ಚಂದ್ರನ ಮೇಲೆ ಸ್ವಂತ ಆಕಾಶಕಾಯ ಇಳಿಸಲಿರುವ ಬೆಂಗಳೂರು ಸಂಸ್ಥೆ!
ಚಂದ್ರನ ಮೇಲೆ ತನ್ನದೇ ಸ್ವಂತ ಆಕಾಶಕಾಯ ಇಳಿಸಲು ಬೆಂಗಳೂರಿನ ಕಂಪನಿ ಆಲೋಚನೆ. ಇದು ಸಾಧ್ಯವಾದರೆ, ಚಂದ್ರನಲ್ಲಿಗೆ ತನ್ನ ಆಕಾಶಕಾಯ ಹಾರಿಸಿದ ವಿಶ್ವದ ಮೊದಲ ಖಾಸಗಿ ಸಂಸ್ಥೆಯೆಂಬ ಹೆಗ್ಗಳಿಕೆ ಇಂಡಸ್ ಕಂಪನಿಯ ಪಾಲಾಗಲಿದೆ.
ಬೆಂಗಳೂರು, ಜುಲೈ 22: ಎಲ್ಲವೂ ಅಂದುಕೊಂಡಂತೆ ನಡೆದರೆ, ಚಂದ್ರನ ಅಂಗಳದಲ್ಲಿ ತನ್ನದೇ ಆದ ಆಕಾಶಕಾಯವನ್ನು ಇಳಿಸಿದ ವಿಶ್ವದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಬೆಂಗಳೂರಿನ ಇಂಡಸ್ ಸಂಸ್ಥೆ ಪಾತ್ರವಾಗಲಿದೆ.
ಶುಕ್ರವಾರ ಸಂಜೆ, ಕಂಪನಿಯ ಸಂಸ್ಥಾಪಕರಾದ ರಾಹುಲ್ ನಾರಾಯಣ್ ಅವರು, ದೆಹಲಿಯಲ್ಲಿ ತಮ್ಮ ಸಂಸ್ಥೆಯ ಈ ಯೋಜನೆಯ ಬಗ್ಗೆ ವಿಸ್ತೃತ ವರದಿ ನೀಡಿದರು.
ಚಂದ್ರನಲ್ಲಿಗೆ ಹೋಗಿ ತಲುಪಲಿರುವ ತಮ್ಮ ಸಂಸ್ಥೆಯ ಸಂಶೋಧನಾ ವಾಹನವನ್ನು ಸಿದ್ಧಪಡಿಸಲಾಗಿದ್ದು, ಅದರ ಅಂತಿಮ ಸ್ಪರ್ಶದ ಕಾರ್ಯ ಸದ್ಯಕ್ಕೀಗ ನಡೆಯುತ್ತಿದೆ. ಆಗಸ್ಟ್ ತಿಂಗಳ ಎರಡನೇ ವಾರದಿಂದ ಈ ವಾಹನದ ತಪಾಸಣೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಿಜ್ಞಾನಿಗಳು ನಡೆಸಲಿದ್ದಾರೆ.

ಅದರಲ್ಲಿ ಆ ವಾಹನವು ಉತ್ತೀರ್ಣವಾದ ನಂತರ, ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಇಸ್ರೋ ಉಡಾವಣಾ ಕೇಂದ್ರದಿಂದ ರಾಕೆಟ್ ಮೂಲಕ ಆ ವಾಹನವನ್ನು ಚಂದ್ರನ ಕಡೆಗೆ ಉಡಾವಣೆಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಈ ಆಕಾಶಕಾಯವನ್ನು ತಯಾರಿಸಲು ಇಸ್ರೋದ 24 ನಿವೃತ್ತ ವಿಜ್ಞಾನಿಗಳ ಸಲಹಾ ಮಂಡಳಿಯನ್ನು ರಚಿಸಲಾಗಿದೆ. ಈ ಮಂಡಳಿಯ ಸಲಹೆಗಳ ಮೇರೆಗೆ 100ಕ್ಕೂ ಹೆಚ್ಚು ತಂತ್ರಜ್ಞರು ಈ ಆಕಾಶಕಾಯದ ಸೃಷ್ಟಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 600 ಕೆಜಿ ತೂಕವಿರುವ ಈ ಆಕಾಶಕಾಯದೊಂದಿಗೆ 6 ಕೆಜಿಯ, ರೋವರ್ ಕೂಡ ಜತೆಗೆ ಸಾಗಲಿದೆ.

ಇತ್ತೀಚೆಗೆ, ವಿಶ್ವ ವಿಖ್ಯಾತ ಅಂತರ್ಜಾಲ ಸರ್ಚ್ ಇಂಜಿನ್ ಸಂಸ್ಥೆಯಾದ ಗೂಗಲ್, ಚಂದ್ರನಲ್ಲಿಗೆ ತಮ್ಮ ಖಾಸಗಿ ಸಂಶೋಧನಾ ವಾಹನಗಳನ್ನು ಇಳಿಸುವ ಇಚ್ಛೆಯುಳ್ಳ ಕಂಪನಿಗಳಿಗೆ ಸ್ಪರ್ಧೆಯನ್ನು ಆಯೋಜಿಸಿತ್ತು.
ಆ ಸ್ಪರ್ಧೆಯಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾದ ಐದು ಕಂಪನಿಗಳಲ್ಲಿ ಇಂಡಸ್ ಸಂಸ್ಥೆಯೂ ಒಂದು. ಶೇ. 90ರಷ್ಟು ಸ್ವಯಂ ಖರ್ಚಿನಲ್ಲಿಯೇ ಚಂದ್ರನಲ್ಲಿಗೆ ಸಾಗುವ ಯೋಜನೆಯನ್ನು ಕಂಪನಿ ಕೈಗೆತ್ತಿಕೊಂಡಿರುವುದು ದೊಡ್ಡ ಸಾವಾಲಾಗಿದೆ ಎಂದು ಕಂಪನಿಯ ಸಂಸ್ಥಾಪಕ ರಾಹುಲ್ ನಾರಾಯಣ್ ತಿಳಿಸಿದ್ದಾರೆ.
-
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Artemis 2 Mission: 54 ವರ್ಷಗಳ ಬಳಿಕ ಮತ್ತೆ ಚಂದ್ರನತ್ತ ಐತಿಹಾಸಿಕ ಪಯಣ, ಆರ್ಟೆಮಿಸ್-2 ಭರ್ಜರಿ ಆರಂಭ -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ












Click it and Unblock the Notifications