Get Updates
Get notified of breaking news, exclusive insights, and must-see stories!

ಬೆಂಗಳೂರಿಗೆ ಕರೆಂಟ್‌ ಶಾಕ್‌: ಇಂದಿನಿಂದ ಮೂರು ದಿನಗಳ ಕಾಲ ವಿದ್ಯುತ್ ವ್ಯತ್ಯಯ- ಎಲ್ಲೆಲ್ಲಿ ತಿಳಿಯಿರಿ

ಬೆಂಗಳೂರು, ಆಗಸ್ಟ್‌ 22: ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಆಗಸ್ಟ್ 22 ರಿಂದ 24 ರ ವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.

ಆಗಸ್ಟ್ 22 ರಂದು ಲಕ್ಷ್ಮಿ ಲೇಔಟ್, ಕಮ್ಮನಹಳ್ಳಿ, ಶಾಂತಿನಿಕೇತನ, ದೊಡ್ಡಮ್ಮ ಲೇಔಟ್, ಪಾಂಡುರಂಗನಗರ ಲೇಔಟ್, ಬಿಡಬ್ಲ್ಯುಎಸ್ಎಸ್ಬಿ ಕೊತ್ತನೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

Bengaluru Power Cut: these Parts of the Silicon City to Face Electricity Cut: Know the Affected Areas

ಆಗಸ್ಟ್ 23 ರಂದು ಯಲಹಂಕ ನ್ಯೂ ಟೌನ್, ವಿದ್ಯಾರಣ್ಯಪುರ, ನ್ಯಾಯಾಂಗ ಬಡಾವಣೆ, ಉಣ್ಣಿಕೃಷ್ಣ ಡಬಲ್ ರೋಡ್, ಶೇಷಾದ್ರಿಪುರಂ, ಡೈರಿ ಸರ್ಕಲ್, ಸೋಮೇಶ್ವರ ನಗರ, ನ್ಯಾಯಾಂಗ ಬಡಾವಣೆ, ಚೌಡೇಶ್ವರಿ ಲೇಔಟ್, ಜಿಕೆವಿಕೆ, ಎನ್‌ಸಿಬಿಎಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯ ವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ.

ಆಗಸ್ಟ್ 24 ರಂದು ಸಹಕಾರ ನಗರ, ಬ್ಯಾಟರಾಯನಪುರ, ತಲಕಾವೇರಿ ಲೇಔಟ್, ಅಮೃತಹಳ್ಳಿ, ಜಕ್ಕೂರು, ಭುವನೇಶ್ವರಿನಗರ, ಅಮೃತನಗರ, ಶಿವರಾಮ ಕಾರಂತನಗರ, ನವ್ಯನಗರ, ಕೊಡಿಗೇಹಳ್ಳಿ ಮುಖ್ಯರಸ್ತೆ, ರಕ್ಷಣಾ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10.30ರಿಂದ ಮಧ್ಯಾಹ್ನ 3.30ರ ವರೆಗೆ ವಿದ್ಯುತ್ ಇರುವುದಿಲ್ಲ.

Bengaluru Power Cut: these Parts of the Silicon City to Face Electricity Cut: Know the Affected Areas

ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಎಚ್‌ಎಸ್‌ಆರ್ ಲೇಔಟ್, ಜಕ್ಕಸಂದ್ರ, ಸಿಪಿಡಬ್ಲ್ಯೂಡಿ ಕ್ವಾರ್ಟರ್ಸ್, ಟೀಚರ್ಸ್ ಕಾಲೋನಿ, ವೆಂಕಟಾಪುರ, ಕೆಎಸ್‌ಆರ್‌ಪಿ ಕ್ವಾರ್ಟರ್ಸ್, ಎಂಎಲ್‌ಎ ಲೇಔಟ್, ಸೋಮಸುಂದರಪಾಳ್ಯ, ಹರಳೂರು ರಸ್ತೆ, ಅಗರ ಫ್ಲೈಓವರ್, ಹೊಸೂರು ಮುಖ್ಯರಸ್ತೆ, ಅಂಬೇಡ್ಕರ್ ನಗರ, ಐಟಿಐ ಲೇಔಟ್, ಬೇಗೂರುಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಬೊಮ್ಮನಹಳ್ಳಿ, ಕೂಡ್ಲು, ವಾಸ್ತು ಲೇಔಟ್, ಮಾರುತಿ ಲೇಔಟ್, ಕೋರಮಂಗಲ, ವೀವರ್ಸ್ ಕಾಲೋನಿ, ಮಾರುತಿ ನಗರ, ಪಿಲ್ಲಗಾನಹಳ್ಳಿ, ಗೊಟ್ಟಿಗೆರೆ, ಎಂಎಲ್‌ಎ ಲೇಔಟ್, ಕಮ್ಮನಹಳ್ಳಿ, ಬಾಲಾಜಿ ಗಾರ್ಡನ್ ಲೇಔಟ್, ಬಸವನಪುರ, ತೇಜಶ್ವಿನಿನಗರ ಹಂತ-2, ಮೈಲಸಂದರ, ಹೊಮ್ಮೇದಡ್ಡಹಳ್ಳಿ, ಪ್ರಭಾವನ ರೆಡ್ಡಿ ಬೇಟದಾಸಪುರ, ಹುಲ್ಲಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಇರುವುದಿಲ್ಲ.

ವಿದ್ಯುತ್‌ ವ್ಯತ್ಯಯ ಹಾಗೂ ಅಡಚಣೆಗಳಿಗೆ ಸಂಬಂಧಿಸಿದಂತೆ ದೂರುಗಳನ್ನು ಸಲ್ಲಿಸಲು ನೀವು 1912 ಅನ್ನು ಡಯಲ್ ಮಾಡಬಹುದು.

Bengaluru Power Cut: these Parts of the Silicon City to Face Electricity Cut: Know the Affected Areas

ಗೃಹಜ್ಯೋತಿ ಯೋಜನೆ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಆಗಸ್ಟ್ 1 ರಂದು ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಿದೆ. ಇದು ಸರ್ಕಾರದ ಪ್ರಮುಖ ಯೋಜನೆಯಾಗಿದೆ. ಗೃಹ ಜ್ಯೋತಿ ಯೋಜನೆಗೆ ಚಾಲನೆ ದೊರೆತಾಗಿನಿಂದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ( ಬೆಸ್ಕಾಂ ) ಸಹಾಯವಾಣಿ ಸಂಖ್ಯೆ ( 1912 ) ಈ ವರೆಗೆ ನಾಗರಿಕರಿಂದ ಒಟ್ಟು 1,089 ದೂರುಗಳನ್ನು ಸ್ವೀಕರಿಸಿದೆ. ಈ ಪೈಕಿ 989 ದೂರುಗಳನ್ನು ಪರಿಹರಿಸಲಾಗಿದೆ ಎಂದು ಬೆಸ್ಕಾಂ ತಿಳಿಸಿದೆ.

ಗೃಹಜ್ಯೋತಿ ಯೋಜನೆಗೆ ಕಳೆದ 15 ದಿನಗಳಲ್ಲಿ ಹೊಸ ನೋಂದಣಿಗಳ ಸಂಖ್ಯೆ 11 ಲಕ್ಷದಷ್ಟು ಹೆಚ್ಚಾಗಿದೆ ಎಂದು ಇಂಧನ ಇಲಾಖೆಯ ಅಂಕಿಅಂಶಗಳು ಬಹಿರಂಗಪಡಿಸಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+