E-Khata in Online: ಬಿಬಿಎಂಪಿಯಿಂದ ಸಂಪರ್ಕರಹಿತ, ಫೇಸ್ ಲೆಸ್ ಆನ್ಲೈನ್ ಇ-ಖಾತಾ ವ್ಯವಸ್ಥೆ: ಹೇಗೆ?
ಬೆಂಗಳೂರು, ನವೆಂಬರ್ 17: ಆದಾಯ ಹೆಚ್ಚಿಸಲು, ವಂಚನೆಗೆ ಕಡಿವಾಣ ಹಾಕಲು ಹಾಗೂ ನಾಗರಿಕರಿಗೆ ಕೈಗೆಟುಕುವ ಸೌಲಭ್ಯ ದೊರೆಯುವಂತೆ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ( ಬಿಬಿಎಂಪಿ) ಇ-ಖಾತೆ ಪಡೆಯಲು ಪ್ರತ್ಯೇಕ ಪೋರ್ಟಲ್ ತೆರೆಯಲಿದೆ. ಅಲ್ಲದೇ ಬಿಬಿಎಂಪಿಯು ಸಂಪರ್ಕರಹಿತ, ಫೇಸ್ ಲೆಸ್ ಮತ್ತು ಆನ್ಲೈನ್ ಮೂಲಕ ಇ-ಖಾತಾ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ.
ಬೆಂಗಳೂರಿನಲ್ಲಿ ಬಿಬಿಎಂಪಿಯು ಈಗಾಗಲೇ 22 ಲಕ್ಷ ಖಾತೆಗಳನ್ನು ಡಿಜಿಟಲೀಕರಣ ಮಾಡಿದೆ. ಇವೆಲ್ಲವನ್ನು ಪ್ರತ್ಯೇಕ ಪೋರ್ಟಲ್ ನಲ್ಲಿ ಅಳವಡಿಸಿ, ನಾಗರಿಕರಿಗೆ ಸುಲಭವಾಗಿ ಆನ್ಲೈನ್ನಲ್ಲಿ ಸಿಗುವಂತೆ ಮಾಡಲಿದೆ. ಇನ್ನೂ ಒಟ್ಟು 05 ಲಕ್ಷ ಇ- ಖಾತೆಗಳನ್ನು ತೆರಿಗೆ ವ್ಯಾಪ್ತಿಗೆ ತರಲು ನಿರ್ಧರಿಸಿದ್ದಾರೆ.

ಬಿಬಿಎಂಪಿ ಈ ಸಂಪರ್ಕರಹಿತ, ಫೇಸ್ ಲೆಸ್, ಆನ್ಲೈನ್ ತಂತ್ರಾಂಶದ ವಿನ್ಯಾಸವು ನಾಗರಿಕರ ನಿಯಂತ್ರಣದಲ್ಲಿ ಇರಿಸಲಾಗಿದೆ. ಸಾರ್ವಜನಿಕರು ತಾವೇ ಸ್ವತಃ ಆನ್ ಲೈನ್ https://bbmpeaasthi.karnataka.gov.in ಮೂಲಕ ಹೆಚ್ಚಿನ ಮಾಹಿತಿ ನೀಡಿ ಅಂತಿಮ ಇ-ಖಾತಾ ಅನ್ನು ಪಡೆಯಬಹುದಾಗಿದೆ.
ಬಿಬಿಎಂಪಿ ಖಾತಾ ವ್ಯವಸ್ಥೆಯನ್ನು ಅಧಿಕಾರಶಾಹಿಯಿಂದ ಮುಕ್ತಗೊಳಿಸುವುದು ಪ್ರಮುಖ ಗುರಿಯಾಗಿದೆ. ಇದರಿಂದ ನಾಗರಿಕರು ಸಬಲರಾಗುತ್ತಾರೆ ಮತ್ತು ಇ-ಖಾತಾ ಅಥವಾ ಖಾತಾ ಸೇವೆಗಳಿಗಾಗಿ ಪಾಲಿಕೆ ಸಿಬ್ಬಂದಿ ಅವಲಂಬನೆ ತಪ್ಪುತ್ತದೆ.

ಈ ನಾಗರಿಕ ಸಬಲೀಕರಣ ವ್ಯವಸ್ಥೆಯಲ್ಲಿ ಅಂತರ್ಗತವಾಗಿ ನಾಗರಿಕನ ನಿಯಂತ್ರಣದಲ್ಲಿರುತ್ತದೆ ಹಾಗೂ ಅವನ / ಅವಳ ಅಂತಿಮ ಇ-ಖಾತಾವನ್ನು ಸ್ವತಃ ತಾನೇ ಪಡೆಯಬಹುದು. ಈಗಾಗಲೇ ಬೆಂಗಳೂರು ಒನ್ ಕೇಂದ್ರಗಳಲ್ಲಿ ನಾಗರಿಕರು ತಮ್ಮ ಅಂತಿಮ ಇ-ಖಾತಾವನ್ನು ಪಡೆಯಲು ಅವಕಾಶ ನೀಡಲಾಗಿದೆ.
ಇ-ಖಾತೆ ಪಡೆಯಲು ಜನರಿಗೆ ಮಾರ್ಗದರ್ಶನ ವಿಡಿಯೋ
ಹೇಗೆ ಆನ್ಲೈನ್ ಮೂಲಕ ಇ ಖಾತಾ ಪಡೆಯಬೇಕು ಎಂಬುದರ ಕುರಿತು ಯೂಟ್ಯೂಬ್ನಲ್ಲಿ ತರಬೇತಿಯ ವೀಡಿಯೋ ಅಪ್ಲೊಡ್ ಮಾಡಲಾಗಿದೆ. ಇವು ಜನರಿಗೆ ಮಾರ್ಗದರ್ಶನ ನೀಡಲಿವೆ. ಅದಕ್ಕಾಗಿ ಕನ್ನಡಿಗರು https://youtu.be/JR3BxET46po?si=jDoSKqy2V1IFUpf6 ಲಿಂಕ್ ಮೇಲೆ, ಕನಡೇತರರು ಈ ಲಿಂಕ್ https://youtu.be/GL8CWsdn3wo?si=Zu_EMs3SCw5-wQwT ಲಿಂಕ್ ಮೇಲೆ ಕ್ಲಿಕ್ ಮಾಡಿ ಪಡೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.
ಬಿಬಿಎಂಪಿಯು ಮುಂಬರುವ ವಾರದಲ್ಲಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ ಇ-ಖಾತಾ ಪಡೆಯುವ ಕುರಿತು ತರಬೇತಿ ನೀಡಲಾಗುವುದು. ಬಿಬಿಎಂಪಿ ನಾಗರಿಕರಿಗೆ ಮಾರ್ಗದರ್ಶನ ನೀಡಲು ಸಹಾಯವಾಣಿ ಸಂಖ್ಯೆಗಳನ್ನು ತೆರೆದಿದೆ. ಅವರೇ ಅವರ ಅಂತಿಮ ಇ-ಖಾತಾ ಅನ್ನು ಪಡೆಯಬಹುದು.
ನಾಗರಿಕರು "ತಮ್ಮದೇ ಅಂತಿಮ ಇ-ಖಾತಾವನ್ನು ಮುದ್ರಿಸಲು" ಅಧಿಕಾರವನ್ನು ಹೊಂದಿದ್ದಾರೆ. ಬಿಬಿಎಂಪಿಯಲ್ಲಿನ ಯಾವುದೇ ಅಧಿಕಾರಿಯು ಅಂತಿಮ ಇ-ಖಾತಾ ಅನ್ನು ಅನುಮೋದಿಸುವುದಿಲ್ಲ. ಇದು ಬಿಬಿಎಂಪಿಯ ಫೇಸ್ ಲೆಸ್, ಸಂಪರ್ಕವಿಲ್ಲದ, ಆನ್ಲೈನ್ ಇ-ಖಾತಾ ವ್ಯವಸ್ಥೆಯ ನಿಜವಾದ ತಿಳುವಳಿಕೆಯಾಗಿದೆ.
ತಾಂತ್ರಿಕ ಸಮಸ್ಯೆಗಳು(ಯಾವುದಾದರೂ ಇದ್ದಲ್ಲಿ) ಮತ್ತು ಇತರೆ ಸಹಾಯವನ್ನು ಹೆಚ್ಚಿನ ಆದ್ಯತೆಯ ಮೇಲೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ












Click it and Unblock the Notifications