ತಿಪ್ಪೆಯಲ್ಲಿತ್ತು 30 ಲಕ್ಷ, ಚಿಂದಿ ಆಯುತ್ತಿದ್ದ ವ್ಯಕ್ತಿಗೆ ರೇಲ್ವೆ ಟ್ರ್ಯಾಕ್ ಮೇಲೆ ಒಲಿದ ಅದೃಷ್ಟ!
ಯಾರ ಜೀವನ ಹೇಗೆ ಬದಲಾಗುತ್ತೋ ಗೊತ್ತಿಲ್ಲ, ಅದ್ರಲ್ಲೂ ಲಕ್ಷ್ಮಿ ಒಲಿಯಬೇಕು ಅಂತಾ ಡಿಸೈಡ್ ಮಾಡಿದ್ರೆ ಯಾವ ಕ್ಷಣ ಬೇಕಾದರೂ ಜೀವನ ಬದಲಾಗಿಬಿಡುತ್ತೆ. ಹೀಗೆ ಇಲ್ಲೊಬ್ಬ ಚಿಂದಿ ಆಯುತ್ತಿದ್ದ ವ್ಯಕ್ತಿಗೆ, ದಿಢೀರ್ 30 ಲಕ್ಷ ರೂಪಾಯಿ ಮೌಲ್ಯದ ನೋಟುಗಳು ಇದ್ದ ಬ್ಯಾಗ್ ಸಿಕ್ಕುಬಿಟ್ಟಿದೆ! ಆಮೇಲೆ ಏನಾಯ್ತು ಅಂದ್ರಾ? ಅದೇ ಈ ಕಹಾನಿಯಲ್ಲಿ ಸಿಕ್ಕಾಪಟ್ಟೆ ಇಂಟರೆಸ್ಟಿಂಗ್ ಪಾರ್ಟ್.
ನಿಮಗೆಲ್ಲ ಗೊತ್ತಿರುವಂತೆ ಬೆಂಗಳೂರಿನಲ್ಲಿ ಕನ್ನಡಿಗರನ್ನ ಬಿಟ್ಟು ಪರಭಾಷಿಗರೇ ಅತಿಹೆಚ್ಚು ಪ್ರಮಾಣದಲ್ಲಿ ಇದ್ದಾರೆ. ಅದರಲ್ಲೂ ದಕ್ಷಿಣ ಭಾರತೀಯರನ್ನ ಬಿಟ್ಟು, ಉತ್ತರ ಭಾರತದ ಹತ್ತಾರು ಲಕ್ಷ ಜನರು ರಾಜಧಾನಿ ಬೆಂಗಳೂರಿನಲ್ಲಿ ವಾಸವಿದ್ದಾರೆ. ಹೀಗೆ ಪಶ್ಚಿಮ ಬಂಗಾಳ ರಾಜ್ಯದ ನಾಡಿಯಾದ ಸಲೇಮನ್ ಎಸ್ಕೆ ಕೂಡ, ಬೆಂಗಳೂರಿನಲ್ಲೇ ಜೀವನ ಕಟ್ಟಿಕೊಂಡು ಬದುಕಿನ ಬಂಡಿ ಸಾಗಿಸುತ್ತಿದ್ದ. ಚಿಂದಿ ಆಯುತ್ತಾ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದ ಈ ವ್ಯಕ್ತಿಗೆ ನಾಗವಾರ ರೈಲು ನಿಲ್ದಾಣ ಪ್ರದೇಶದಲ್ಲಿ ಕಸದಲ್ಲಿ ಅದೃಷ್ಟಲಕ್ಷ್ಮೀ ಒಲಿದುಬಿಟ್ಟಳು.

ಕಸದಲ್ಲಿ ಸಿಕ್ಕಿತ್ತು 30 ಲಕ್ಷ ರೂ.!
ಅಂದಹಾಗೆ ಪ್ರತಿದಿನದ ರೀತಿ ಸಲೇಮನ್ ಎಸ್ಕೆ ಚಿಂದಿ ಆಯಲು ಹೋದಾಗ, ರಾಜಧಾನಿ ಬೆಂಗಳೂರಿನ ನಾಗವಾರ ರೈಲು ನಿಲ್ದಾಣದ ಪ್ರದೇಶದಲ್ಲಿ ಸುಮಾರು 3 ಮಿಲಿಯನ್ ಡಾಲರ್ ಹಣವಿದ್ದ ಪ್ಲಾಸ್ಟಿಕ್ ಬ್ಯಾಗ್ ಸಿಕ್ಕಿದೆ. ಕಸವನ್ನು ಸಂಗ್ರಹ ಮಾಡುವ ಸಮಯದಲ್ಲಿ ಹೀಗೆ ಆ ವ್ಯಕ್ತಿಗೆ ಅಮೆರಿಕದ ಕರೆನ್ಸಿ ಇರುವ ಪ್ಲಾಸ್ಟಿಕ್ ಬ್ಯಾಗ್ ಸಿಕ್ಕಿದೆ. ಹೀಗೆ ಒಟ್ಟು 30 ಲಕ್ಷ ರೂ. ಬೆಲೆಬಾಳುವ ಅಮೆರಿಕನ್ ಡಾಲರ್ ನೋಟುಗಳು ಆ ಬ್ಯಾಗ್ನಲ್ಲಿತ್ತು ಎನ್ನಲಾಗಿದೆ. ಇನ್ನು ತನ್ನ ಕೈಗೆ ಸಿಕ್ಕಿದ್ದ 30 ಲಕ್ಷ ಬೆಲೆಬಾಳುವ ಪ್ಲಾಸ್ಟಿಕ್ ಬ್ಯಾಗ್ನ ಸಲೇಮನ್ ಏನು ಮಾಡಿದ್ದ ಗೊತ್ತಾ?
ಸ್ಕ್ರ್ಯಾಪ್ ಡೀಲರ್ಗೆ ಫೋನ್ ಕಾಲ್!
ಹೀಗೆ ಕಸದ ರೀತಿ ಸಿಕ್ಕಿದ್ದ ಪ್ಲಾಸ್ಟಿಕ್ ಬ್ಯಾಗ್ ಅನ್ನ ತೆಗೆದುಕೊಂಡು ಈ ವ್ಯಕ್ತಿ ಬಂದಿದ್ದಾನೆ. ಕೊನೆಗೆ, ಅಮೃತಹಳ್ಳಿಯ ತನ್ನ ಮನೆಗೆ ಅಮೆರಿಕದ ಕರೆನ್ಸಿ ಇದ್ದ ಪ್ಲಾಸ್ಟಿಕ್ ಬ್ಯಾಗ್ ಅನ್ನು ತೆಗೆದುಕೊಂಡು ಬಂದು ನೋಡಿದ್ದಾನೆ. ಮೊದಲಿಗೆ ಸಲೇಮನ್ಗೆ ಏನು ಮಾಡಬೇಕು ಅಂತ ಗೊತ್ತಾಗಿಲ್ಲ. ಚೀಲದಲ್ಲಿ ಡಾಲರ್ ನೋಡಿದ ಆತ ಕಕ್ಕಾಬಿಕ್ಕಿ ಆಗಿದ್ದಾನೆ ಜೊತೆಗೆ ಪ್ಲಾಸ್ಟಿಕ್ ಚೀಲದಲ್ಲಿ ವಿಶ್ವಸಂಸ್ಥೆಯ ಮುದ್ರೆ ಹೊಂದಿರುವ ಪತ್ರವು ಇತ್ತು ಎನ್ನಲಾಗಿದೆ. ಆಗ ತಕ್ಷಣವೇ ತನಗೆ ಪರಿಚಯ ಇದ್ದ ಸ್ಕ್ರ್ಯಾಪ್ ಡೀಲರ್ಗೆ ಫೋನ್ ಮಾಡಿದ್ದಾನೆ ಸಲೇಮನ್ ಎಸ್ಕೆ.

ಪೊಲೀಸರಿಗೆ ಮುಟ್ಟಿತ್ತು ವಿಷಯ!
ಸ್ಕ್ರ್ಯಾಪ್ ಡೀಲರ್ ಬಪ್ಪ ಎನ್ನುವವನಿಗೆ ಸಲೇಮನ್ ಕರೆ ಮಾಡಿ ದುಡ್ಡು ಸಿಕ್ಕ ವಿಚಾರವನ್ನ ತಿಳಿಸಿದ ನಂತರ, ಬಪ್ಪ ತಾನು ಪ್ರಯಾಣ ಮಾಡುತ್ತಿರುವುದಾಗಿ ಹೇಳಿದ್ದಾನೆ. ಬೆಂಗಳೂರಿಗೆ ನಾನು ವಾಪಸ್ ಬರುವ ತನಕ ದುಡ್ಡು ಇರುವ ಚೀಲವನ್ನ ಹುಷಾರಾಗಿ ನಿನ್ನ ಮನೆಯಲ್ಲಿ ಇಟ್ಟುಕೊಂಡಿರು ಎಂದಿದ್ದಾನೆ. ಆದರೆ ಭಯಪಟ್ಟ ಸಲೇಮನ್, ಸಾಮಾಜಿಕ ಕಾರ್ಯಕರ್ತ ಆರ್. ಕಲೀಂ ಉಲ್ಲಾ ಅವರಿಗೆ ಮಾಹಿತಿ ನೀಡಿದ್ದ. ತಕ್ಷಣ ಕಲೀಂ ಉಲ್ಲಾ ಪೊಲೀಸ್ ಆಯುಕ್ತ ಬಿ. ದಯಾನಂದ ಅವರಿಗೆ ವಿಷಯ ತಿಳಿಸಿದ್ದಾರೆ.
ಇನ್ನು ಹಣ ಸಿಕ್ಕಿದ ಬಗ್ಗೆ ಮಾಹಿತಿಯನ್ನು ಪೊಲೀಸ್ ಆಯುಕ್ತರಿಗೆ ನೀಡಿದಾಗ ಹಣದ ಜತೆಗೆ ಸಲೇಮನ್ ಅವರನ್ನು ಕರೆದುಕೊಂಡು ಬರಲು ಹೇಳಿದ್ದಾರೆ. ಕಚೇರಿಗೆ ಬಂದ ಬಳಿಕ ಬ್ಯಾಗ್ ಪರಿಶೀಲನೆ ಮಾಡಿದ್ದು, ತಕ್ಷಣ ಹೆಬ್ಬಾಳ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿ ಸ್ಥಳವನ್ನು ಪರಿಶೀಲಿಸಿದ್ದಾರೆ. ಆದ್ರೆ ಈಗ ಸಿಕ್ಕ ಮಾಹಿತಿ ಪ್ರಕಾರ ಕಸದಲ್ಲಿ ಇದ್ದ ಕರೆನ್ಸಿ ನೋಟುಗಳು ನಕಲಿ ಎನ್ನಲಾಗುತ್ತಿದೆ. ಹೀಗಾಗಿ ಪರಿಶೀಲನೆಗಾಗಿ ರಿಸರ್ವ್ ಬ್ಯಾಂಕ್ಗೆ ನೋಟು ಇದ್ದ ಚೀಲ ಕಳುಹಿಸಲಾಗಿದೆ. ಸಂಪೂರ್ಣ ಮಾಹಿತಿ ಸಿಗುವ ತನಕ ಕಾದು ನೋಡಬೇಕಿದ್ದು ಪರಿಶೀಲನೆ ಬಳಿಕ ನೋಟುಗಳ ಅಸಲಿತನ ಬಯಲಾಗಲಿದೆ.
-
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Gold: ಅಮೆರಿಕಕ್ಕೆ ವೆನೆಜುವೆಲಾದಿಂದ 1,000 ಕೆ.ಜಿ ಚಿನ್ನ ರಫ್ತು: ಬಹುಕೋಟಿ ಡಾಲರ್ ಒಪ್ಪಂದಕ್ಕೆ ಸಹಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ












Click it and Unblock the Notifications