'40 ಕುಡುಕರ ಮಧ್ಯೆ ನಾನೊಬ್ಬಳು ದುರ್ದೈವಿ'
ಬೆಂಗಳೂರು, ಡಿಸೆಂಬರ್, 11: ಅಲ್ಲೊಂದು ಹೆಣ್ಣು ಜೀವ ಇದೆ ಎಂಬ ಸಂಗತಿ ಬಹುತೇಕರಿಗೆ ಗೊತ್ತಾಗಲೂ ಸಾಧ್ಯವಿರಲಿಲ್ಲ. ಗೊತ್ತಾದರೂ ಮಾಡುವುದಾದರರೂ ಏನು? 40 ಜನ ಪುರುಷರ ಮಧ್ಯೆ ಆಕೆ ಪ್ರತಿದಿನ ನರಕಯಾತನೆ ಅನುಭವಿಸುತ್ತಿದ್ದಾಳೆ.
40 ಕುಡುಕರ ಮಧ್ಯೆ ಇವಳೊಬ್ಬಳೆ. ರಾತ್ರಿ ಆಕೆ ಮಲುಗುವುದಕಲ್ಕೂ ಭದ್ರತೆಯಿಲ್ಲ. ಏನಾದರೂ ಸಂಕಷ್ಟ ತೊಡಿಕೊಂಡರೆ, ಕಿರುಚಾಡಿದರೆ ಬೀಳುತ್ತೆ ಬೆತ್ತದ ಹೊಡೆತ ಬೀಳುತ್ತದೆ.[ಟ್ವೀಟ್ ಮಾಡಿ ಕಾಮುಕನಿಂದ ಮುಕ್ತಿ ಪಡೆದ ಮಹಿಳೆ]

ಇದೆಲ್ಲಾ ದೂರದ ಬಿಹಾರದಲ್ಲೋ ಅಥವಾ ಉತ್ತರ ಪ್ರದೇಶದಲ್ಲೋ ನಡೆಯುತ್ತಿದ್ದ ಘಟನೆಯಲ್ಲ. ನಮ್ಮದೇ ಬೆಂಗಳೂರಿನ ಯಲಹಂಕದ ಅನಧಿಕೃತ ಡಿ ಅಡಿಕ್ಷನ್ ಸೆಂಟರ್ ನಲ್ಲಿ ಕಂಡು ಬಂದ ಕರಾಳ ಮುಖ.[ಋತುಚಕ್ರ ಪತ್ತೆಹಚ್ಚಿ ಅಂದವನ ವಿರುದ್ಧ ಮಹಿಳೆಯರ ಸಮರ]
ಸ್ಥಳೀಯರ ದೂರಿನ ಮೇರೆಗೆ ಮಾನವ ಹಕ್ಕುಗಳ ಸಂಘಟನೆಯೊಂದು ಸ್ಥಳಕ್ಕೆ ಭೇಟಿ ಕೊಟ್ಟಾಗ ನರಳುತ್ತಿರುವ ಹೆಣ್ಣು ಮಗಳ ಕರಾಳ ಜೀವನ ಕಣ್ಣಿಗೆ ಬಿದ್ದಿದೆ. ಈ ದುರ್ದೈವಿ ಹೆಣ್ಣು ಮಗಳ ಹೆಸರು ಫೌಜಿಯಾ. ಆಗಾಗ ರೂಮಿನತ್ತ ಸುಳಿಯುವ ಗಂಡಸರ ನೆರಳು, ಮಾನಸಿಕ ದೈಹಿಕ ಹಿಂಸೆ ಇದು ಆಕೆಯ ಪ್ರತಿದಿನದ ಬದುಕು.
ತಂದೆ ತಾಯಿ ಇಲ್ಲದ ಅನಾಥೆ ಫೌಜಿಯಾಳನ್ನು ಆಸ್ತಿ ವಿವಾದವೊಂದು ಸುತ್ತಿಕೊಮಡಿದೆ. ಆಕೆಯ ಮಾವಂದಿರಿಗೆ ಸಿಕ್ಕಿದ್ದು ಈ ಡಿ ಅಡಿಕ್ಷನ್ ಸೆಂಟರ್. ಎರಡು ಮೂರು ತಿಂಗಳಿಂದ ಈಕೆಗೆ ಹೊರ ಜಗತ್ತಿನ ಸಂಪರ್ಕ ಇಲ್ಲ.
ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಿ ಎಂದು ಮಾಧ್ಯಗಳ ಎದುರು ಫೌಜಿಯಾ ಅಳಲು ತೋಡಿಕೊಂಡರು. ಯಲಹಂಕ ವ್ಯಾಪ್ತಿಯಲ್ಲಿ ಇಂಥಹ ಅನಧಿಕೃತ ಸೆಂಟರ್ ಗಳು ಸಾಕಷ್ಟಿವೆ. ಮಹಿಳೆಯರ ಪರ ಎಂದು ಸದಾ ಬೊಬ್ಬಿಡುವ ಸರ್ಕಾರ ಮತ್ತು ಮಹಿಳಾ ಸಂಘಟನೆಗಳಿಗೆ ಇಂಥ ಕರ್ಮಕಾಂಡ ಮಾತ್ರ ಕಾಣದಿರುವುದು ವಿಪರ್ಯಾಸ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ












Click it and Unblock the Notifications