Bengaluru: 'ನಂದಿನಿ'ಗಾಗಿ ಕಾಂಗ್ರೆಸ್ ಅಮುಲ್ಗಾಗಿ ಬಿಜೆಪಿ ಫೈಟ್, ಏನಿದು ವಾಗ್ವಾದ?
ಬೆಂಗಳೂರು ಏಪ್ರಿಲ್ 8: ಡೈರಿ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಭಾರತದ ಎರಡು ಅಗ್ರ ಹಾಲಿನ ಬ್ರಾಂಡ್ಗಳ ಹೋರಾಟ ನಡೆಸುತ್ತಿವೆ. ಸದ್ಯ ಇದು ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ನಂದಿನಿ ಹಾಗೂ ಅಮುಲ್ ಎರಡು ಬ್ರಾಂಡ್ಗಳ ನಡುವೆ ಉತ್ಪನ್ನಗಳ ಮಾರಾಟದಲ್ಲಿ ಬಾರೀ ಪೈಪೋಟಿ ನಡೆದಿದೆ.
ಚುನಾವಣೆ ಹೊತ್ತಲ್ಲೇ ರಾಜ್ಯದಲ್ಲಿ ಹೊಸದೊಂದು ವಿವಾದ ತಲೆ ಎತ್ತಿದೆ. ಅಮುಲ್ಗೆ ಮಣೆ ಹಾಕಲು ಕೆಎಂಎಫ್ ವಿರುದ್ಧ ಕುತಂತ್ರ ನಡೆಸಿರುವ ಆರೋಪ ಕೇಳಿ ಬರ್ತಿದೆ. ಕೆಎಂಎಫ್ ಹಾಲಿನ ಬೂತ್ಗಳಲ್ಲಿ ನಂದಿನಿ ಉತ್ಪನ್ನಗಳ ಅಲಭ್ಯತೆ ಕುರಿತು ದೂರುಗಳು ಕೇಳಿ ಬರ್ತಿವೆ. ಅದರಲ್ಲೂ ಅಮೂಲ್ ರಾಜ್ಯಕ್ಕೆ ಎಂಟ್ರಿ ಕೊಟ್ಟಿರುವ ಹೊತ್ತಲ್ಲೇ ನಂದಿನಿ ಉತ್ಪನ್ನಗಳ ಕೃತಕ ಅಭಾವ ಸೃಷ್ಟಿ ಮಾಡಲಾಗುತ್ತಿದೆ ಅನ್ನೋ ಗುಲ್ಲೆದ್ದಿದೆ. ಈ ವಾದ - ವಿವಾದಗಳ ಕುರಿತ ಸಮಗ್ರ ಚಿತ್ರಣ ಇಲ್ಲಿದೆ.

ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರ್ಕಾರಗಳು ಕರ್ನಾಟಕ ಹಾಲಿನ ರೈತರ ಬ್ರಾಂಡ್ ಅನ್ನು ನಾಶಮಾಡಲು ಪ್ರಯತ್ನಿಸುತ್ತಿವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಆದರೆ ರಾಜ್ಯ ಸರ್ಕಾರ 'ನಂದಿನಿ' ಉತ್ಪನ್ನಗಳಿಗೆ ಅಡ್ಡಿಪಡಿಸುವುದಿಲ್ಲ ಎಂದು ಭರವಸೆ ನೀಡಿದೆ. 'ರಾಜ್ಯದ ಬ್ರಾಂಡ್ಗೆ ಇಂತಹ ಆತಂಕವಿದ್ದು, ನಂದಿನಿಯನ್ನು ರಕ್ಷಿಸಲು ಸರ್ಕಾರ ಮುಂದಾಗುವುದಿಲ್ಲ' ಎಂದು ಸಹಕಾರ ಸಚಿವ ಎಸ್ಟಿ ಸೋಮಶೇಖರ್ ಕೂಡ ಆರೋಪ ಮಾಡಿದ್ದಾರೆ.
ಕಳೆದ 5 ವರ್ಷಗಳಲ್ಲಿ ಕರ್ನಾಟಕದ ಹಾಲಿನ ಬ್ರಾಂಡ್ ನಂದಿನಿ ಉತ್ಪನ್ನಗಳ ಮಾರಾಟ (ಕೋಟಿಗಳಲ್ಲಿ)
2018: 3957.92
2019: 4412
2020: 4731
2021: 5356
2022(9 ತಿಂಗಳುಗಳು): 4924
ಅಮುಲ್ ಹಲವಾರು ವರ್ಷಗಳಿಂದ ಕರ್ನಾಟಕದಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಕೆಎಂಎಫ್ ವಿವಿಧ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಇತರ ರಾಜ್ಯಗಳಿಗೆ ವಿಸ್ತರಿಸುತ್ತಿದೆ. ಈಗ ಹಾಲು ಮತ್ತು ಮೊಸರನ್ನು ಪರಿಚಯಿಸಲು ಬಯಸಿದೆ ಎಂದು ಸಚಿವರು ಹೇಳಿದರು. ನಂದಿನಿಯ ಗುಣಮಟ್ಟ, ತಾಜಾತನ ಮತ್ತು ಕೈಗೆಟುಕುವ ಬೆಲೆಗೆ ಅಮುಲ್ ಹೊಂದಿಕೆಯಾಗುವುದಿಲ್ಲ, ಆದರೂ ಅದು ರಾಜ್ಯ ರೈತರ ಬ್ರಾಂಡ್ ಅನ್ನು ನಾಶ ಪಡಿಸುವ ಸಂಚನ್ನು ರೂಪಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕೆಎಂಎಫ್ಗೆ ಸವಾಲು ಹಾಕಿಲ್ಲ: ಅಮುಲ್ ಎಂಡಿ
ಈ ಬಗ್ಗೆ ಮಾತನಾಡಿದ ಸೋಮಶೇಖರ್ ಅವರು "ಅಮುಲ್ ಪ್ರತಿ ಲೀಟರ್ಗೆ 54 ರೂ.ಗೆ ಹಾಲನ್ನು ಮಾರಾಟ ಮಾಡುತ್ತಿದ್ದರೆ, ಕೆಎಂಎಫ್ ಲೀಟರ್ಗೆ 39 ರೂ.ಗೆ ಮಾರಾಟ ಮಾಡುತ್ತಿದೆ. ಈ ಯಾವುದೇ ನಿಯತಾಂಕಗಳಲ್ಲಿ ಅಮುಲ್ ನಂದಿನಿಗೆ ಪ್ರತಿಸ್ಪರ್ಧಿಯಾಗಿಲ್ಲ" ಎಂದು ಸ್ಪಷ್ಟನೆ ನೀಡಿದರು.
ಜೊತೆಗೆ ಈ ಬಗ್ಗೆ ವಿವರಿಸಿದ ಅಮುಲ್ನ ಎಂಡಿ ಜಯನ್ ಮೆಹ್ತಾ, "ನಾವು ಮುಂದಿನ ವಾರ ಹಾಲು ಮೊಸರು ಮಾರಾಟವನ್ನು ಬೆಂಗಳೂರಿನಲ್ಲಿ ಪ್ರಾರಂಭಿಸುತ್ತಿದ್ದೇವೆ. ಅಮುಲ್ ಮತ್ತು ಕೆಎಂಎಫ್ ಉತ್ತಮ ಸಂಬಂಧವನ್ನು ಹೊಂದಿವೆ. ನಾವು ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಹಲವು ವರ್ಷಗಳಿಂದ ನಮ್ಮ ಅಸ್ತಿತ್ವವನ್ನು ಹೊಂದಿದ್ದೇವೆ. ಅವರಿಗೆ (ಕೆಎಂಎಫ್) ಸವಾಲು ಹಾಕುವ ಪ್ರಶ್ನೆಯೇ ಇಲ್ಲ. ನಾವು ಡೇಟಾವನ್ನು ನೋಡಿದ್ದೇವೆ ಮತ್ತು ಗ್ರಾಹಕರು ಆಸಕ್ತಿ ತೋರಿಸಿದ್ದಾರೆ. ಹೀಗಾಗಿ ತ್ವರಿತ ವಾಣಿಜ್ಯ ಮತ್ತು ಇ-ಕಾಮರ್ಸ್ ಮಾರ್ಗದ ಮೂಲಕ ಮಾತ್ರ ಹಾಲನ್ನು ಮಾರಾಟ ಮಾಡುತ್ತೇವೆ. ಯಾವುದೇ ಮಾರಾಟಗಾರರು ಅಥವಾ ಇತರ ಚಿಲ್ಲರೆ ವ್ಯಾಪಾರಿಗಳಿಂದಲ್ಲ" ಎಂದಿದ್ದಾರೆ.

ಅಮುಲ್ ತಾಜಾ, ಅಮುಲ್ ಗೋಲ್ಡ್ ಮತ್ತು ಅಮುಲ್ ಮೊಸರನ್ನು ಆನ್ಲೈನ್ನಲ್ಲಿ ಮಾರಾಟ ಮಾಡಲಾಗುವುದು ಎಂದು ಮೆಹ್ತಾ ಹೇಳಿದರು.
ಆನ್ಲೈನ್ ಕಿರಾಣಿ ಬಿಗ್ಬಾಸ್ಕೆಟ್ನ ಸಹ-ಸಂಸ್ಥಾಪಕ ಮತ್ತು ಸಿಇಒ ಹರಿ ಮೆನನ್, "ನಾವು ಇನ್ನೂ ಅಮುಲ್ ತಾಜಾ ಹಾಲನ್ನು ಮಾರಾಟ ಮಾಡಲು ಪ್ರಾರಂಭಿಸಿಲ್ಲ ಮತ್ತು ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ" ಎಂದು ಹೇಳಿದರು.

ಅಮುಲ್ ಉತ್ಪನ್ನಗಳನ್ನು ಖರೀದಿಸದಿರಲು ಸಿದ್ದರಾಮಯ್ಯ ಕರೆ
ಅಮುಲ್ ಬಂದರೆ ರಾಜ್ಯದ ರೈತರಿಗೆ ಮೋಸ ಮಾಡಿದಂತಾಗುತ್ತದೆ. ನಮ್ಮ ರಾಜ್ಯದ ರೈತರಿಗೆ ನಮ್ಮ ರಾಜ್ಯದಲ್ಲಿ ಮೊದಲು ಪ್ರಾಶಸ್ತ್ಯ ಸಿಗಬೇಕು. ಹೀಗಾಗಿ ಯಾವುದೇ ಅಮುಲ್ ಉತ್ಪನ್ನಗಳನ್ನು ಖರೀದಿಸುವುದಿಲ್ಲ ಎಂದು ಎಲ್ಲ ಕನ್ನಡಿಗರು ಪ್ರತಿಜ್ಞೆ ಮಾಡಬೇಕು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಕೆಎಂಎಫ್ನ ಅಧಿಕಾರಿಗಳು ಸಹಕಾರ ಚಳವಳಿಯ ತತ್ವಗಳನ್ನು ಎತ್ತಿ ತೋರಿಸಲು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ಮತ್ತು ಕೇಂದ್ರಕ್ಕೆ ಪತ್ರ ಬರೆಯಲು ಯೋಜಿಸಿದ್ದಾರೆ. ಯಾವುದೇ ಮಾರುಕಟ್ಟೆ ಕೊರತೆಯಿದ್ದರೆ ಮಾತ್ರ ಇತರರಿಗೆ ಮುಕ್ತ ಎಂದು ಸಹಕಾರಿ ತತ್ವಗಳು ಹೇಳುತ್ತವೆ, ಕರ್ನಾಟಕದಲ್ಲಿ ಹಾಲಿನ ಕೊರತೆ ಇಲ್ಲ. ಹೀಗಿದ್ದರು ಅಮುಲ್ಗೆ ಯಾಕೆ ಅವಕಾಶ ನೀಡಬೇಕು'' ಎಂದು ಕೆಎಂಎಫ್ನ ಮಾರುಕಟ್ಟೆ ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ.
ನಂದಿನಿ-ಅಮುಲ್ ಪೈಪೋಟಿ
ಕೆಎಂಎಫ್ ಅಧಿಕಾರಿಗಳು ಅಮುಲ್ನ ಗೇಮ್ಪ್ಲಾನ್ನ ಬಗ್ಗೆ ತಿಳಿದಿದ್ದರೂ, ಅವರು ಏಳು ವರ್ಷಗಳಿಂದ ಕರ್ನಾಟಕಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ದಿನಕ್ಕೆ ಕೇವಲ 300 ರಿಂದ 400 ಲೀಟರ್ ಹಾಲು ಮಾರಾಟಕ್ಕೆ ಶ್ರಮಿಸುತ್ತಿದ್ದಾರೆ. ಕರ್ನಾಟಕದಲ್ಲಿ ಅವರಿಗೆ ಯಾವುದೇ ಖರೀದಿ ಆಧಾರವಿಲ್ಲದೆ. ಅವರು ಗೋವಾದಿಂದ ಹಾಲನ್ನು ತರುತ್ತಿದ್ದಾರೆ. ಬೆಂಗಳೂರು ಮಾರುಕಟ್ಟೆಗೆ ಎಪಿಯ ಮದನಪಲ್ಲಿಯಿಂದ 1,000 ಲೀಟರ್ಗಳ ಹಾಲು ಬರುತ್ತಿದೆ ಎಂದು ಕೆಎಂಎಫ್ ಮಾರ್ಕೆಟಿಂಗ್ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಂದಿನಿ ಬೇರೆ ರಾಜ್ಯಗಳಲ್ಲಿ ಅಮುಲ್ ಗೆ ಟಫ್ ಫೈಟ್ ನೀಡುತ್ತಿದ್ದಾರೆ ಎಂದು ಮಾರುಕಟ್ಟೆಯ ಮೂಲಗಳು ಬಹಿರಂಗಪಡಿಸಿವೆ. ಇದರಿಂದಾಗಿ ಅಮುಲ್ ನಂದಿನ ವಿರುದ್ಧ ಸ್ಪರ್ಧೆಗಿಳಿದಿದೆ ಎಂದಿದ್ದಾರೆ.
"2015 ರಿಂದ ಇತರ ರಾಜ್ಯಗಳಿಗೆ ಪ್ರವೇಶಿಸಿದ ಕೆಲವೇ ವರ್ಷಗಳಲ್ಲಿ, ನಂದಿನಿ ಗೋವಾದಲ್ಲಿ ಎರಡನೇ ಸ್ಥಾನದಲ್ಲಿದೆ ಮತ್ತು ಮುಂಬೈ ಮತ್ತು ಹೈದರಾಬಾದ್ನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಜೊತೆಗೆ ನಾಗ್ಪುರ, ನವದೆಹಲಿ ಮತ್ತು ಚೆನ್ನೈಗೆ ಮುನ್ನುಗ್ಗಿದೆ. ಅಮುಲ್ನ ಇತ್ತೀಚಿನ ಬೆಳವಣಿಗೆ ನೋಡಿದರೆ ನಂದಿನಿ ಅದರ ತವರು ಮೈದಾನದಲ್ಲಿದೆ ವಿಸ್ತರಿಸುತ್ತಿದೆ"ಎಂದು ಮಾರುಕಟ್ಟೆ ವೀಕ್ಷಕರು ವಿವರಿಸಿದರು.












Click it and Unblock the Notifications