Bengaluru: ₹27000 ಕೋಟಿ ವೆಚ್ಚದ ಹಲವು ಮೇಲ್ಸೇತುವೆ, ಅಂಡರ್ಪಾಸ್, ಓವರ್ಪಾಸ್ ನಿರ್ಮಾಣ, ವಿವರ
ಬೆಂಗಳೂರು, ಫೆಬ್ರವರಿ 02: ಬೆಳೆಯುತ್ತಿರುವ ರಾಜಧಾನಿ ಬೆಂಗಳೂರು ಮುಂದಿನ ದಿನಗಳಲ್ಲಿ ಸಾವಿರಾರು ಕೋಟಿಯ ರಸ್ತೆ ಮೇಲ್ಸೇತುವೆ, ಅಂಡರ್ ಪಾಸ್ ಸೇರಿದಂತೆ ವಿವಿಧ ಯೋಜನೆಗಳನ್ನು ಪಡೆಯಲಿದೆ.
ಹೌದು, ಕರ್ನಾಟಕ ರಾಜ್ಯ ಸರ್ಕಾರವು 16 ರಸ್ತೆ ಮೇಲ್ಸೇತುವೆಗಳು, 10 ಓವರ್ಪಾಸ್ ಹಾಗೂ 12 ಅಂಡರ್ಪಾಸ್ಗಳು ನಿರ್ಮಾಣಗೊಳ್ಳಲಿವೆ. ಇದು ಬೆಂಗಳೂರು ವ್ಯಾಪ್ತಿಯ 73 ಕಿಮೀ ಪೆರಿಫೆರಲ್ ರಿಂಗ್ ರಸ್ತೆಯ (PRR) ಭಾಗವಾಗಲಿವೆ ಎಂದು ಸರ್ಕಾರ ತಿಳಿಸಿದೆ ಎಂದು 'ಡಿಎಚ್' ವರದಿ ಮಾಡಿದೆ.

ಮಹತ್ವ ಯೋಜನೆ ಕೈಗೊಳ್ಳಲಿರುವ ಸರ್ಕಾರವು ಬೆಂಗಳೂರಿನ ದಕ್ಷಿಣದ ಹೊಸೂರು ರಸ್ತೆಯನ್ನು ಬೆಂಗಳೂರಿನ ವಾಯುವ್ಯದಲ್ಲಿರುವ ತುಮಕೂರು ರಸ್ತೆಯೊಂದಿಗೆ ಸಂಪರ್ಕಿಸುವ ಉದ್ದೇಶ ಸಹ ಹೊಂದಿದೆ. ಒಟ್ಟು ಈ ಮೇಲಿನ ಎಲ್ಲ ಯೋಜನೆಗಳ ಕಾರ್ಯಗತಗೊಳಿಸಲು ಸರ್ಕಾರ 27,000 ಕೋಟಿ ರೂಪಾಯಿ ವ್ಯಯಿಸಲಿದೆ. ಖಾಸಗಿ ಕಂಪನಿಗಳಿಂದ ಸಂಪೂರ್ಣವಾಗಿ ಹಣವನ್ನು ನೀಡಲು ನಿರ್ಧರಿಸಿದೆ. ಕಂಪನಿಗಳಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 50 ವರ್ಷಗಳವರೆಗೆ ಟೋಲ್ ಸಂಗ್ರಹಿಸುವ ಹಕ್ಕಿನ ಭರವಸೆಯನ್ನು ಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ.
ವಿವಿಧ ಜಂಕ್ಷನ್-ಸ್ಥಳಗಳಲ್ಲಿ ಕಾಮಗಾರಿ
ಈ ಯೋಜನೆಯು ನಗರದ 10 ಪ್ರಮುಖ ಜಂಕ್ಷನ್ಗಳು ಮತ್ತು 100 ಕ್ಕೂ ಹೆಚ್ಚು ಸಣ್ಣ ವೃತ್ತಗಳ ಮೂಲಕ ಹಾದು ಹೋಗಲಿವೆ. ಹೆಚ್ಚು ಟ್ರಾಫಿಕ್ ಇರುವ ಕಾರಿಡಾರ್ಗಳಾದ ಹೆಸರಘಟ್ಟ ರಸ್ತೆ, ಹಳೆ ಮದ್ರಾಸ್ ರಸ್ತೆ, ವೈಟ್ಫೀಲ್ಡ್ ರಸ್ತೆ, ಚನ್ನಸಂದ್ರ ರಸ್ತೆ, ಹೊಸೂರು ರಸ್ತೆ ಮುಂತಾದ ಸ್ಥಳಗಳಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಬಿಡಿಎ ನಿರ್ಧರಿಸಿದೆ.
ಚಿಕ್ಕ ತೋಗೂರು ಕೆರೆ, ಗುಂಜೂರು ಕೆರೆ, ಚಿಕ್ಕ ಬನಹಳ್ಳಿ ಕೆರೆ, ಚಿನ್ನಪ್ಪನಹಳ್ಳಿ ಕೆರೆ, ತಿರುಮೇನಹಳ್ಳಿ ಕೆರೆ, ಜರಕಬಂಡೆ ಕೆರೆ ಸೇರಿದಂತೆ ಏಳು ಜಲಮೂಲಗಳಲ್ಲಿ ಸೇತುವೆಗಳನ್ನು ನಿರ್ಮಿಸಲು ಪ್ರಸ್ತಾಪಿಸಲಾಗಿದೆ. ಈ ಯೋಜನೆ ಮೂಲಕ ಜನರಿಗೆ ರಸ್ತೆ ದಾಟುವ ಅನುಕೂಲ ಒದಗಿಸುವ ಜೊತೆಗೆ ಟ್ರಾಫಿಕ್ ಮುಕ್ತ ಪ್ರಯಾಣ ವ್ಯವಸ್ಥೆ ಕಲ್ಪಿಸಲಿವೆ.

2,560 ಎಕರೆ ಭೂ ಸ್ವಾಧೀನಕ್ಕೆ ಗಡುವು
ಈ ಯೋಜನೆಗಳ ಸಾಕಾರಕ್ಕೆ ಬೇಕಾದ ಒಟ್ಟು 2,560 ಎಕರೆ ಭೂ ಸ್ವಾಧೀನಕ್ಕೆ ಬಿಡಿಎ ಆರು ತಿಂಗಳ ಗುರಿ ನಿಗದಿಪಡಿಸಲಾಗಿದೆ. ಎರಡು ವರ್ಷಗಳ ಗುಡುವು ಇರಲಿದೆ. ಆದರೆ ಟೆಂಡರ್ ದಾಖಲೆಗಳಲ್ಲಿ ಅನುಸರಿಸಬೇಕಾದ ಪರಿಹಾರದ ರಚನೆ ಇನ್ನಿತರ ಕೆಲವು ಮಾಹತಿಗಳನ್ನು ಉಲ್ಲೇಖಿಸಲಾಗಿಲ್ಲ ಎನ್ನಲಾಗಿದೆ. ಈ ಬಗ್ಗೆ ಬಿಡಿಎ ಅಧಿಕಾರಿಗಳು ಪ್ರತಿಕ್ರಿಯಿಸಬೇಕಿದೆ.
ಕಾಮಗಾರಿ ವೆಚ್ಚದ ಲೆಕ್ಕ
ಯೋಜನೆಗೆ ಭೂಸ್ವಾಧೀನಕ್ಕೆ ಅಂದಾಜು 21,000 ಕೋಟಿ ರೂಪಾಯಿ ಬೇಕಾದರೆ, ಇನ್ನೂ ಸಿವಿಲ್ ಕೆಲಗಳಿಗೆ 6,000 ಕೋಟಿ ರೂಪಾಯಿ ತಗುಲಬಹುದು ಎಂದು ಬಿಡಿಎ ಅಂದಾಜಿಸಿದೆ. ಎಂಟು ಪರ್ಥಗಳ ರಸ್ತೆ ಹೊಂದಿದ್ದರೆ ಅದಕ್ಕೆ 100-ಮೀಟರ್ ಅಗಲದ ಗ್ರೀನ್ಫೀಲ್ಡ್ ಎಕ್ಸ್ಪ್ರೆಸ್ವೇ ನಿರ್ಮಿಸುವ ಚಿಂತನೆ ಇದೆ. ಭೂಗತ ಕೇಬಲ್, ಫುಟ್ಪಾತ್, ಸೈಕಲ್ ಟ್ರ್ಯಾಕ್ ಮತ್ತು ಡ್ರೈನ್ಗಳನ್ನು ಒದಗಿಸಲಿದೆ.
ಹೆಚ್ಚುವರಿ ರಸ್ತೆ ನೆಟ್ವರ್ಕ್ ಸಂಪರ್ಕ
ಹೊಸೂರು ರಸ್ತೆ ಹಾಗೂ ತುಮಕೂರು ರಸ್ತೆ ಮಧ್ಯೆ 65 ಕಿಮೀ ಅಂತರಿವದೆ. ಬಿಡಿಎ ಮಾದನಾಯಕನಹಳ್ಳಿ ಬಳಿ 3.4-ಕಿಮೀ ಮತ್ತು ಹೆಬ್ಬಗೋಡಿ ಬಳಿ 4.08 ಕಿಮೀ ಹೆಚ್ಚುವರಿ ಉದ್ದದವರೆಗೆ ಯೋಜನೆಗಳು ಬರಲಿವೆ. ಅಂದರೆ ಹೆಚ್ಚುವರಿ ನೆಟ್ವರ್ಕ್ಗಳನ್ನು ಜೋಡಿಸಲಾಗುತ್ತಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ. ಸರ್ಕಾರ ಬಂದ ಬಳಿಕ ಬೆಂಗಳೂರಿನಲ್ಲಿ ಇಂಥದ್ದೊಂದು ಬೃಹತ್ ಯೋಜನೆಯು ಕಾರ್ಯರೂಪ ಪಡೆದುಕೊಂಡಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ












Click it and Unblock the Notifications