ಬೆಂಗಳೂರು ಅಗ್ನಿ ದರುಂತ: ಅಗ್ನಿ ಸುರಕ್ಷತೆಗೆ ಹೋಟೆಲುಗಳ ಸಂಘದ ಕ್ರಮಗಳೇನು?
ಬೆಂಗಳೂರು, ಅಕ್ಟೋಬರ್ 22: ಬೆಂಗಳೂರಿನಲ್ಲಿ ಇತ್ತೀಚೆಗೆ ಒಂದಲ್ಲ ಒಂದು ಕಡೆ ಅಗ್ನಿ ದರುಂತೆ ನಡೆದಿದೆ. ಅದರಲ್ಲೂ ಕೋರಮಂಗಲದ ಮಡ್ ಪೈಪ್ ಕೆಫೆ ಎಂಬ ಬಾರ್ ನಲ್ಲಿ ನಡೆದ ಅವಘಡ ಭಾರೀ ಸುದ್ದಿ ಆಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ 'ಬೃಹತ್ ಬೆಂಗಳೂರು ಹೋಟೆಲುಗಳ ಸಂಘ' (BBHA) ತಮ್ಮ ಹೋಟೆಲುಗಳ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಕ್ರಮ, ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಮಡ್ ಕೆಫೆ ಪಬ್ ನಲ್ಲಿ ಅಗ್ನಿ ದುರಂತ ನಡೆದಿರುವುದು ದುರದೃಷ್ಟಕರವಾದ ಸಂಗತಿ. ನಮ್ಮ ಗ್ರಾಹಕರ ಹಾಗೂ ಕಾರ್ಮಿಕರ ಹಿತದೃಷ್ಟಿಯಿಂದ ಎಲ್ಲಾ ಸುರಕ್ಷತಾ ಕ್ರಮಗಳನ್ನು, ಮಾರ್ಗಸೂಚಿಗಳನ್ನು ಕ್ರಮಬದ್ಧವಾಗಿ ನೋಡಿಕೊಳ್ಳುವುದು ಎಲ್ಲಾ ಮಾಲೀಕರ ಕರ್ತವ್ಯವಾಗಿರುತ್ತದೆ. ಈಗಾಗಲೇ ಹೆಚ್ಚಿನ ಮಾಲೀಕರು ಇದರ ಬಗ್ಗೆ ಸಂಪೂರ್ಣವಾದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಅಗತ್ಯವಿರುವ Fire Extinguisher ಮತ್ತು ಗ್ಯಾಸ್ ಬಳಕೆಯ ಬಗ್ಗೆ ತಿಳುವಳಿಕೆಗಳನ್ನು ಕೊಟ್ಟಿರುತ್ತಾರೆ. ಹೀಗಿದ್ದರೂ ಯಾವುದೇ ಕಾರಣಕ್ಕೂ ನಮ್ಮ ಅಜಾಗರೂಕತೆಯಿಂದ ದುರಂತಗಳು ನಡೆಯಬಾರದೆಂಬುದು ಹೋಟೆಲ್ ಮಾಲೀಕರ ಸಂಘದ ಆಶಯ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಇನ್ನೂ ಹೆಚ್ಚಿನ ಸುರಕ್ಷತಾ ಕಾರ್ಯಕ್ರಮಗಳು, ತರಬೇತಿಗಳು, ಪೋಸ್ಟರ್ ಗಳು ಹಾಗೂ ಮಾರ್ಗಸೂಚಿಗಳನ್ನು ನಮ್ಮ ಎಲ್ಲಾ ಸದಸ್ಯರಿಗೆ ಹೆಚ್ಚಿನ ರೀತಿಯಲ್ಲಿ ತಿಳಿಯಪಡಿಸಲು ಮುಂದಾಗಲಿದ್ದೇವೆ.
ನೋಟಿಸ್ ನೀಡಿ ಸರಿಪಡಿಸಿ
ಅಗ್ನಿ ದುರಂತ ಎಂಬುದು ಒಂದು ಆಕಸ್ಮಿಕ. ಪ್ರತಿಯೊಂದು ಬಾರ್ ಅಥವಾ ಪಬ್ ಸರ್ಕಾರದ ನಿಯಮದ ಪ್ರಕಾರ ಪರವಾನಿಗೆ (License) ಪಡೆದು ನಡೆಸಲಾಗುತ್ತದೆ. ಕಟ್ಟಡ ನಿರ್ವಹಣೆ, ಕಾರ್ಮಿಕರ ಸಂಬಳ, ತೆರಿಗೆ ಹಾಗೂ ಇತರ ಖರ್ಚು ವೆಚ್ಚಗಳ ಹೊರೆ ಬಹಳಷ್ಟು ಇರುವುದರಿಂದ ಯಾವುದೇ ತಪ್ಪು ಕಂಡಲ್ಲಿ ಮುನ್ಸೂಚನಾ ನೋಟೀಸ್ ನೀಡಿ ಸರಿಪಡಿಸಿಕೊಳ್ಳಲು ಅವಕಾಶ ನೀಡಬೇಕು. ಮುಚ್ಚಿಸುವುದೊಂದೇ ಪರಿಹಾರವಲ್ಲ ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

ತಕ್ಷಣ ಅಧಿಕಾರಿಗಳು ಇದರ ಕಡೆ ಗಮನಹರಿಸಿ ಅಗತ್ಯವಿರುವ ಎಲ್ಲ ರೀತಿಯ ಕಾನೂನುಗಳನ್ನು ಪರಿಪಾಲನೆ ಮಾಡಲು ನಮ್ಮೊಂದಿಗೆ ಚರ್ಚಿಸುವುದು ಸೂಕ್ತ. ನಮ್ಮ ಕಾರ್ಮಿಕರ ಹಾಗೂ ಗ್ರಾಹಕರ ಸುರಕ್ಷತೆ ಕಾಪಾಡುವಲ್ಲಿ ನಾವು ಕೂಡ ಕೈಜೋಡಿಸಲಿದ್ದೇವೆ ಎಂದರು.
ಈ ವಲಯದಿಂದ ಹೆಚ್ಚು ತೆರಿಗೆ
ಉದ್ಯಮಿಯಾಗು ಉದ್ಯೋಗ ಕೊಡು ಎಂದು ಹೇಳುವ ಸರ್ಕಾರದ ನುಡಿಗೆ ಅನುಗುಣವಾಗಿ ಪ್ರತಿಯೊಂದು ಉದ್ಯಮಿಯೂ ಕೂಡ ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವ, ರಾಜ್ಯದ ಬೆಳವಣಿಗೆಗೆ ಬಹಳಷ್ಟು ತೆರಿಗೆಯನ್ನು ಸಂದಾಯ ಮಾಡುತ್ತಿರುವ ಉದ್ಯಮಿಗಳಿಗೆ ಈ ರೀತಿಯ ಅವೈಜ್ಞಾನಿಕವಾದ ತೀರ್ಮಾನವನ್ನು ತೆಗೆದುಕೊಳ್ಳುತ್ತಿರುವುದು ಸಮಂಜಸವಲ್ಲ. ಈ ವಿಚಾರದ ಕುರಿತು ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರದ ಗಮನಕ್ಕೆ ತರಲಿದ್ದೇವೆ ಎಂದು ಹೇಳಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ?












Click it and Unblock the Notifications