಿಂದ ಪ್ರಯೋಜನ ಪಡೆಯಲಿದ್ದಾರೆ.
ಸಂಪೂರ್ಣ ಬೈಯಪ್ಪನಹಳ್ಳಿ-ಹೊಸೂರು ಡಬ್ಲಿಂಗ್ ಯೋಜನೆಗೆ ಡಿಸೆಂಬರ್ 2024 ರ ಗಡುವು ಇದೆ.
-
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು











Click it and Unblock the Notifications