Krishi Mela 2024: ಬೆಂಗಳೂರು 'ಕೃಷಿ ಮೇಳ'ಕ್ಕೆ ದಿನಾಂಕ ಫಿಕ್ಸ್, ವಿಶೇಷತೆಗಳೇನು?
ಬೆಂಗಳೂರು, ಸೆಪ್ಟಂಬರ್ 18: ಬೆಂಗಳೂರು ಗಾಂಧಿ ಕೃಷಿ ವಿಜ್ಞಾನ ಕೇಂದ್ರ (GKVK) ವತಿಯಿಂದ ನವೆಂಬರ್ ತಿಂಗಳಲ್ಲಿ ಪ್ರಸಕ್ತ ಸಾಳಿನ 'ಬೃಹತ್ ಕೃಷಿ ಮೇಳ 2024' ಆಯೋಜನೆ ಮಾಡಿದೆ. ಇದರಲ್ಲಿ ರೈತರಿಗೆ ಆದಾಯ ಹೆಚ್ಚಿಸುವ ಹೊಸ ಹೊಸ ಬೀಜ ತಳಿ ಬಿಡುಗಡೆ ಆಗಲಿವೆ. ಕೃಷಿ ತಾಂತ್ರಿಕ ಸಲಕರಣೆಗಳು ಪರಿಚಯಗೊಳ್ಳಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಳ ಉದ್ಘಾಟಿಸುವ ಸಾಧ್ಯತೆ ಇದೆ.
ಬೆಂಗಳೂರಿನ ಯಲಹಂಕದಲ್ಲಿ ನಡೆಯಲಿರುವ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (GKVK) ಆವರಣದಲ್ಲಿ ಮೂರು ದಿನ ರೈತರ ಜಾತ್ರೆ ರೀತಿಯಲ್ಲಿ ಈ ಕೃಷಿ ಮೇಳ ನಡೆಯುತ್ತದೆ. ಈ ಭಾರಿ 'ಹವಾಮಾನ ಚತುರ ಡಿಜಿಟಲ್ ಕೃಷಿ' ಎಂಬ ಘೋಷವಾಕ್ಯದೊಂದಿಗೆ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಜಿಕೆವಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೆಕ್ಕೆಜೋಳ, ಸೂರ್ಯಕಾಂತಿ ಹೊಸ ತಳಿ ಬಿಡುಗಡೆ
ಇನ್ನೂ ಈ ಮೇಳದಲ್ಲಿ ವಿಶೇಷವಾಗಿ ಅಧಿಕ ಇಳುವರಿ ಕೊಡುವ ನಾಲ್ಕು ಮೆಕ್ಕೆಜೋಳ ತಳಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಇದರೊಂದಿಗೆ ಅಲಸಂಧಿ, ಜೋಳ, ಸೋರ್ಯಕಾಂತಿ ಹೊಸ ತಳಿಗಳು ಲೋಕಾರ್ಪಣೆಗೊಳ್ಳಲಿವೆ. ಅಲ್ಲದೇ ಕಳೆದ ನಿರ್ಮೂಲನೆ, ಕೀಟ ಹತೋಟಿಗೆ ಇಟ್ಟುಕೊಳ್ಳಬಹುದಾದ ತಾಂತ್ರಿಕತೆಗಳು ರೈತರಿಗೆ ಪರಿಚಿತಗೊಳ್ಳಲಿವೆ. ಅಗತ್ಯ ಸಲಹೆ ಸೂಚನೆಗಳು ರೈತರಿಗೆ ಈ ಮೇಳದಿಂದ ಸಿಗಲಿವೆ.
ಇನ್ನೂ ಒಂದೇ ಹೆಕ್ಟೇರ್ಗೆ 80 ದಿನಗಳಲ್ಲಿ 24 ಕ್ವಿಂಟಾಲ್ ನಷ್ಟು ಇಳುವರಿ ನೀಡುವ ಕೆಬಿಎಸ್ಎಚ್ 90 ಸೂರ್ಯಕಾಂತಿ ತಳಿಯನ್ನು ಕೃಷಿ ವಿಜ್ಞಾನ ಕೇಂದ್ರ ಅಭಿವೃದ್ಧಿ ಪಡಿಸಿದೆ. ಅಧಿಕ ಇಳುವರಿ ಜೊತೆಗೆ ಉತ್ತಮ ಗುಣಮಟ್ಟದ್ದಾಗುವ ಕಾರಣ ಅಧಿಕ ತೈಲ ಅಂಶ ಈ ಸೂರ್ಯ ಕಾಂತಿಯಲ್ಲಿ ಇರಲಿದೆ.
ಮುಸುಕಿನ ಜೋಳದಲ್ಲಿ ಎಂಎಎಚ್ 15ರಿಂದ 84 ಎಂಬ ಮಧ್ಯಮಾವಧಿಯ ತಳಿಯನ್ನು ವಿಶ್ವವಿದ್ಯಾಲಯ ಕಂಡು ಹಿಡಿದಿದೆ. ಈ ಮೆಕ್ಕೆಜೋಳದ ತಳಿಯು ಹೆಕ್ಟೆರ್ಗೆ 92ರಿಂದ 95ಕ್ವಿಂಟಾಲ್ ಇಳುವರಿ ನೀಡುವ ಸಾಮರ್ಥ್ಯ ಹೊಂದಿವೆ. ಈ ನೂತನ ತಳಿಗಳು ರೈತರ ಆದಾಯ ಹೆಚ್ಚಿಸಲಿವೆ ಎಂಬ ವಿಶ್ವಾಸ ವಿಶ್ವವಿದ್ಯಾಲಯ ಹೊಂದಿದೆ.
ಸುಧಾರಿತ ಬೇಸಾಯ ವ್ಯವಸ್ಥೆಗೆ ಆದ್ಯತೆ
ವಿಶ್ವವಿದ್ಯಾಲಯವು ಸುಧಾರಿತ ಕೃಷಿ ವ್ಯವಸ್ಥೆ ಆದ್ಯತೆ ನೀಡುತ್ತಿದೆ. ಹೊಸ ಹೊಸ ತಂತ್ರಜ್ಞಾನಗಳ ಆವಿಷ್ಕಾರ ಮಾಡಿ ರೈತರಿಗೆ ಪರಿಚಯ ಮಾಡುತ್ತಿದೆ. 19 ಹೊಸ ತಾಂತ್ರಿಕತೆಗಳನ್ನು ವಿವಿ ಶೋಧಿಸಿದೆ. ಕೈ ಚಾಲಿತ ರಾಗಿ, ಗೊಬ್ಬರದ ಕೂರಿಗೆ ಸಂಶೋಧಿಸಿದೆ. ಇದರಿಂದ 1.5 ಎಕರೆ ಭೂಮಿಯನ್ನು ಇಬ್ಬರೇ ಬಿತ್ತನೆ ಮಾಡಬಹುದು.
ಅದೇ ರೀತಿ ಶೇಂಗಾವನ್ನು ಗಿಡದಿಂದ ಬೇರ್ಪಡಿಸುವ ಯಂತ್ರವನ್ನು ಆವಿಷ್ಕರಿಸಿದೆ. ಶೇಂಗಾ ಜೊತೆಗೆ ಸೂರ್ಯಕಾಂತಿ, ಮೆಕ್ಕಜೋಳ ಬೀಜಗಳನ್ನು ಬೇರ್ಪಡಿಸಲು ಈ ಯಂತ್ರಗಳನ್ನು ಬಳಸಬಹುದು. ಇದರೊಂದಿಗೆ ಅನೇಕ ಹಸು, ಹೋರಿ ತಳಿಗಳನ್ನು ಖರೀದಿಸಬಹುದು. ಹೈನುಗಾರಿಕೆ, ತೋಟಗಾರಿಕೆಗೆ, ಇನ್ನಿತರ ವಾಣಿಜ್ಯ ಬೆಳೆಗಳಿಗೆ ಉಪಯುಕ್ತ ಸಲಹೆಗಳು ಇಲ್ಲಿ ನೀಡಲಾಗುತ್ತಿದೆ.
ಇನ್ನೂ ಕೃಷಿ ವಲಯದಲ್ಲಿ ಅಸಾಧಾರಣ ಸಾಧನೆ ಮಾಡಿದವರನ್ನು ವಿಶ್ವವಿದ್ಯಾಲಯ ಇದೇ ವೇಳೆ ಸನ್ಮಾನಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ...
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ












Click it and Unblock the Notifications