ನೋಡುಗರ ಕಣ್ಣಲ್ಲಿ ಯೋಧರಿಗೆ ಸಮರ್ಪಿತ ಲಾಲ್ಬಾಗ್ ಪುಷ್ಪಪ್ರದರ್ಶನ
ಬೆಂಗಳೂರು, ಆಗಸ್ಟ್ 4: ಈ ಬಾರಿಯ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ನಿಜವಾಗಿಯೂ ದೇಶಭಕ್ತಿಯನ್ನು ಇಮ್ಮಡಿಗೊಳಿಸಿದೆ. ನಮ್ಮ ಯೋಧರು ದೇಶಕ್ಕಾಗಿ ಏನೆಲ್ಲಾ ತ್ಯಾಗ ಮಾಡುತ್ತಾರೆ, ಅವರ ದಿನನಿತ್ಯದ ಬದುಕು ಹೇಗಿರುತ್ತದೆ ಎಂದು ಮನಮುಟ್ಟುವ ಹಾಗೆ ಕಟ್ಟಿಕೊಡಲಾಗಿದೆ.
ನವದೆಹಲಿ ಇಂಡಿಯಾ ಗೇಟ್ನಲ್ಲಿರುವ ಯುದ್ಧ ಸ್ಮಾರಕ ಅಮರ್ ಜವಾನ್ ಜ್ಯೋತಿ ಪ್ರತಿಕೃತಿ ಬಹುವರ್ಣದ ಹೂದಗಳಿಂದ ಮೇಳೈಸಿತು. ಕರಾವಳಿ, ಹಿಮಪರ್ವತಮ ಮರುಭೂಮಿ, ಅರಣ್ಯ ಎಲ್ಲವನ್ನೂ ಒಳಗೊಂಡ ಭೂ ಸೇನೆ ದೃಶ್ಯಾವಳಿಗಳನ್ನು ನೀವು ಕಾಣಬಹುದಾಗಿದೆ.
ಇಕೆಬಾನಾ, ಇಂಡೋ ಅಮೇರಿಕನ್ ಹೈಬ್ರೀಡ್ ಸೈಡ್ಸ್, ಜರ್ಬೆರಾ, ಡೇಲಿಯಾ ಹೀಗೆ ಲಕ್ಷಾಂತರ ಪುಷ್ಪಗಳು ಜನರನ್ನು ಬರಸೆಳೆಯುತ್ತಿವೆ.
ಪುಷ್ಪತೋಟವೆಂದಮೇಲೆ ಯುವತಿಯರು ಇಲ್ಲವೆಂದರೆ ಹೇಗೆ ಶನಿವಾರ ಎಂದು ತರಗತಿಗಳನ್ನು ಬಂಕ್ ಮಾಡಿ, ಕಚೇರಿಗಳಿಗೆ ರಜೆ ಹಾಕಿ, ಮಕ್ಕಳನ್ನೂ ಕೂಡ ಶಾಲೆಗೆ ಚಕ್ಕರ್ ಹೊಡೆಸಿ ಬಂದು ಫಲಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಂಡರು ಮಗುವಿನಿಂದ ಹಿಡಿದು ವೃದ್ಧರವರೆಗೂ ಪುಷ್ಪ ಪ್ರದರ್ಶನಕ್ಕೆ ಆಗಮಿಸಿದ್ದರು. ನೋಡುಗರ ಕಣ್ಣಲ್ಲಿ ಫಲಪುಷ್ಪ ಪ್ರದರ್ಶನ ಹೇಗಿತ್ತು ಎಂದು ನೋಡೋಣ

ನಾನು ನೋಡಿದ ಮೊದಲ ಪುಷ್ಪ ಪ್ರದರ್ಶನ
ಬೆಂಗಳೂರಿಗೆ ಬಂದು ಎರಡು ವರ್ಷ ಆಗಿದೆ, ಪತಿ ಬೆಂಗಳೂರಿನಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ,, ಇದೇ ಮೊದಲ ಬಾರಿಗೆ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸುತ್ತಿದ್ದೇನೆ, ಇಂತಹ ಪುಷ್ಪ ಪ್ರದರ್ಶನ ನಾನೆಲ್ಲಿಯೂ ನೋಡಿಲ್ಲ ತುಂಬಾ ಸಂತೋಷವಾಗಿದೆ.ಯೂಕೋಕ್-ಜಪಾನ್

ಅಮರ್ ಜವಾನ್ ಸ್ಮಾರಕ ನೋಡಿದರೆ ಕಣ್ತುಂಬಿ ಬರುತ್ತದೆ
ನಾನು ಚಿಕ್ಕವಳಿದ್ದಾಗಿನಿಂದಲೂ ಲಾಲ್ಬಾಗ್ ಪುಷ್ಪ ಪ್ರದರ್ಶನಕ್ಕೆ ಬರುತ್ತಿದ್ದೇನೆ, ಪ್ರತಿ ವರ್ಷವೂ ವಿವಿಧ ಥೀಮ್ಗಳನ್ನು ಇಟ್ಟುಕೊಂಡು ಪ್ರದರ್ಶನ ಏರ್ಪಡಿಸುತ್ತಾರೆ, ಈ ಬಾರಿಯ ಪ್ರದರ್ಶನದ ವಿಷಯವಸ್ತು ನನಗೆ ತುಂಬಾ ಇಷ್ಟವಾಗಿದೆ. ನಮ್ಮನ್ನು ಕಾಯುವ ಯೋಧರ ಬಗ್ಗೆ ನಮಗೆಷ್ಟು ಗೊತ್ತು ಎನ್ನುವುದನ್ನು ಯೋಚನೆ ಮಾಡಲೇ ಬೇಕು. ಇದೊಂದು ಹೊಸ ಸಂಶೋಧನೆ ಎಂದೇ ಹೇಳಬಹುದು. ಕವನಾ, ಬೆಂಗಳೂರು

ಇಸ್ರೋ ಎಚ್ಎಎಲ್ ಮಾದರಿಗಳು ತುಂಬಾ ಸೊಗಸಾಗಿದೆ
ಗಾಜಿನ ಮನೆಯಲ್ಲಿ ಇಸ್ರೋ ನಿರ್ಮಿತ ಉಪಗ್ರಹ ಉಡಾವಣಾ ಮಾದರಿ, ಆಕಾಶ್ ಮತ್ತು ಬ್ರಹ್ಮೋಸ್ ಕ್ಷಿಪಣಿ ಮಾದರಿ ಕಣ್ತುಂಬಿಕೊಳ್ಳಬಹುದು ಬೆಂಗಳೂರಲ್ಲಿ ವಾಸಿಸುವ ಪ್ರತಿಯೊಬ್ಬರೂ ಈ ಪ್ರದರ್ಶನವನ್ನೂ ಮಿಸ್ ಮಾಡಿಕೊಳ್ಳಬಾರದು- ರೇಖಾ, ಬೆಂಗಳೂರು

ಕಾಲೇಜಿಗೆ ಚೆಕ್ಕರ್, ಫ್ಲವರ್ಶೋ ಗೆ ಹಾಜರ್
ನಾನು ವಿಜಯಾ ಕಾಲೇಜಿನಲ್ಲಿ ಓದಿದ್ದು, ಆಗ ಕಾಲೇಜಿಗೆ ಚೆಕ್ಕರ್ ಹೊಡೆದು ಫ್ಲವರ್ ಶೋ ನೋಡೋಕೆ ಸ್ನೇಹಿತರೊಂದಿಗೆ ಬರ್ತಿದ್ವಿ, ಈಗಲೂ ಕೂಡ ಆ ನೆನಪುಗಳು ಹಾಗೆಯೇ ಇದೆ, ಪ್ರತಿ ವರ್ಷ ಹೋದಂತೆ ಒಂದೊಂದು ವಿಷಯವಸ್ತು ಇಟ್ಟುಕೊಂಡು ಆಯೋಜನೆ ಮಾಡುತ್ತಿದ್ದಾರೆ, ಮುಂದಿನ ಪುಷ್ಪ ಪ್ರದರ್ಶನ ಹೇಗಿರುತ್ತೋ ಎಂದು ಈಗಲೇ ಎಕ್ಸೈಟೆಡ್ ಆಗಿದೀನಿ. ಪ್ರಿಯಾಂಕಾ
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications