ಫ್ಯಾಮಿಲಿ ಡೇ ಆಚರಿಸಿ ಸಂಭ್ರಮಪಟ್ಟ ಬೆಂಗಳೂರು ಪೊಲೀಸರು
ಬೆಂಗಳೂರು ಫೆಬ್ರವರಿ 3: ಪೊಲೀಸರು ಸದಾ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಕೆಲಸದ ನಡುವೆ ಕುಟುಂಬದ ಜೊತೆ ಬೆರೆಯುವುದೇ ಕಡಿಮೆ. ಇದರಿಂದ ತಮ್ಮ ಕುಟುಂಬದ ಪ್ರೀತಿಯ ಕ್ಷಣಗಳನ್ನು ಅನುಭವಿಸುವುದೇ ಅಪರೂಪ.
ಆದರೆ, ಬೆಂಗಳೂರು ಉತ್ತರ ವಲಯ ಪೊಲೀಸರು ಈ ಮಾತನ್ನು ಅಲ್ಲಗಳೆಯುತ್ತಾರೆ. ಏಕೆಂದರೆ ಸ್ವತಃ ಬೆಂಗಳೂರು ಉತ್ತರ ವಲಯ ಡಿಸಿಪಿ ಅವರೇ ತಮ್ಮ ವಿಭಾಗದ ಸಿಬ್ಬಂದಿಗೆ ಕುಟುಂಬದ ಪ್ರೀತಿಯನ್ನು ತೋರಿದ್ದಾರೆ. ಪೊಲೀಸರು ಕುಟುಂಬಸ್ಥರ ಜತೆ ಕಾಲ ಕಳೆಯುವ ಸಲುವಾಗಿ ಉತ್ತರ ವಿಭಾಗದ ಡಿಸಿಪಿ ಎನ್.ಶಶಿಕುಮಾರ್ ಅವರು ಕುಟುಂಬಸ್ಥರೊಂದಿಗೆ ಒಂದು ದಿನ ಕಾರ್ಯಕ್ರಮ ಆಯೋಜಿಸಿ ಗಮನ ಸೆಳೆದರು.
ಭಾನುವಾರ ಯಶವಂತಪುರದ ಜೆ ಪಿ ಪಾರ್ಕ್ನಲ್ಲಿ ಪೊಲೀಸ್ ಸಿಬ್ಬಂದಿ ಒಂದೆಡೆ ಬೆರೆತು, ಒಟ್ಟಾಗಿ ಪೋಟೊ ತೆಗೆಸಿಕೊಂಡು ಸಂತಸಪಟ್ಟು, ಇತರ ವಿಭಾಗದ ಪೊಲೀಸರಿಗೆ ಪ್ರೇರಣೆಯಾದರು.

ಪಾರ್ಕ್ನಲ್ಲಿ ನಲಿದಾಡಿದರು
ಪ್ರತಿದಿನ ಕೇಸ್, ಕೊರ್ಟ್, ಕಚೇರಿ ಎಂದು ಠಾಣೆಯಲ್ಲಿ ಇರುವ ಸಿಬ್ಬಂದಿ ಒಂದು ದಿನ ಒತ್ತಡದಿಂದ ದೂರ ಉಳಿದು ಯಶವಂತಪುರದ ಜೆ ಪಿ ಪಾರ್ಕ್ನಲ್ಲಿ ನಲಿದಾಡಿದರು. ಇದರಲ್ಲಿ 95 ಜನ ಪೊಲೀಸ್ ಅಧಿಕಾರಿ, 200 ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಅವರ ಮಕ್ಕಳು ಪಾಲ್ಗೊಂಡಿದ್ದರು ಇದರಲ್ಲಿ ಉತ್ತರ ವಿಭಾಗದ ಬೇರೆ ಬೇರೆ ಪೊಲೀಸ್ ಠಾಣೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕುಟುಂಬಸ್ಥರು ಒಂದೆಡೆ ಸೇರಿ ತಂದೆ-ತಾಯಿ, ಹೆಂಡತಿ, ಮಕ್ಕಳ ಜತೆ ಫೋಟೊ ತೆಗೆಸಿಕೊಂಡರು. ಒಂದು ರೀತಿ ಹಬ್ಬದ ವಾತಾವರಣವನ್ನು ನಿರ್ಮಿಸಿ, ಗಮನ ಸೆಳೆದರು.

ಹಾಡು ಹಾಡಿ ನೃತ್ಯ ಮಾಡಿದರು
ಪೊಲೀಸ್ ಸಿಬ್ಬಂದಿಯವರ ಮಕ್ಕಳ ಜತೆ ಡಿಸಿಪಿ ಶಶಿಕುಮಾರ್ ಫೋಟೊ ತೆಗೆಸಿಕೊಂಡರು. ಇದೇ ವೇಳೆ ಮಹಿಳಾ ಪೇದೆಗಳು, ಅವರ ಕುಟುಂಬದವರು ಬಣ್ಣ ಬಣ್ಣದ ಸಾರಿ ತೊಟ್ಟು ಗಮನ ಸೆಳೆದರು. ಪುಟಾಣಿ ಮಕ್ಕಳು ಹೊಸ ಅಂಗಿತೊಟ್ಟು ವಿಶೇಷವಾಗಿ ಕಾಣಿಸಿಕೊಂಡರು. ಬಳಿಕ ಎಲ್ಲರೂ ಉದ್ಯಾಾನದಲ್ಲಿ ಊಟ ಸವಿದರು. ದಿನವಿಡಿ ಮಕ್ಕಳು ತಮಗಿಷ್ಟದ ಹಾಡು ಹಾಡಿ ನೃತ್ಯ ಮಾಡಿದರು.

ನನಗೂ ಸಂತೋಷ ಆಯ್ತು; ಡಿಸಿಪಿ ಎನ್.ಶಶಿಕುಮಾರ್
ಈ ಕುರಿತು ಉತ್ತರ ಡಿಸಿಪಿ ಎನ್.ಶಶಿಕುಮಾರ್ ಮಾತನಾಡಿ, ""ಪೊಲೀಸರಲ್ಲಿರುವ ಒತ್ತಡವನ್ನು ಕಡಿಮೆ ಮಾಡಲು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಂತೆ ಎಲ್ಲ ಠಾಣೆಯ ಪೊಲೀಸ್ ಸಿಬ್ಬಂದಿ ಪಾಲ್ಗೊಂಡು ಸಂಭ್ರಮಿಸಿದರು. ಇದನ್ನು ನೋಡಿ ನನಗೂ ಸಂತೋಷ ಆಯ್ತು'' ಎಂದು ತಿಳಿಸಿದರು.

ಬೇರೆ ಘಟಕದ ಪೊಲೀಸರಿಗೆ ಮಾದರಿ
""ಪೊಲೀಸರು ಪ್ರತಿದಿನ ಕಠಿಣ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಾರೆ. ಪ್ರತಿದಿನ ಜನರಿಗಾಗಿ ಕೆಲಸ ಮಾಡುತ್ತಿರುತ್ತಾರೆ. ಹೀಗಾಗಿ ಅವರಿಗೆ ಕುಟುಂಬದವರ ಜತೆ ಹೆಚ್ಚು ಕಾಲ ಕಳೆಯುವುದು ಕಷ್ಟವಾಗಿರುತ್ತದೆ. ಅದನ್ನು ದೂರ ಮಾಡುವ ಸಲುವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು'' ಎಂದರು. ಒಟ್ಟಿನಲ್ಲಿ ಉತ್ತರ ವಲಯ ಡಿಸಿಪಿ ಅವರ ನಡೆ ಬೆಂಗಳೂರು ಇತರ ವಲಯದ ಪೊಲೀಸ್ರಿಗೆ ಪ್ರೇರಣೆ ನೀಡಿದ್ದಂತು ನಿಜ.
-
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ












Click it and Unblock the Notifications