ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸತತ 24 ಗಂಟೆ ಮಾತನಾಡಿದ ಚಂದ್ರಮೌಳಿ
ಬೆಂಗಳೂರು, ಮಾರ್ಚ್ 26: ಅವರ ಹೆಸರು ಟಿ.ಕೆ.ಚಂದ್ರಮೌಳಿ. ಬಡ ವಿದ್ಯಾರ್ಥಿಗಳ ಸಲುವಾಗಿ ಚಂದ್ರಮೌಳಿ ಮಾಡಿರುವ ಈ ಪ್ರಯತ್ನ ಎಂಥವರೂ ಮೆಚ್ಚುವಂಥದ್ದು. ವಿದ್ಯಾರ್ಥಿಗಳ ನೆರವಿನ ಸಲುವಾಗಿ ಸತತ 24 ಗಂಟೆ ವಿವಿಧ ವಿಷಯಗಳ ಬಗ್ಗೆ ಮಾತನಾಡಿರುವ 52 ವರ್ಷದ ಇವರು, 6 ಲಕ್ಷ ರುಪಾಯಿ ಸಂಗ್ರಹಿಸಿದ್ದಾರೆ. ವಿದ್ಯಾ ದಾನ ವಿದ್ಯಾರ್ಥಿ ವೇತನ ಯೋಜನೆ ಮೂಲಕ ಆ ಮೊತ್ತವನ್ನು ಅರ್ಹರಿಗೆ ತಲುಪಿಸಲಾಗುತ್ತದೆ.
ಈ ವಿದ್ಯಾರ್ಥಿ ವೇತನದ ಯೋಜನೆ ತಂದಿರುವುದು ಇಂದಿರಾ ನಗರದ ರೋಟರಿ ಕ್ಲಬ್. ಪ್ರವಾಸಿಗ, ರಂಗ ನಟ, ರೊಟೇರಿಯನ್, ತರಬೇತುದಾರ ಹೀಗೆ ಬಹುಮುಖ ಪ್ರತಿಭೆಯ ಚಂದ್ರಮೌಳಿ ಅವರು ಈ ಸುದೀರ್ಘ ಮಾತುಕತೆಯ ಸವಾಲಿಗೆ ಒಂಬತ್ತು ತಿಂಗಳ ಸಿದ್ಧತೆ ನಡೆಸಿದ್ದಾರೆ.
ಮಾರ್ಚ್ ಹದಿನಾರನೇ ತಾರೀಕು ಬೆಳಗ್ಗೆ ಎಂಟು ಗಂಟೆಗೆ ಆರಂಭಿಸಿದ ಅವರ ಮಾತು ಸಮಾಪ್ತಿ ಆಗಿದ್ದು ಮರು ದಿನ ಬೆಳಗ್ಗೆ ಎಂಟು ಗಂಟೆಗೆ. ಇಂದಿರಾ ನಗರದ ರೋಟರಿ ಹೌಸ್ ಆಫ್ ಸರ್ವೀಸ್ ನಲ್ಲಿ ಈ ಕಾರ್ಯಕ್ರಮ ಇತ್ತು. ತಮ್ಮ ಜೀವನ ಪಯಣದ ಬಗ್ಗೆ ತಿಳಿಸಿದರು ಚಂದ್ರಮೌಳಿ.

ತಮ್ಮ ಪರಿಚಯ, ಕುಟುಂಬದವರ ಪರಿಚಯ, ಶಾಲೆ- ಕಾಲೇಜು ಜೀವನ, ಸ್ನೇಹಿತರು, ಹಿಂದಿನ ಬೆಂಗಳೂರು, ಸಿನಿಮಾ, ನಾಟಕ ಹೀಗೆ ಯಾವ ವಿಷಯವನ್ನೂ ಬಿಡದೆ ಎಲ್ಲದರ ಬಗ್ಗೆಯೂ ಮಾತನಾಡಿದರು. ಇನ್ನು ರಷ್ಯಾ, ಅಲಾಸ್ಕಾ, ಕೀನ್ಯಾ, ಹಿಮಾಲಯ ಪ್ರವಾಸದ ವೇಳೆಯ ತಮ್ಮ ಅನುಭವವನ್ನು ಕೂಡ ಹಂಚಿಕೊಂಡರು.
ಅಕೌಂಟ್ಸ್ ವಿಷಯದಲ್ಲಿ ತೊಂಬತ್ತೈದರಷ್ಟು ಅಂಕ ಪಡೆದಿದ್ದ ಒಬ್ಬ ಬಡ ವಿದ್ಯಾರ್ಥಿನಿಗೆ ಮುಂದೆ ಓದಲು ಆಗದ ಸ್ಥಿತಿಯನ್ನು ಕಂಡ ಚಂದ್ರಮೌಳಿಯವರು, ಈ ರೀತಿ ಒಂದು ಶೋ ಮಾಡಲು ಆಲೋಚಿಸಿದರಂತೆ. "ನಾವು ಈಗಾಗಲೇ ಆರು ನೂರು ವಿದ್ಯಾರ್ಥಿಗಳನ್ನು ಗುರುತಿಸಿದ್ದೇವೆ. ಅದು ಸಾವಿರ ತಲುಪಬಹುದು. ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ದೊರೆಯುವಂತೆ ಮಾಡುವುದು ನಮ್ಮ ಉದ್ದೇಶ" ಎಂದು ರೋಟರಿ ಇಂದಿರಾನಗರದ ಎ.ಕೆ.ಸುಗುಣನ್ ತಿಳಿಸಿದ್ದಾರೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್












Click it and Unblock the Notifications