ವೈಟ್ಟಾಪಿಂಗ್ ಮಾಡದ್ದರಿಂದ ಬಿಬಿಎಂಪಿಗೆ 38ಕೋಟಿ ರೂ. ನಷ್ಟ ಸಾಧ್ಯತೆ
ಬೆಂಗಳೂರು, ನವೆಂಬರ್ 14: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದಲ್ಲಿ ಆರು ಪ್ಯಾಕೇಜ್ನಡಿ 89 ರಸ್ತೆಗಳನ್ನು ವೈಟ್ಟಾಪಿಂಗ್ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಮಾಡದ ಹಿನ್ನಲೆಯಲ್ಲಿ ಒಪ್ಪಂದದಂತೆ 38 ಕೋಟಿ ನಷ್ಟ ಎದುರಿಸಬೇಕಾದ ಸ್ಥಿತಿ ತಲುಪಿದೆ.
ರಾಜ್ಯದಲ್ಲಿ 2019 ರಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವು ವೈಟ್ ಟಾಪಿಂಗ್ ಕಾಮಗಾರಿಗೆ ಅನುಮೋದನೆ ನೀಡಿತ್ತು. ಅದರಂತೆ ಒಟ್ಟು 1,154 ಕೋಟಿ ರೂ. ಹಣದಲ್ಲಿ ಆರು ಹಂತಗಳಲ್ಲಿ ನಗರದ 89 ರಸ್ತೆಗಳು ಮುಂದಿನ ದಿನಗಳು ಡಾಂಬರಿಗೆ ಬದಲಾಗಿ ಕಾಂಕ್ರೀಟ್ ರಸ್ತೆಗಳಾಗಿ ಬದಲಿಸಲು ನಿರ್ಧರಿಸಲಾಗಿತ್ತು.
ಈ ಸಂಬಂಧ ಬಿಬಿಎಂಪಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದ ಬಿಬಿಎಂಪಿ ಎರಡು ಪ್ಯಾಕೇಜ್ಗಳಲ್ಲಿ ಕಾಮಗಾರಿ ಆದೇಶ ನೀಡಿದ್ದಲ್ಲದೇ ಮೂವರಿಗೆ ಕಾಮಗಾರಿಯ ಒಪ್ಪಿಗೆ ಪತ್ರ ನೀಡಿತ್ತು. ಒಟ್ಟು ನಾಲ್ಕು ಗುತ್ತಿಗೆದಾರರ ಪೈಕಿ ಮೂರಕ್ಕೆ ಅನುಮೋದನೆ ದೊರೆತಿದೆ.
ಒಂದು ಅನುಮೋದನೆ ಬಾಕಿ ಇತ್ತು. ಇದೇ ವೇಳೆ ಮೈತ್ರಿ ಸರ್ಕಾರ ಪತಗೊಂಡ ಬಳಿಕ ಅಸ್ತಿತ್ವಕ್ಕೆ ಬಂದ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಕ್ರಮಗಳನ್ನು ನೆಪವಾಗಿಟ್ಟುಕೊಂಡು ಹಲವು ಯೋಜನೆಗೆ ತಡೆ ನೀಡಿತ್ತು.
ಉದ್ದೇಶಿತ ವೈಟ್ಟಾಪಿಂಗ್ 89 ರಸ್ತೆಗಳಲ್ಲಿ ಬಹುತೇಕವು ಬಿಜೆಪಿಯೇತರ ಶಾಸಕರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಇವೆ. ಈ ಕಾರಣದಿಂದ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಈ ಕಾರಣದಿಂದ ವೈಟ್ ಟಾಪಿಂಗ್ ಕಾಮಗಾರಿ ನಡೆಯಲಿಲ್ಲ.

1,450 ಕೋಟಿ ರೂ.ವೆಚ್ಚದಲ್ಲಿ 39 ರಸ್ತೆ ವೈಟ್ಟಾಪಿಂಗ್
ಇದೇ ವರ್ಷ ಕಳೆದ ಅಕ್ಟೋಬರ್ ಅಂತ್ಯಕ್ಕೆ ಬಿಬಿಎಂಪಿ 1,450 ಕೋಟಿ ರೂ. ವೆಚ್ಚದಲ್ಲಿ 39 ರಸ್ತೆಗಳನ್ನು ಕಾಂಕ್ರೀಟೀಕರಣಗೊಳಿಸಲು ನಗರಾಭಿವೃದ್ಧಿ ಇಲಾಖೆ (ಯುಡಿಡಿ)ಯ ಅನುಮತಿ ಕೇಳಿತ್ತು. ಜೊತೆಗೆ ಯೋಜನೆಗಳ ಹಳೆಯ ಟೆಂಡರ್ಗಳನ್ನು ರದ್ದುಗೊಳಿಸಲು ಶಿಫಾರಸು ಮಾಡಿತ್ತು.
ಹಳೆ ಟೆಂಡರ್ ರದ್ದಿಗೆ ಕಾನೂನು ತೊಡಕಿವೆ. ಹೀಗಾಗಿ ನಗರಾಭಿವೃದ್ಧಿ ಇಲಾಖೆಗೆ ಬಿಬಿಎಂಪಿ ಮುಖ್ಯ ಆಯುಕ್ತರ ತುಷಾರ್ ಗಿರಿನಾಥ್ ವಕೀಲ ಮಾರ್ಗದರ್ಶನದಲ್ಲಿ ಪತ್ರ ಬರೆದಿದ್ದಾರೆ. ಈ ತೊಡಕು ನಿವಾರಣೆ ಆಗದಿದ್ದರೆ ಒಪ್ಪಂದದಂತೆ ಬಿಬಿಎಂಪಿ 38ಕೋಟಿ ರೂ. ಆರ್ಥಿಕ ನಷ್ಟ ಎದುರಿಸಲಿದೆ.

38.34 ಕೋಟಿ ರೂ. ನಷ್ಟ ಸಾಧ್ಯತೆ
ಹಿಂದಿನ ಟೆಂಡರ್ಗಳನ್ನು ರದ್ದುಗೊಳಿಸುವ ಕಾನೂನು ತೊಡಕಿನಲ್ಲಿ ಸುಮಾರು 38.34 ಕೋಟಿ ರೂ. ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ. ಮೂಲಗಳ ಪ್ರಕಾರ, ಗುತ್ತಿಗೆದಾರರು ಓವರ್ಹೆಡ್ಗಳು, ಯಂತ್ರ ಮತ್ತು ಮಾನವಶಕ್ತಿಯ ನಷ್ಟ, ನಿರೀಕ್ಷಿತ ಟೆಂಡರ್ ಸಾಮರ್ಥ್ಯದ ತಡೆ ಇತ್ಯಾದಿಗಳನ್ನು ಉಲ್ಲೇಖಿಸಿ ರೂ. 38.34 ಕೋಟಿ ಪರಿಹಾರಕ್ಕೆ ಇಲ್ಲವೇ ಒಪ್ಪಂದದಂತೆ ಶೇ. 10ರಷ್ಟು ಹಣಕ್ಕೆ ಕ್ಲೈಮ್ ಮಾಡಿಕೊಳ್ಳಬಹುದು.

ರೂ. 320 ಕೋಟಿಯ ಹಲವು ಯೋಜನೆಗಳು
ಲೆಕ್ಕಾಚಾರದ ಪ್ರಕಾರ, ಪ್ಯಾಕೇಜ್ 2-ಜೆಎಸ್ಪಿ ಯೋಜನೆಗಳು ಮತ್ತು ಪ್ಯಾಕೇಜ್ 5- ಆರ್ಪಿಎನ್ ಇನ್ಫ್ರಾಟೆಕ್ ಕೆಲಸದ ಆದೇಶಗಳನ್ನು ರೂ. 320 ಕೋಟಿ ನೀಡಲಾಗಿದೆ. ಅದರ ಲಾಭ-ನಷ್ಟ (ಶೇ. 10) ಮತ್ತು ಬಡ್ಡಿಯಾಗಿ ರೂ. 35.29 ಕೋಟಿ ಪಡೆಯಬಹುದು.
ಪ್ಯಾಕೇಜ್ 3-ಬಿಎಸ್ಸಿಪಿಎಲ್ ಇನ್ಫ್ರಾಸ್ಟ್ರಕ್ಚರ್ ಮತ್ತು ಪ್ಯಾಕೇಜ್ 6- ಆರ್ಪಿಪಿ ಇನ್ಫ್ರಾ ಪ್ರಾಜೆಕ್ಟ್ಗಳು ಜೊತೆಗೆ ಪ್ಯಾಕೇಜ್ 2 ಮತ್ತು ಪ್ಯಾಕೇಜ್ 5 ಅವರು 2019 ರಲ್ಲಿ ಪಾವತಿಸಿದ ರೂ 35.12 ಕೋಟಿ ಭದ್ರತಾ ಠೇವಣಿಯ ಮೇಲೆ ಬಡ್ಡಿಯಾಗಿ ರೂ 3.05 ಕೋಟಿಯನ್ನು ಈಗಾಗಲೇ ಕಂಪನಿಗಳು ಪಡೆದಿವೆ.

ಹಳೆಯ ಟೆಂಡರ್ನಲ್ಲಿನ ಹಲವು ರಸ್ತೆಗೆ ಡಾಂಬರು
ನಗರಾಭಿವೃದ್ಧಿ ಇಲಾಖೆಗೆ ಒಟ್ಟು 11 ಪುಟಗಳಲ್ಲಿ ಪತ್ರ ಬರೆಯಲಾಗಿದೆ. ಬಿಬಿಎಂಪಿ ಹಿಂದಿನ ಟೆಂಡರ್ಗಳನ್ನು ಮುಂದುವರಿಸದೆ ಬಿಟ್ಟ ಹಿನ್ನೆಲೆಯಲ್ಲಿ ಬಿಬಿಎಂಪಿಯು 287.61 ಕೋಟಿ ರೂ.ಗಳನ್ನು ಉಳಿಸಲಿದೆ ಎಂದು ಹೇಳಲಾಗಿದೆ.
ಯೋಜನಾ ವೆಚ್ಚದಲ್ಲಿ ಶೇ. 5ರಷ್ಟು ವೆಚ್ಚ ಹೆಚ್ಚಳ ಆಗಿದ್ದರ ಜೊತೆಗೆ ಜಿಎಸ್ಟಿಯು ಒಳಗೊಂಡಿದೆ. ಇನ್ನು ಹಳೆಯ ಟೆಂಡರ್ ಭಾಗವಾಗಿ ಕೆಲವೆಡೆ ಬಿಬಿಎಂಪಿ ರಸ್ತೆಗಳ ಡಾಂಬರೀಕಣ ಮಾಡಿದೆ.
-
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
ಯುಗಾದಿ, ರಂಜಾನ್ ಹಬ್ಬಕ್ಕೆ 2000 ವಿಶೇಷ ಬಸ್: ಮುಂಗಡ ಟಿಕೆಟ್ ಗೆ ರಿಯಾಯ್ತಿ ಘೋಷಿಸಿದ KSRTC -
ವಲಸೆ ಕಾರ್ಮಿಕರಿಂದಾಗಿ ಉದ್ಯೋಗ ನಷ್ಟವಾಗುತ್ತಿರುವ ಬಗ್ಗೆ ಅಧಿಕೃತ ದೂರು ಸಲ್ಲಿಕೆಯಾಗಿಲ್ಲ: ಕಾರ್ಮಿಕ ಇಲಾಖೆ ಸ್ಪಷ್ಟನೆ -
RCB: ಆರ್ಸಿಬಿಯಲ್ಲಿ ಜೋಶ್ ಹ್ಯಾಜಲ್ವುಡ್ ಸ್ಥಾನ ತುಂಬುವ ಆಟಗಾರ ಇವರೇ ನೋಡಿ -
ಶೆಲ್ ಬಂಕ್ನಲ್ಲಿ ಪೆಟ್ರೋಲ್ ದರ ಏರಿಕೆ: ಬೆಂಗಳೂರಿನಲ್ಲಿ 10 ದಿನಗಳಲ್ಲಿ 4.50 ರೂಪಾಯಿ ಹೆಚ್ಚಳ; ಇಲ್ಲಿದೆ ದರಪಟ್ಟಿ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ











Click it and Unblock the Notifications