Get Updates
Get notified of breaking news, exclusive insights, and must-see stories!

Bengaluru Chitra Santhe: 'ಚಿತ್ರಸಂತೆ-2024' ಆರಂಭಕ್ಕೆ ಕ್ಷಣಗಣನೆ, 22 ರಾಜ್ಯಗಳ ಸಾವಿರಾರು ಕಲಾಕೃತಿ ಪ್ರದರ್ಶನ, ಏನೇನಿರಲಿದೆ?

ಬೆಂಗಳೂರು, ಜನವರಿ 07: ರಾಜ್ಯ ರಾಜಧಾನಿ ಬೆಂಗಳೂರು ಇಂದು ಭಾನುವಾರ (ಜ.7) ಕರ್ನಾಟಕ ಚಿತ್ರಕಲಾ ಪರಿಷತ್ತಿನ (ಸಿಕೆಪಿ) 21ನೇ ಚಿತ್ರಸಂತೆ (21st Chitra Santhe) ಆರಂಭಕ್ಕೆ ಕ್ಷಣಗಣನೇ ಶುರುವಾಗಿದೆ. ಬೆಂಗಳೂರಿಗರು ಇದನ್ನು ಸಹ ಒಂದು ದಿನ ಹಬ್ಬದಂತೆ ಆಚರಿಸುತ್ತಾರೆ.

ನಗರದ ಕುಮಾರಕೃಪಾ ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳು, ರಸ್ತೆಗಳಲ್ಲಿ ಶನಿವಾರವೇ ಚಿತ್ರ ಕಲಾಕೃತಿಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ಬೆಳಗ್ಗೆ 8 ಗಂಟೆಯಿಂದಲೇ 'ಚಿತ್ರಸಂತೆ' ಆರಂಭವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗ್ಗೆ 9 ಗಂಟೆಗೆ 'ಚಿತ್ರಸಂತೆ'ಗೆ ಅಧಿಕೃತ ಚಾಲನೆ ನೀಡಲಿದ್ದಾರೆ.

Bengaluru 21st Chitra Santhe 2024 start Sunday Jan 7th, CM Siddaramaiah will Inauguration, Know More

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಗಣ್ಯರು 11ಗಂಟೆಗೆ 'ಚಿತ್ರಸಂತೆ'ಯ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಈ ವೇಳೆ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಶಾಸಕರು, ಸಿಕೆಪಿ ಮುಖ್ಯಸ್ಥರು, ಕಲಾವಿದರು ಉಪಸ್ಥಿತರಿರಲಿದ್ದಾರೆ. ಈ ಭಾರಿಯ ಚಿತ್ರಸಂತೆಯನ್ನು 'ಬಾಹ್ಯಾಕಾಶಯಾನ'ದಲ್ಲಿ ಸಾಧನೆಗೈದ ಇಸ್ರೋ ವಿಜ್ಞಾನಿಗಳಿಗೆ ಸಮರ್ಪಿಸಲಾಗುತ್ತಿದೆ.

ಲಕ್ಷಾಂತರ ಜನರು ಇಂದು ಚಿತ್ರಸಂತೆಗೆ ಆಗಮಿಸುವ ನಿರೀಕ್ಷೆ ಇದೆ. ಬಗೆ ಬಗೆಯ ಚಿತ್ರಕಲೆಗಳು, ಕಲಾಕೃತಿಗಳು, ಗೃಹ ಉಪಯೋಗಿ ವಸ್ತುಗಳನ್ನು ಜನ ಖರೀದಿಸಲಿದ್ದಾರೆ. ತಿಂಡಿ ತಿನಿಸುಗಳನ್ನು ಸವಿಯಲಿದ್ದಾರೆ. ಶಿವಾನಂದ ವೃತ್ತದ ಸುತ್ತಮುತ್ತ ಸಹಸ್ರ ಸಂಖ್ಯೆಯಲ್ಲಿ ಜನರ ದಂಡ ತುಂಬಿಕೊಂಡಿರುತ್ತದೆ.

Bengaluru 21st Chitra Santhe 2024 start Sunday Jan 7th, CM Siddaramaiah will Inauguration, Know More

22 ರಾಜ್ಯಗಳ 40 ಸಾವಿರಕ್ಕೂ ಹೆಚ್ಚು ಕಲಾಕೃತಿ
ಇಂದಿನ ಚಿತ್ರಸಂತೆಯಲ್ಲಿ ದೇಶದ ನಾನಾ ಮೂಲೆಗಳಿಂದ ಕಲಾವಿದರು ಆಗಮಿಸಲಿದ್ದಾರೆ. ಆ ಕಲಾವಿದರ ಚಿತ್ರ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಸುಮಾರು 22 ರಾಜ್ಯಗಳಿಂದ ಒಟ್ಟು 1500 ಕಲಾವಿದರೂ ಚಿತ್ರಸಂತೆಗೆ ಆಗಮಿಸಲಿದ್ದಾರೆ. ಬರೋಬ್ಬರಿ 40,000 ಕ್ಕೂ ಅಧಿಕ ಕಲಾಕೃತಿಗಳು ಚಿತ್ರಸಂತೆಗೆ ಬಂದಿವೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತು (CKCP) ಮಾಹಿತಿ ನೀಡಿದೆ.

ಚಿತ್ರಸಂತೆ ಪ್ರಯುಕ್ತ ಇಂದು ಕುಮಾರಕೃಪಾ ರಸ್ತೆ, ದೇವರಾಜು ಅರಸು ರಸ್ತೆ, ಹರೇಕೃಷ್ಣ ರಸ್ತೆ, ಕುಮಾರಕೃಪಾ ರೈಲ್ವೆ ಸಮಾನಾಂತರ ರಸ್ತೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ರಸ್ತೆಗಳ ಬದಿ ಕಲಾಕೃತಿಗಳ ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಶನಿವಾರವೇ ಎಲ್ಲ ಸಿದ್ಧತೆಗಳು ನಡೆದಿವೆ. ಕಳೆದ ಬಾರಿಗಿಂತ ಈ ಸಲ 300 ಮಳಿಗೆಗಳು ಅಧಿಕ ಅಂದರೆ 1500 ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಈ ರಸ್ತೆಯಲ್ಲಿ ವಾಹನ ನಿರ್ಬಂಧ: ಪರ್ಯಾಯ ಮಾರ್ಗ
ಈ ನಿಮಿತ್ತ ಕುಮಾಕೃಪಾ ರಸ್ತೆಗೆ ಇಂದು ವಾಹನಗಳ ನಿರ್ಬಂಧ ಹೇರಲಾಗಿದೆ. ಬಳ್ಳಾರಿ ರಸ್ತೆಯಿಂದ ಬರುವ ವಾಹನಗಳಿಗೆ ನಿರ್ಬಂಧಿಸಿದ್ದು, ಅವು ಚಾಲುಕ್ಯ ರಸ್ತೆ ಮೂಲಕ ಸಾಗಬೇಕಿದೆ. ಮೆಜೆಸ್ಟಿಕ್ ನಿಂದ ಬರುವ ವಾಹನಗಳು ಚಾಲುಕ್ಯ ವೃತ್ತ ಮಾರ್ಗವಾಗಿ ಬಳ್ಳಾರಿ ರಸ್ತೆ, ಹೆಬ್ಬಾಳ ಕಡೆಗೆ ಸಾಗಬೇಕಿದೆ. ಶಿವಾನಂದ ವೃತ್ತದಿಂದ ಶೇಷಾದ್ರಿಪುರಂ, ಮಲ್ಲೇಶ್ವರ ಕಡೆಗೆ ತೆರಳುವವರು ಇಂದು ಪರ್ಯಾಯ ಮಾರ್ಗದಲ್ಲಿ ಸಂಚರಿಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+