E-Khata in Online: ಬಿಬಿಎಂಪಿಯಿಂದ ಸಂಪರ್ಕರಹಿತ, ಫೇಸ್ ಲೆಸ್ ಆನ್ಲೈನ್ ಇ-ಖಾತಾ ವ್ಯವಸ್ಥೆ: ಹೇಗೆ?
ಬೆಂಗಳೂರು, ನವೆಂಬರ್ 17: ಆದಾಯ ಹೆಚ್ಚಿಸಲು, ವಂಚನೆಗೆ ಕಡಿವಾಣ ಹಾಕಲು ಹಾಗೂ ನಾಗರಿಕರಿಗೆ ಕೈಗೆಟುಕುವ ಸೌಲಭ್ಯ ದೊರೆಯುವಂತೆ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ( ಬಿಬಿಎಂಪಿ) ಇ-ಖಾತೆ ಪಡೆಯಲು ಪ್ರತ್ಯೇಕ ಪೋರ್ಟಲ್ ತೆರೆಯಲಿದೆ. ಅಲ್ಲದೇ ಬಿಬಿಎಂಪಿಯು ಸಂಪರ್ಕರಹಿತ, ಫೇಸ್ ಲೆಸ್ ಮತ್ತು ಆನ್ಲೈನ್ ಮೂಲಕ ಇ-ಖಾತಾ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ.
ಬೆಂಗಳೂರಿನಲ್ಲಿ ಬಿಬಿಎಂಪಿಯು ಈಗಾಗಲೇ 22 ಲಕ್ಷ ಖಾತೆಗಳನ್ನು ಡಿಜಿಟಲೀಕರಣ ಮಾಡಿದೆ. ಇವೆಲ್ಲವನ್ನು ಪ್ರತ್ಯೇಕ ಪೋರ್ಟಲ್ ನಲ್ಲಿ ಅಳವಡಿಸಿ, ನಾಗರಿಕರಿಗೆ ಸುಲಭವಾಗಿ ಆನ್ಲೈನ್ನಲ್ಲಿ ಸಿಗುವಂತೆ ಮಾಡಲಿದೆ. ಇನ್ನೂ ಒಟ್ಟು 05 ಲಕ್ಷ ಇ- ಖಾತೆಗಳನ್ನು ತೆರಿಗೆ ವ್ಯಾಪ್ತಿಗೆ ತರಲು ನಿರ್ಧರಿಸಿದ್ದಾರೆ.

ಬಿಬಿಎಂಪಿ ಈ ಸಂಪರ್ಕರಹಿತ, ಫೇಸ್ ಲೆಸ್, ಆನ್ಲೈನ್ ತಂತ್ರಾಂಶದ ವಿನ್ಯಾಸವು ನಾಗರಿಕರ ನಿಯಂತ್ರಣದಲ್ಲಿ ಇರಿಸಲಾಗಿದೆ. ಸಾರ್ವಜನಿಕರು ತಾವೇ ಸ್ವತಃ ಆನ್ ಲೈನ್ https://bbmpeaasthi.karnataka.gov.in ಮೂಲಕ ಹೆಚ್ಚಿನ ಮಾಹಿತಿ ನೀಡಿ ಅಂತಿಮ ಇ-ಖಾತಾ ಅನ್ನು ಪಡೆಯಬಹುದಾಗಿದೆ.
ಬಿಬಿಎಂಪಿ ಖಾತಾ ವ್ಯವಸ್ಥೆಯನ್ನು ಅಧಿಕಾರಶಾಹಿಯಿಂದ ಮುಕ್ತಗೊಳಿಸುವುದು ಪ್ರಮುಖ ಗುರಿಯಾಗಿದೆ. ಇದರಿಂದ ನಾಗರಿಕರು ಸಬಲರಾಗುತ್ತಾರೆ ಮತ್ತು ಇ-ಖಾತಾ ಅಥವಾ ಖಾತಾ ಸೇವೆಗಳಿಗಾಗಿ ಪಾಲಿಕೆ ಸಿಬ್ಬಂದಿ ಅವಲಂಬನೆ ತಪ್ಪುತ್ತದೆ.

ಈ ನಾಗರಿಕ ಸಬಲೀಕರಣ ವ್ಯವಸ್ಥೆಯಲ್ಲಿ ಅಂತರ್ಗತವಾಗಿ ನಾಗರಿಕನ ನಿಯಂತ್ರಣದಲ್ಲಿರುತ್ತದೆ ಹಾಗೂ ಅವನ / ಅವಳ ಅಂತಿಮ ಇ-ಖಾತಾವನ್ನು ಸ್ವತಃ ತಾನೇ ಪಡೆಯಬಹುದು. ಈಗಾಗಲೇ ಬೆಂಗಳೂರು ಒನ್ ಕೇಂದ್ರಗಳಲ್ಲಿ ನಾಗರಿಕರು ತಮ್ಮ ಅಂತಿಮ ಇ-ಖಾತಾವನ್ನು ಪಡೆಯಲು ಅವಕಾಶ ನೀಡಲಾಗಿದೆ.
ಇ-ಖಾತೆ ಪಡೆಯಲು ಜನರಿಗೆ ಮಾರ್ಗದರ್ಶನ ವಿಡಿಯೋ
ಹೇಗೆ ಆನ್ಲೈನ್ ಮೂಲಕ ಇ ಖಾತಾ ಪಡೆಯಬೇಕು ಎಂಬುದರ ಕುರಿತು ಯೂಟ್ಯೂಬ್ನಲ್ಲಿ ತರಬೇತಿಯ ವೀಡಿಯೋ ಅಪ್ಲೊಡ್ ಮಾಡಲಾಗಿದೆ. ಇವು ಜನರಿಗೆ ಮಾರ್ಗದರ್ಶನ ನೀಡಲಿವೆ. ಅದಕ್ಕಾಗಿ ಕನ್ನಡಿಗರು https://youtu.be/JR3BxET46po?si=jDoSKqy2V1IFUpf6 ಲಿಂಕ್ ಮೇಲೆ, ಕನಡೇತರರು ಈ ಲಿಂಕ್ https://youtu.be/GL8CWsdn3wo?si=Zu_EMs3SCw5-wQwT ಲಿಂಕ್ ಮೇಲೆ ಕ್ಲಿಕ್ ಮಾಡಿ ಪಡೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.
ಬಿಬಿಎಂಪಿಯು ಮುಂಬರುವ ವಾರದಲ್ಲಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ ಇ-ಖಾತಾ ಪಡೆಯುವ ಕುರಿತು ತರಬೇತಿ ನೀಡಲಾಗುವುದು. ಬಿಬಿಎಂಪಿ ನಾಗರಿಕರಿಗೆ ಮಾರ್ಗದರ್ಶನ ನೀಡಲು ಸಹಾಯವಾಣಿ ಸಂಖ್ಯೆಗಳನ್ನು ತೆರೆದಿದೆ. ಅವರೇ ಅವರ ಅಂತಿಮ ಇ-ಖಾತಾ ಅನ್ನು ಪಡೆಯಬಹುದು.
ನಾಗರಿಕರು "ತಮ್ಮದೇ ಅಂತಿಮ ಇ-ಖಾತಾವನ್ನು ಮುದ್ರಿಸಲು" ಅಧಿಕಾರವನ್ನು ಹೊಂದಿದ್ದಾರೆ. ಬಿಬಿಎಂಪಿಯಲ್ಲಿನ ಯಾವುದೇ ಅಧಿಕಾರಿಯು ಅಂತಿಮ ಇ-ಖಾತಾ ಅನ್ನು ಅನುಮೋದಿಸುವುದಿಲ್ಲ. ಇದು ಬಿಬಿಎಂಪಿಯ ಫೇಸ್ ಲೆಸ್, ಸಂಪರ್ಕವಿಲ್ಲದ, ಆನ್ಲೈನ್ ಇ-ಖಾತಾ ವ್ಯವಸ್ಥೆಯ ನಿಜವಾದ ತಿಳುವಳಿಕೆಯಾಗಿದೆ.
ತಾಂತ್ರಿಕ ಸಮಸ್ಯೆಗಳು(ಯಾವುದಾದರೂ ಇದ್ದಲ್ಲಿ) ಮತ್ತು ಇತರೆ ಸಹಾಯವನ್ನು ಹೆಚ್ಚಿನ ಆದ್ಯತೆಯ ಮೇಲೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications