ಆರೋಗ್ಯ ವೃದ್ಧಿ, ವಿಶ್ವಶಾಂತಿಗೆ ಬೆಂಗಳೂರಲ್ಲಿ ಓಟ
ಗಳೂರು, ಸೆಪ್ಟೆಂಬರ್. 21: ವಿಶ್ವಶಾಂತಿ ಜಾಗೃತಿ ಮೂಡಿಸಲು ಆಸ್ಫೋರ್ಟ್ ಇಂಟರ್ ನ್ಯಾಷನಲ್ ಬೆಂಗಳೂರು ಹಾಗೂ ರಾಜಾ ಹೌಸಿಂಗ್ ಲಿಮಿಟೆಡ್ ಕಬ್ಬನ್ ಪಾರ್ಕ್ ನಲ್ಲಿ ಆಯೋಜಿಸಿದ್ದ 'ವರ್ಲ್ಡ್ ಪೀಸ್ ಮ್ಯಾರಥಾನ್ - 2015' ಜನ ಮೆಚ್ಚುಗೆಗೆ ಪಾತ್ರವಾಯಿತು.
ಮ್ಯಾರಥಾನ್ ಗೆ ಬಿಬಿಎಂಪಿ ಮೇಯರ್ ಬಿ ಎನ್ ಮಂಜುನಾಥ ರೆಡ್ಡಿ ಚಾಲನೆ ನೀಡಿದರು. ಕಬ್ಬನ್ ಪಾರ್ಕ್ ನಲ್ಲಿ ಪ್ರತಿ ಭಾನುವಾರ ನಡೆಯುವ ಕಾರ್ಯಕ್ರಮಗಳು ರಚನಾತ್ಮಕ ಚಟುವಟಿಕೆಗಳಿಗೆ ಅವಕಾಶ ನೀಡುತ್ತಿವೆ. ಇವು ವಿಶ್ವ ಮಾನವತೆ ಬೆಳೆಸುತ್ತಿವೆ ಎಂದು ರೆಡ್ಡಿ ಹೇಳಿದರು.[ಟಿಸಿಎಸ್ ವಿಶ್ವ 10ಕೆ ಮ್ಯಾರಥಾನ್ ನೆನಪಿನ ಚಿತ್ರಗಳು]
ವಿಶ್ವ ಶಾಂತಿಯ ಪ್ರಾಮುಖ್ಯತೆ ಅರಿಯಲು ಸೆಪ್ಟೆಂಬರ್ 21 ರಂದು ಅಂತಾಷ್ಟ್ರೀಯ ಶಾಂತಿ ದಿವಸವನ್ನಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ಮ್ಯಾರಥಾನ್ ಭಾರತೀಯ ಕ್ರೀಡಾಪಟು ಹಾಗೂ ಫಿಟ್ನೆಸ್ ಕನ್ಸಲ್ಟೆಂಟ್ ಆರ್ ರಘು ಅವರ ಕನಸಿನ ಕೂಸು. ಆರೋಗ್ಯ ವೃದ್ಧಿಯೊಂದಿಗೆ ವಿಶ್ವಶಾಂತಿಗೆ ಬದ್ಧವಾಗಿ ಜೀವನ ನಡೆಸಲು ಈ ಬಗೆಯ ಕಾರ್ಯಕ್ರಮಗಳು ಪ್ರೇರಕ ಎಂದು ರೆಡ್ಡಿ ತಿಳಿಸಿದರು.

ಚಾಲನೆ ನೀಡಿದ ರೆಡ್ಡಿ
ಕಬ್ಬನ್ ಪಾರ್ಕ್ ನಲ್ಲಿ ಭಾನುವಾರ ಆಯೋಜಿಸಿದ್ದ 'ವರ್ಲ್ಡ್ ಪೀಸ್ ಮ್ಯಾರಥಾನ್ - 2015' ನ್ನು ಬಿಬಿಎಂಪಿ ಮೇಯರ್ ಮಂಜುನಾಥ ರೆಡ್ಡಿ ಉದ್ಘಾಟನೆ ಮಾಡಿದರು. ಕಾಲೇಜು ವಿದ್ಯಾರ್ಥಿಗಳು, ಕಾರ್ಪೋರೇಟ್ ಉದ್ಯೋಗಿಗಳು ಭಾಗವಹಿಸಿದ್ದರು.

ನೆಲ ನರೇಂದ್ರಬಾಬು ಉಪಸ್ಥಿತಿ
ವರ್ಲ್ಡ್ ಪೀಸ್ ಮ್ಯಾರಥಾನ್ - 2015 ನಲ್ಲಿ ಕಾಂಗ್ರೆಸ್ ಮುಖಂಡ ನೆ.ಲ. ನರೇಂದ್ರಬಾಬು ಮತ್ತು ಬಿ ಪ್ಯಾಕ್ ಸದಸ್ಯರು ಹಾಜರಿದ್ದರು. ಬಲೂನು ಹಾರಿಸಿ ಬಿಡುವ ಮೂಲಕ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.

ಮೇಯರ್ ವೊಂದಿಗೆ ಸೆಲ್ಫಿ
ಬಿಬಿಎಂಪಿ ಮೇಯರ್ ಮಂಜುನಾಥ್ ರೆಡ್ಡಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ಮಿಸಿದ ವಿದ್ಯಾರ್ಥಿನಿಯರು. ವಿವಿಧ ಕಾಲೇಜುಗಳ 500 ಕ್ಕೂ ಅಧಿಕ ವಿದ್ಯಾರ್ಥಿಗಳು ಏರ್ ಫೋರ್ಸ್ ಅಧಿಕಾರಿಗಳು ಭಾಗವಹಿಸಿದ್ದರು.

ಪರಿಸರ ಸಂರಕ್ಷಣೆ ನಮ್ಮ ಹೊಣೆ
ಪರಿಸರ ಸಂರಕ್ಷಣೆ, ಆರೋಗ್ಯ ವೃದ್ಧಿ, ವಿಶ್ವಶಾಂತಿಗಾಗಿ ಹಮ್ಮಿಕೊಂಡಿದ್ದ ಮ್ಯಾರಥಾನ್ ನಲ್ಲಿ ರಾಜಕಾರಣಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೇಯರ್ ಸಹ ವಿದ್ಯಾರ್ಥಿಗಹಳೊಂದಿಗೆ ಕೆಲ ಹೆಜ್ಜೆ ಓಡಿದ್ದು ವಿಶೇಷ.
-
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್












Click it and Unblock the Notifications