ಲ್ಯಾಂಡ್ ಸ್ಕೇಪ್ ಫೋಟೋಗ್ರಾಫಿ ಹಬ್ಬಕ್ಕೆ ಎಲ್ಲರೂ ಬನ್ನಿ
ಬೆಂಗಳೂರು, ಮಾರ್ಚ್. 29: ಛಾಯಾಗ್ರಹಣ ಎಂದ ತಕ್ಷಣ ನಮ್ಮ ಮನಸ್ಸಿಗೆ ಬರುವುದು ಪ್ರಾಣಿ ಮತ್ತು ನಿಸರ್ಗದ ಚಿತ್ರ ಸೆರೆಹಿಡಿಯುವ ಫೋಟೋಗ್ರಾಫಿ. ಇದನ್ನು ಮೀರಿದ ಪ್ರಯತ್ನಗಳು ಅದೆಷ್ಟು ನಡೆದರೂ ಜನರ ತಲೆಯಲ್ಲಿ ಪ್ರಾಣಿ ಜೀವನ ಸೆರೆಹಿಡಿಯುವುದೇ ಫೋಟೋಗ್ರಾಫಿ ಎಂಬಂತೆ ಕೂತುಬಿಟ್ಟಿದೆ.
ಛಾಯಾಗ್ರಹಣ ರಂಗದಲ್ಲಿ ಭಾರತದಲ್ಲಿ ವಿವಿಧ ಪ್ರಯೋಗಗಳು ನಡೆದಿದ್ದರೂ ಭೂದೃಶ್ಯಾವಳಿಯನ್ನು ಮನಮೋಹಕವಾಗಿ ಕಟ್ಟಿಕೊಡುವ ಲ್ಯಾಂಡ್ ಸ್ಕೇಪ್ ಫೋಟೋಗ್ರಫಿಯಲ್ಲಿ ಇರುವ ಸಾಕಷ್ಟು ಸಾಧ್ಯತೆಗಳು ಇನ್ನೂ ಅಷ್ಟಾಗಿ ತೆರೆದುಕೊಂಡಿಲ್ಲ. ಆ ನಿಟ್ಟಿನಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಸಂಸ್ಥೆ ಬೆಂಗಳೂರಿನ ಲ್ಯಾಂಡ್ ಸ್ಕೇಪ್ ವಿಝರ್ಡ್ಸ್.[ವಿಕಿಪೀಡಿಯ ವಿರುದ್ಧ 'ಗೊರಿಲ್ಲ' ವಾರ್]
ಭಾರತದ ಬೇರೆ ಬೇರೆ ಭಾಗಗಳಲ್ಲಿನ ವಿಶಿಷ್ಟ ಭೂದೃಶ್ಯಾವಳಿಗಳನ್ನು ತನ್ನ ವಿಶೇಷ ಪರಿಣಿತಿ ಮತ್ತು ತಂತ್ರಜ್ಞಾನದಿಂದ ಸೆರೆಹಿಡಿಯುತ್ತಿರುವ ಲ್ಯಾಂಡ್ ಸ್ಕೇಪ್ ವಿಝರ್ಡ್ಸ್ ಈ ಬಾರಿ ಎರಡನೇ ಛಾಯಾಗ್ರಹಣ ಹಬ್ಬ - ದಿ ಕನ್ ಫ಼್ಲುಯೆನ್ಸ್ ನ ಸಂಭ್ರಮದಲ್ಲಿದೆ.

ಏಪ್ರಿಲ್ 2 ರಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಯ ಸತೀಶ್ ಧವನ್ ಸಭಾಂಗಣದಲ್ಲಿ ಮಧ್ಯಾಹ್ನ 2 ಗಂಟೆಯಿಂದ ನಡೆಯಲಿರುವ ಈ ಹಬ್ಬದ ಪ್ರಮುಖ ಉದ್ದೇಶ ಪರಿಸರ ಪ್ರೇಮಿಗಳನ್ನು ಹಾಗೂ ಪ್ರಕೃತಿ ಛಾಯಾಗ್ರಾಹಕರನ್ನು ಒಂದೇ ಸೂರಿನಲ್ಲಿ ಕಲೆಹಾಕಿ ಲ್ಯಾಂಡ್ ಸ್ಕೇಪ್ ಫೋಟೋಗ್ರಾಫಿಯ ಕುರಿತಂತೆ ಚಿಂತನ-ಮಂಥನ ನಡೆಸುವುದು ಎಂದು ಕನ್ಫ್ಲುಯನ್ಸ್ ನಿರ್ದೇಶಕರಲ್ಲಿ ಒಬ್ಬರಾದ ಶಿವಕುಮಾರ್ ಎಲ್. ನಾರಾಯಣ ಅವರ ಆಶಯ.[ಆಸ್ಟ್ರೋ ಮೋಹನ್ ಚಿತ್ರಗಳಿಗೆ ಅಂತಾರಾಷ್ಟ್ರೀಯ ಮನ್ನಣೆ]
ಈ ಕಾರ್ಯಕ್ರಮದಲ್ಲಿ ನ್ಯಾಷನಲ್ ಜಿಯೋಗ್ರಾಫಿಕ್ ಯಂಗ್ ಎಕ್ಸ್ ಪ್ಲೋರರ್ ಎನಿಸಿಕೊಂಡಿರುವ ಪ್ರಸಂಜೀತ್ ಯಾದವ್, ಛಾಯಾಗ್ರಾಹಕರಾದ ದಿನೇಶ್ ಹೆಗಡೆ ಮಾನೀರ್, ಪ್ರವೀಣ್ ಪಿ. ಮೋಹನದಾಸ್, ವಿವೇಕ್ ಕಾಳೆ ಮತ್ತಿತರರು ಭಾಗವಹಿಸಲಿದ್ದು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಲ್ಯಾಂಡ್ ಸ್ಕೇಪ್ ವಿಝರ್ಡ್ಸ್ ನ ಅಶ್ವಿನಿ ಕುಮಾರ್ ಭಟ್ ತಿಳಿಸಿದ್ದಾರೆ.

'ಅಗ್ನಿ ಭೂದೃಶ್ಯಾವಳಿಯ ಬೆನ್ನು ಹತ್ತಿ' ಎಂಬ ಕಥೆಯನ್ನು ತೆರೆದಿಡುವ 'ಫಯರಿ ಲ್ಯಾಂಡ್ ಸ್ಕೇಪ್' ನ ವೀಡಿಯೋ ಪ್ರದರ್ಶನವನ್ನು ಸಹ ಕನ್ಫ್ಲುಯನ್ಸ್ ಒಳಗೊಂಡಿದೆ. ಗುಜರಾತ್ ನ ಬನ್ನಿ ಹುಲ್ಲುಗಾವಲಿನಲ್ಲಿ ನಡೆಯುವ ಅತಿ ಅಪರೂಪದ ಮತ್ತು ನಿಗೂಢ ಬೆಳಕನ್ನು ಚಿತ್ರೀಕರಿಸುವ ಪ್ರಯತ್ನದ ವೀಡಿಯೋ ಡಾಕ್ಯುಮೆಂಟರಿ ಇದಾಗಿದೆ ಎನ್ನುತ್ತಾರೆ ಫಯರಿ ಲ್ಯಾಂಡ್ ಸ್ಕೇಪ್ ನ ನಿರ್ದೇಶಕ ಹಾಗೂ ಲ್ಯಾಂಡ್ ಸ್ಕೇಪ್ ವಿಝರ್ಡ್ಸ್ ನ ಶ್ರೀಹರ್ಷ ಗಂಜಂ.
ನೆನಪಿರಲಿ ಈ ಹಬ್ಬದ ಎಲ್ಲಾ ಕಾರ್ಯಕ್ರಮಗಳಿಗೆ ಪ್ರವೇಶ ಉಚಿತ. ನಿಸರ್ಗದ ಹಲವಾರು ಕೋನಗಳನ್ನು ಕಟ್ಟಿಕೊಡುವ ಹಬ್ಬಕ್ಕೆ ನೀವು ಒಂದು ಹಾಜರಿ ಹಾಕುತ್ತೀರಾ ತಾನೆ? ಹೆಚ್ಚಿನ ಮಾಹಿತಿಗೆ ಕೆಳಗಿನ ತಾಣಗಳಿಗೆ ಧಾರಾಳವಾಗಿ ಭೇಟಿ ನೀಡಬಹುದು.
* ತಂಡದ ವಿವರ
* ಕಾರ್ಯಕ್ರಮದ ಆಮಂತ್ರಣ
-
SSLC ಪರೀಕ್ಷೆ-1 ಆರಂಭ: ಮಲ್ಲೇಶ್ವರಂನ ಕೆಪಿಎಸ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆ -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
ವಲಸೆ ಕಾರ್ಮಿಕರಿಂದಾಗಿ ಉದ್ಯೋಗ ನಷ್ಟವಾಗುತ್ತಿರುವ ಬಗ್ಗೆ ಅಧಿಕೃತ ದೂರು ಸಲ್ಲಿಕೆಯಾಗಿಲ್ಲ: ಕಾರ್ಮಿಕ ಇಲಾಖೆ ಸ್ಪಷ್ಟನೆ -
RCB: ಆರ್ಸಿಬಿಯಲ್ಲಿ ಜೋಶ್ ಹ್ಯಾಜಲ್ವುಡ್ ಸ್ಥಾನ ತುಂಬುವ ಆಟಗಾರ ಇವರೇ ನೋಡಿ -
ಶೆಲ್ ಬಂಕ್ನಲ್ಲಿ ಪೆಟ್ರೋಲ್ ದರ ಏರಿಕೆ: ಬೆಂಗಳೂರಿನಲ್ಲಿ 10 ದಿನಗಳಲ್ಲಿ 4.50 ರೂಪಾಯಿ ಹೆಚ್ಚಳ; ಇಲ್ಲಿದೆ ದರಪಟ್ಟಿ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಯುಗಾದಿ, ರಂಜಾನ್ ಹಬ್ಬಕ್ಕೆ 2000 ವಿಶೇಷ ಬಸ್: ಮುಂಗಡ ಟಿಕೆಟ್ ಗೆ ರಿಯಾಯ್ತಿ ಘೋಷಿಸಿದ KSRTC -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ











Click it and Unblock the Notifications