ಬೆಂಗಳೂರು: ಕನ್ನಡೇತರರಿಗೆ ಕನ್ನಡ ಕಲಿಸಲು ಪೊಲೀಸರಿಂದ ಹೊಸ ಉಪಕ್ರಮ ಪರಿಚಯ
ಬೆಂಗಳೂರು, ನವೆಂಬರ್ 02: ರಾಜ್ಯದಲ್ಲಿ ಶುಕ್ರವಾರ 69ನೇ ಕನ್ನಡ ರಾಜ್ಯೋತ್ಸವದ ಬಹುವಿಜೃಂಭಣೆಯಿಂದ ಆಚರಿಸಲಾಗಿದೆ. ಇದೇ ವಿಶೇಷ ದಿನದಂದು ಕನ್ನಡ ಮಾತನಾಡುವುದನ್ನು ಉತ್ತೇಜಿಸಲು ಬೆಂಗಳೂರು ನಗರ ಪೊಲೀಸರು ಹೊಸ ಉಪಕ್ರಮ ಪರಿಚಯಿಸಿದ್ದಾರೆ. ಇದರಿಂದ ಕನ್ನಡೇತರರು ಕನ್ನಡ ಕಲಿಯಲು ಬಹಳ ಸುಲಭವಾಗುವಂತೆ 'ಕನ್ನಡ ಚಾಟ್' ಕಾರ್ಡ್ ಅಳವಡಿಸಲಾಗಿದೆ.
ಹೌದು, ಬೆಂಗಳೂರು ಪೊಲೀಸರು ನಗರಾದ್ಯಂತ ಎಲ್ಲ ಆಟೋ ರಿಕ್ಷಾ ಚಾಲಕರಿಗೆ ಕನ್ನಡೇತರರು ಇಲ್ಲಿ ಕನ್ನಡ ಕಲಿಕೆಗೆ ಅನುಕೂಲವಾಗುವ ಲ್ಯಾಮಿನೇಷನ್ ಮಾಡಿದ ಈ ಚಾಟ್ ಕಾರ್ಡ್ ಗಳನ್ನು ನೀಡುತ್ತಿದ್ದಾರೆ. ಚಾಲಕರು ಹಾಗೂ ಪ್ರಯಾಣಿಕರ ಮಧ್ಯ ಈ ಚಾಟ್ ಬೋಡ್ ಮೂಲಕ ಸರಳವಾಗಿ ಕನ್ನಡದಲ್ಲೇ ಸಂವಹನ ನಡೆಸಲು ಸಾಧ್ಯವಾಗುವಂತೆ ಮಾಡಲಾಗಿದೆ.

ಈ ಚಾರ್ಟ್ ಕಾರ್ಡ್ ನಲ್ಲಿ ಇಂಗ್ಲಿಷ್ ಪದಗಳನ್ನು ಭಾಷಾಂತರ ಮಾಡಲಾಗಿದೆ. ಅಂದರೆ ಇಂಗ್ಲಿಷ್ ಅಕ್ಷರಗಳಲ್ಲಿಯೇ ಚಾಟ್ ರೀತಿಯಲ್ಲಿ ಕನ್ನಡದಲ್ಲಿ ಹೇಳುವಂತೆ ಕಾರ್ಡ್ ಸಿದ್ದಪಡಿಸಲಾಗಿದೆ. ಇದು ಕನ್ನಡೇತರ ಪ್ರಯಾಣಿಕರು ಚಾಲಕರ ಜೊತೆಗೆ ಕನ್ನಡದಲ್ಲಿ ಸಂಭಾಷಣೆ ಮಾಡಲು, ಕನ್ನಡ ಕಲಿಯಲು ಸಾಧ್ಯವಾಗಿಸುತ್ತದೆ. ಈ ಕಾರ್ಡ್ ಕನ್ನಡ ನುಡಿಗಟ್ಟು ಸಹ ಒಳಗೊಂಡಿದೆ.
ಒಂದು ತಿಂಗಳು ಕಾರ್ಡ್ ವಿತರಣೆ
ಕನ್ನಡೇತರರಿಗೆ ಕನ್ನಡ ಕಲಿಸುವ ಕಾರ್ಡ್ಗಳನ್ನು ನಾವು ನಗರದ ಎಲ್ಲ ಆಟೋಗಳಿಗೂ ವಿತರಿಸುತ್ತಿದ್ದೇವೆ. ಈ ವಿತರಣೆಯು ಮುಂದಿನ ಒಂದು ತಿಂಗಳ ವರೆಗೂ ನಡೆಯಲಿದೆ. ಕನ್ನಡದಲ್ಲಿಯೇ ಪ್ರಯಾಣಿಕರು ಮತ್ತು ಚಾಲಕರ ಮಧ್ಯೆ ಸಂವಾದ ಖಚಿತಪಡಿಸಿಕೊಳ್ಳುತ್ತಿದ್ದೇವೆ ಎಂದು ಬೆಂಗಳೂರು ನಗರ ಪೊಲೀಸರು ಮಾಹಿತಿ ನೀಡಿದ್ದಾರೆ.
ಅದಷ್ಟೇ ಅಲ್ಲದೇ ಆಟೋದಲ್ಲಿ ಅಳವಡಿಸಿರುವ ಕಾರ್ಡ್ ನಲ್ಲಿ ಸ್ಕ್ಯಾನ್ ಆಯ್ಕೆ ಕೊಡಲಾಗಿದೆ. ಅದನ್ನು ಸ್ಕ್ಯಾನ್ ಮಾಡಿದರೆ ವೀಡಿಯೊ ಪ್ರದರ್ಶನದ ಲಿಂಕ್ ಲಭ್ಯಾಗುತ್ತದೆ. ಇದರ ವೆಚ್ಚ ಪೊಲೀಸ್ ಇಲಾಖೆಯು ಭರಿಸಲಿದೆ. ಇದು ಕನ್ನಡಿಗೆ ಆಟೋ ರೀಕ್ಷಾ ಚಾಲಕ (@autokannadiga0779) ಅಜ್ಮಲ್ ಸುಲ್ತಾನ್ ಅವರಿಂದ ಸ್ಫೂರ್ತಿ ಪಡೆದು ಹೀಗೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ತಮಿಳು, ಹಿಂದಿ ಭಾಷಿಗರು ಹೆಚ್ಚಿರುವ ಬೆಂಗಳೂರಿನಲ್ಲಿ ಕನ್ನಡ ರಾಜ್ಯೋತ್ಸವದಂದು ನಗರದ ಪೊಲೀಸರು ಕನ್ನಡ ಬಳಕೆ, ಉಳಿಕೆಯ ಕೆಲಸಕ್ಕೆ ಕೈ ಹಾಕಿದ್ದಾರೆ. ಸದ್ಯ ನಗರಾದಲ್ಲಿ 5,000 ಆಟೋಗಳಲ್ಲಿ ಈ ಕಾರ್ಡ್ ವಿತರಿಸಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ












Click it and Unblock the Notifications