ಏರ್ ಶೋ ಅಗ್ನಿ ಅವಘಡ: ಕಾರು ಕಳೆದುಕೊಂಡವರಿಗಾಗಿ ಸಹಾಯ ಕೇಂದ್ರ
ಬೆಂಗಳೂರು, ಫೆಬ್ರವರಿ 23: ಏರೋ ಇಂಡಿಯಾದಲ್ಲಿ ಇಂದು ಸಂಭವಿಸಿದ ಅಗ್ನಿ ಅವಘಡದಲ್ಲಿ 300ಕ್ಕೂ ಹೆಚ್ಚು ಕಾರುಗಳು ಬೆಂಕಿಗೆ ಆಹುತಿಯಾಗಿವೆ.
ಕಾರು ಮಾಲೀಕರ ಆತಂಕ, ದುಃಖ ಹೇಳತೀರದಾಗಿದೆ. ಆದರೆ ಇವರ ನೆರವಿಗೆ ಬೆಂಗಳೂರು ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ನಿಂತಿದ್ದು, ಕಾರು ಕಳೆದುಕೊಂಡವರಿಗಾಗಿ ನಾಲ್ಕು ಹೆಲ್ಪ್ ಡೆಸ್ಕ್ ಆರಂಭಿಸಿದ್ದಾರೆ.
ಏರ್ ಶೋ ಬಳಿಯೇ ವಿಮೆ ಸಂಸ್ಥೆಯ ಕೌಂಟರ್ ತೆರೆಯಲಾಗಿದ್ದು, ಅಗ್ನಿ ಅವಘಡದಲ್ಲಿ ಕಾರು ಕಳೆದುಕೊಂಡವರಿಗೆ ಶೀಘ್ರವಾಗಿ ವಿಮೆ ಹಣ ಸೇರಿಸಲು ಈ ನಿರ್ಣಯ ಕೈಗೊಳ್ಳಲಾಗಿದೆ.

ಅಲ್ಲದೆ ವಾಹನ ದಾಖಲೆಗಳನ್ನು ಪಡೆಯಲೆಂದು ಆರ್ಟಿಓ ಸುತ್ತಬೇಕಾಗಿದ್ದು, ನಾಳೆ ಭಾನುವಾರವಾಗಿದ್ದರೂ ಸಹ ನಗರ ಹಾಗೂ ಸುತ್ತ ಮುತ್ತಲಿನ ಆರ್ಟಿಓ ಕಚೇರಿಗಳು ತೆರೆದಿರಲಿವೆ. ಕಾರು ಕಳೆದು ಕೊಂಡ ಮಾಲೀಕರಿಗೆ ಮಾಹಿತಿ ನೀಡಲಿವೆ.
300ಕ್ಕೂ ಹೆಚ್ಚು ಕಾರುಗಳು ಬೆಂಕಿಗೆ ಆಹುತಿಯಾಗಿದ್ದು, ಹಲವರ ಕಾರಿನ ವಿಮೆ ದಾಖಲೆಗಳು, ಕಾರಿನ ಮೂಲ ದಾಖಲೆಗಳು ಸಹ ಕಾರಿನ ಜೊತೆಗೆ ಸುಟ್ಟು ಕರಕಲಾಗಿವೆ.












Click it and Unblock the Notifications