Get Updates
Get notified of breaking news, exclusive insights, and must-see stories!

RRR Program: ಜಲಮೂಲಗಳ ಪುನಶ್ಚೇತನಕ್ಕೆ 'RRR ಜನಾಂದೋಲನ': BWSSB

ಬೆಂಗಳೂರು, ಏಪ್ರಿಲ್ 10: ಬೆಂಗಳೂರಿನ ಜಲಮೂಲಗಳನ್ನ ಪುನಶ್ಚೇತನಗೊಳಿಸುವ ಮೂಲಕ ನಗರವನ್ನು ಮುಂದಿನ ಎರಡು ವರ್ಷದ (2026) ಒಳಗಾಗಿ ವಾಟರ್‌ ಸರ್‌ಪ್ಲಸ್‌ ಮಾಡಲು ಜಲಮಂಡಳಿ ತಿಳಿಸಿದೆ. ಈ ನಿಟ್ಟಿನಲ್ಲಿ ಜಲಮಂಡಳಿ ವತಿಯಿಂದ 'ತ್ರಿಬ್ಬಲ್ಆರ್ ಜನಾಂದೋಲನ' ಆರಂಭಿಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಹೇಳಿದರು.

ಬುಧವಾರ ಬೆಂಗಳೂರಿನ 'ಅರ್ಕಾವತಿ' ಮತ್ತು 'ವೃಷಭಾವತಿ' ನದಿ ಪಾತ್ರದ ಪರಿಶೀಲನೆ ನಡೆಸಿದ ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಈ ಜನಾಂದೋಲನಕ್ಕೆ ಬೆಂಗಳೂರು ನಾಗರಿಕರು ಹೆಚ್ಚಿನ ಪ್ರಮಾಣದಲ್ಲಿ ಕೈ ಜೋಡಿಸುವಂತೆ ಅವರು ಕರೆ ನೀಡಿದರು.

Bengaluru BWSSB Has Planned to RRR Janandolana program for revival of water Resource

ಅರ್ಕಾವತಿ-ವೃಷಭಾವತಿ ನೀರಿನ ಸಂಪರ್ಕಕ್ಕೆ ತೊಂದರೆ

ನಗರದ ಪ್ರಮುಖ ಜಲಾಶಗಳಾದ ಅರ್ಕಾವತಿ ಮತ್ತು ವೃಷಭಾವತಿ ನದಿಗಳ ಪಾತ್ರದಲ್ಲಿ ಬಹಳಷ್ಟು ಒತ್ತುವರಿಯಾಗಿದೆ ಎಂಬುದನ್ನು ಅಧಿಕಾರಿಗಳು ಗಮನಿಸಿದರು. ನೀರಿನ ಸಮರ್ಪಕ ಹರಿವಿಗೆ ತೊಂದರೆಯಾಗಿದೆ. ಇಂದು ವೃಷಭಾವತಿ ಹಾಗೂ ಅರ್ಕಾವತಿ ವ್ಯಾಲಿಯಲ್ಲಿನ ನೀರಿನ ಹರಿವಿನ ಬಗ್ಗೆ ಪರಿಶೀಲನೆ ನಡೆಸಲಾಯಿತು.

ಕೆರೆಗಳ ಈ ಒತ್ತುವರಿಯನ್ನು ತೆರವುಗೊಳಿಸುವ ಮೂಲಕ ನೀರಿನ ಸರಾಗ ಹರಿವಿಗೆ ಅನುವು ಮಾಡಿಕೊಡುವುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ನಾಗರೀಕರ ಪಾತ್ರವೂ ಬಹಳ ಮುಖ್ಯವಾಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪುನರುಜ್ಜೀವನಕ್ಕೆ ಕೈಜೋಡಿಸಬೇಕು ಎಂದರು.

ಮಳೆ ನೀರು ಕೊಯ್ಲು-ಮರುಪೂರಣಕ್ಕೆ ಒತ್ತು

ಬೆಂಗಳೂರಿನಲ್ಲಿ ಮಳೆ ನೀರು ಕೊಯ್ಲು ಹಾಗೂ ಅದರ ಮರುಪೂರಣ ಕಡ್ಡಾಯಗೊಳಿಸಲಾಗಿದೆ. ಆದರೆ, ಬಹುಪಾಲು ಜನರು ತಮ್ಮ ಕಟ್ಟಡಗಳಲ್ಲಿ ಮಳೆನೀರನ್ನ ಕೊಯ್ಲು ಅಳವಡಿಸಿದ್ದರೂ ಅದನ್ನು ಮರುಪೂರಣ ಮಾಡುವ ವ್ಯವಸ್ಥೆ ಕಲ್ಪಿಸಿರುವುದಿಲ್ಲ.

Bengaluru BWSSB Has Planned to RRR Janandolana program for revival of water Resource

ಹೀಗಾಗಿ ಸಮರ್ಪಕವಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಂಡಿರುವಂತಹ ಹಾಗೂ ಆ ನೀರಿನ ಸದ್ಬಳಕೆ (ಮರುಪೂರಣ ಅಥವಾ ಬಳಕೆ) ಮಾಡಲು ವ್ಯವಸ್ಥೆ ಮಾಡಿರುವಂತಹ ಜನರಿಗೆ ಜಲಮಂಡಳಿ ಪ್ರೋತ್ಸಾಹ ನೀಡಲಿದೆ. ಇದಕ್ಕೆ "ಹೆಮ್ಮೆಯ ಬೆಂಗಳೂರು ನಾಗರಿಕ" ಎನ್ನುವ ಅಭಿಯಾನವನ್ನು ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ರೈನ್‌ ವಾಟರ್‌ ರಿಚಾರ್ಜಿಂಗ್

ಈ ಅಭಿಯಾನದ ಮೂಲಕ ಸಮರ್ಪಕವಾಗಿ ರೈನ್‌ ವಾಟರ್‌ ರಿಚಾರ್ಜಿಂಗ್‌ ಅಳವಡಿಸಿಕೊಂಡಿರುವ ಕಟ್ಟಡಗಳ ಮೇಲೆ ಜಲಮಂಡಳಿಯ ವತಿಯಿಂದ ನಮ್ಮ "ಹೆಮ್ಮೆಯ ಬೆಂಗಳೂರು ನಾಗರೀಕ" ಎನ್ನುವ ಭಿತ್ತಿಪತ್ರವನ್ನು (ಸ್ಟಿಕ್ಕರ್‌ ಅನ್ನ) ಅಂಟಿಸಲಾಗುವುದು ಹಾಗೂ ಅವರ ನೀರಿನ ಬಿಲ್‌ನಲ್ಲೂ ಹೆಮ್ಮೆಯ ಬೆಂಗಳೂರು ನಾಗರೀಕ ಎನ್ನುವುದನ್ನ ನಮೂದಿಸಲಾಗುವುದು. ಮುಂದಿನ ದಿನಗಳಲ್ಲಿ ಈ ಕಟ್ಟಡಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲೂ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಬರೋಬ್ಬರಿ 185 ಕೆರೆಗಳ ಪುನಶ್ಚೇತನಕ್ಕೆ ನಿರ್ಧಾರ

ಬೆಂಗಳೂರಿನಲ್ಲಿ ನೂರಾರು ಕೆರೆಗಳು ಇದ್ದವು ಎಂದು ಇತಿಹಾಸ ಹೇಳುತ್ತದೆ. ಒತ್ತುವರಿ ಆಗಿ ಆಗಿ ಕೆರೆಗಳ ಸಂಖ್ಯೆ ಕಡಿಮೆ ಆಗಿದೆ. ಹಾಲಿ ಇರುವ ಕೆರೆಗಳ ಪೈಕಿ 185 ಕೆರೆಗಳನ್ನು ಪುನಃಶ್ಚೇತನಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.

ಈಗಾಗಲೇ 15 ಕ್ಕೂ ಹೆಚ್ಚು ಕೆರೆಗಳನ್ನು ಸಂಸ್ಕರಿಸಿದ ನೀರಿನಿಂದ ತುಂಬಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಗರದ ವ್ಯಾಪ್ತಿಯಲ್ಲಿರುವಂತಹ 185 ಕೆರೆಗಳನ್ನು ಪುನಃಶ್ಚೇತನಗೊಳಿಸುವುದು ಜಲಮಂಡಳಿಯ ಗುರಿಯಾಗಿದೆ. ಅವುಗಳಲ್ಲಿನ ಹೂಳು ತೆಗೆಯುವುದು, ಉತ್ತಮ ನೀರನ್ನ ತುಂಬಿಸುವುದು ಈ ಮೂಲಕ ಅಂತರ್ಜಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಜಲಮಂಡಳಿ ಅಧ್ಯಕ್ಷರು ವಿವರಿಸಿದರ.

RRR ಕಾರ್ಯಕ್ರಮಗಳ ಪಟ್ಟಿ

* ರಿವೈವಲ್‌ ಆಫ್‌ ಅರ್ಕಾವತಿ ಮತ್ತು ವೃಷಭಾವತಿ

* ರಿಚಾರ್ಜಿಂಗ್‌ ಆಫ್‌ ರೈನ್‌ ವಾಟರ್‌ ಗೆ ಪ್ರೋತ್ಸಾಹ

* ನಗರದ 185 ಕೆರೆಗಳ ರಿಜ್ಯೂವಿನೇಷನ್‌

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+