Beer Shortage: ನೀರಿನ ಕೊರತೆ ಬಳಿಕ ಬೆಂಗಳೂರಿನಲ್ಲಿ ಬಿಯರ್ ಬಿಕ್ಕಟ್ಟು!?
ಬೆಂಗಳೂರು, ಮೇ. 10 : ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ಇನ್ನು ಸಂಪೂರ್ಣವಾಗಿ ಕಡಿಮೆಯಾಗಿಲ್ಲ. ಒಂದು ವಾರದಿಂದ ಸಿಲಿಕಾನ್ ಸಿಟಿಯಲ್ಲಿ ಮಳೆ ಬರುತ್ತಿದ್ದು, ತಾಪಮಾನ ಒಂದು ಹಂತಕ್ಕೆ ಬಂದಿದೆ. ಆದರೂ ಬಿಸಿಲು ಸಂಪೂರ್ಣವಾಗಿ ಕಡಿಮೆಯಾಗಿಲ್ಲ. ಇದರ ಜೊತೆ ಜೊತೆಗೆ ನೀರಿನ ಬಿಕ್ಕಟ್ಟಿಗೆ ಸಾಥ್ ನೀಡುತ್ತಿದೆ ಬಿಯರ್ ಬಿಕ್ಕಟ್ಟು!.
ಹೌದು... ಇತರ ನಗರಗಳ ಬ್ರೂವರೀಸ್ಗೆ ಹೋಲಿಸಿದರೆ ಬೆಂಗಳೂರಿನಲ್ಲಿರುವ ಬ್ರೂವರೀಸ್ ವಿಶಿಷ್ಟವಾಗಿವೆ. ಏಕೆಂದರೆ, ರಾಜಧಾನಿಯಲ್ಲಿನ ಕೋಟ್ಯಾಂತರ ಜನರ ಪ್ರಮುಖ ಹ್ಯಾಂಗ್ಔಟ್ ತಾಣಗಳಾಗಿ ಕಾರ್ಯನಿರ್ವಹಿಸುತ್ತವೆ. ಆದರೆ, ಈಗ ಬೆಂಗಳೂರಿನ ಈ ಪಬ್, ರೆಸ್ಟೋರೆಂಟ್, ಬಾರ್ಗಳು ಕೂಡ ನೀರಿನ ಸಮಸ್ಯೆಯಂತೆಯೇ ಬೆಂಗಳೂರು ಕೂಡ ಬಿಯರ್ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ವರದಿಯಾಗಿದೆ.

ಬೆಂಗಳೂರಿನಲ್ಲಿ ಬಿಯರ್ ಬಿಕ್ಕಟ್ಟು ಏಕೆ?
ದಿ ಇಂಡಿಯನ್ ಎಕ್ಸ್ಪ್ರೆಸ್ನ ವರದಿಯ ಪ್ರಕಾರ, ನಗರದಲ್ಲಿ ಹೆಚ್ಚಿನ ತಾಪಮಾನದಿಂದ ಅನೇಕ ಸ್ಥಳಗಳು ಬಿಯರ್ ಪ್ರಿಯರಿಂದ ತುಂಬಿ ತುಳುಕುತ್ತಿವೆ. ಅನೇಕ ಗ್ರಾಹಕರು ತಮ್ಮ ಎಂದಿನ ಹಾರ್ಡ್ ಡ್ರಿಂಕ್ಸ್ನಿಂದ ತಣ್ಣಗೀನ ಬಿಯರ್ ಕಡೆಗೆ ಹೆಚ್ಚಿನ ಒಲವು ತೋರುತ್ತಿದ್ದು, ಬಿಯರ್ಗೆ ಬೇಡಿಕೆ ಹೆಚ್ಚಾಗಿದೆ. ಇದು ಬೃಹತ್ ಬೇಡಿಕೆಯು ಪೂರೈಕೆಗೆ ಅಡ್ಡಿಯಾಗುತ್ತಿದೆ. ಹೀಗಾಗಿ ಬೇಡಿಕೆಗೆ ಅನುಗುಣವಾಗಿ ಬಿಯರ್ ಪೂರೈಸಲು ಸಾಧ್ಯವಾಗುತ್ತಿಲ್ಲ.
ಒಂದೇ ಮಧ್ಯ ಅಂಗಡಿಯಲ್ಲಿ ಈ ವರ್ಷದ ಮೇ ತಿಂಗಳವರೆಗೆ ಸುಮಾರು 30,000 ಲೀಟರ್ ಬಿಯರ್ ಮಾರಾಟವಾಗಿದ್ದರೆ, ಕಳೆದ ವರ್ಷ, ಇಡೀ ಬೇಸಿಗೆಯಲ್ಲಿ ಕೇವಲ 9,000 ಲೀಟರ್ ಬಿಯರ್ ಮಾತ್ರ ಕಂಡುಬಂದಿದೆ. ಭಾರೀ ಮಾರಾಟದಿಂದಾಗಿ ಹೆಚ್ಚು ಬ್ಯುಸಿನೆಸ್ ಆಗುವ ವಾರಾಂತ್ಯದಲ್ಲಿಯೂ ಪಬ್, ರೆಸ್ಟೋರೆಂಟ್ ಹೊರಗೆ ಸ್ಟಾಕ್ ಇಲ್ಲ ಎಂಬ ಬೋರ್ಡ್ಗಳು ಕಾಣಿಸುತ್ತಿವೆ.

ಇದರ ಜೊತೆಗೆ ಬೆಂಗಳೂರಿನಲ್ಲಿ ಕೆಲವು ವರ್ಷಗಳ ಹಿಂದೆ ಪ್ರಾರಂಭವಾದ ಫ್ರೂಟ್ ಟೆಸ್ಟ್ ಬಿಯರ್ಗಳ ಟ್ರೆಂಡ್ ನಿಧಾನವಾಗಿ ಇಳಿಕೆಯಾಗುತ್ತಿದೆ. "ಬಿಯರ್ನ ಹೆಚ್ಚಿನ ಉತ್ಪಾದನೆಯಿಂದಾಗಿ, ನಾವು ಬಿಯರ್ ತಯಾರಿಸಲು ಪ್ರೀಮಿಯಂ ಹಣ್ಣುಗಳನ್ನು ಬಳಸಲಾಗುವುದಿಲ್ಲ. ಬಿಯರ್ ತಯಾರಿಸಲು ಕಡಿಮೆ ಗುಣಮಟ್ಟದ ಹಣ್ಣುಗಳನ್ನು ಬಳಸಿದರೆ ಮಾರಾಟ ಕೂಡ ಉತ್ತಮವಾಗುವುದಿಲ್ಲ. ಗ್ರಾಹಕರು ಕೂಡ ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲ. ಹೀಗಾಗಿ ಅವರು ಹಣ್ಣಿನ ಬಿಯರ್ಗಳ ಬದಲಿಗೆ ಸಾಮಾನ್ಯ ಬಿಯರ್ಗಳಿಗೆ ಮೊರೆ ಹೋಗುತ್ತಿದ್ದಾರೆ" ಎಂದು ಅಂಗಡಿ ಮಾಲೀಕರೊಬ್ಬರು ತಿಳಿಸಿದ್ದಾರೆ.
ಇತ್ತ, ಸಾಮಾನ್ಯವಾಗಿ ಪಬ್ಗಳು ನೀಡುತ್ತಿದ್ದ ಹ್ಯಾಪಿ ಅವರ್ಸ್ ಅಥವಾ ಬೈ1 ಗೆಟ್ 1 ಆಫರ್ಗನ್ನು ಕೂಡ ನೀಡುತ್ತಿಲ್ಲ. ಸದ್ಯ ಐಪಿಎಲ್ ಪಂದ್ಯಗಳು ನಡೆಯುತ್ತಿದ್ದು, ಪಬ್, ರೆಸ್ಟೋರೆಂಟ್, ರೆಸಾರ್ಟ್ಗಳು ಗ್ರಾಹಕರನ್ನು ಸೆಳೆಯಲು ಅಲ್ಲಿ ಗ್ರಾಹಕರಿಗೆ ಪಂದ್ಯಗಳನ್ನು ಪ್ರದರ್ಶಿಸಲಾಗುತ್ತದೆ.
-
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ












Click it and Unblock the Notifications