ಬಿಟಿಎಂ ಕ್ಷೇತ್ರದಲ್ಲಿ ಗೆಲ್ತಾರಾ ರಾಮಲಿಂಗಾ ರೆಡ್ಡಿ?
ಬೆಂಗಳೂರು, ಆಗಸ್ಟ್ 19 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಟಿಎಂ ವಿಧಾನಸಭಾ ಕ್ಷೇತ್ರ ಗಮನ ಸೆಳೆದಿದೆ. 8 ವಾರ್ಡ್ಗಳನ್ನು ಹೊಂದಿರುವ ಕ್ಷೇತ್ರದ ಶಾಸಕರು ಬೆಂಗಳೂರು ನಗರ ಉಸ್ತುವಾರಿ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ. ಎಲ್ಲಾ ವಾರ್ಡ್ಗಳನ್ನು 'ಕೈ'ವಶ ಮಾಡಿಕೊಳ್ಳಬೇಕು ಎಂದು ಕಾರ್ಯತಂತ್ರ ರೂಪಿಸಿ ರಾಮಲಿಂಗಾ ರೆಡ್ಡಿ ಅವರು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಬಿಟಿಎಂ
(ಭೈರಸಂದ್ರ,
ತಾವರೆಕೆರೆ,
ಮಡಿವಾಳ)
ವಿಧಾನಸಭಾ
ಕ್ಷೇತ್ರದಲ್ಲಿ
ರಾಮಲಿಂಗಾ
ರೆಡ್ಡಿ
ಅವರು
ಭಾರೀ
ಪ್ರಭಾವ
ಹೊಂದಿದ್ದಾರೆ.
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು
ಸಹ
ಇದೇ
ಕ್ಷೇತ್ರದಿಂದ
ಬಿಬಿಎಂಪಿ
ಚುನಾವಣಾ
ಪ್ರಚಾರ
ಆರಂಭಿಸಿದ್ದು.
ಎಂಟು
ಸ್ಥಾನಗಳನ್ನು
ಗೆಲ್ಲುವ
ಗುರಿ
ಹೊಂದಿದ್ದಾರೆ.[ಶಿವಾಜಿನಗರದಲ್ಲಿ
ಗೆಲುವು
ಯಾರಿಗೆ?]
ಬಿಟಿಎಂ ವಿದ್ಯಾವಂತರ ಕ್ಷೇತ್ರ. ಹಲವಾರು ಐಟಿ ಕಂಪನಿಗಳಿಗೆ ಈ ಕ್ಷೇತ್ರವೇ ತವರು. ಫೋರಂ ಮಾಲ್ ಪ್ರಮುಖ ವ್ಯಾಪಾರಿ ಕೇಂದ್ರ. ನಿಮ್ಹಾನ್ಸ್, ಕಿದ್ವಾಯಿಯಂತಹ ಪ್ರಮುಖ ಆಸ್ಪತ್ರೆಗಳು ವಿಧಾನಸಭಾ ಕ್ಷೇತ್ರದಲ್ಲಿರುವುದು ಕ್ಷೇತ್ರದ ಹಿರಿಮೆ. [ಚುನಾವಣಾ ಪ್ರಚಾರದ ಚಿತ್ರಗಳು]
ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ನಡೆಯುವ ಸಾಧ್ಯತೆ ಇದೆ. 2010ರ ಚುನಾವಣೆಯಲ್ಲಿ 8 ವಾರ್ಡ್ಗಳ ಪೈಕಿ ಬಿಜೆಪಿ 5ರಲ್ಲಿ ಜಯಗಳಿಸಿತ್ತು. ಕಾಂಗ್ರೆಸ್ ಉಳಿದ ಮೂರು ವಾರ್ಡ್ಗಳನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು.
ಕಳೆದ ಬಾರಿ ಚುನಾಯಿತರಾಗಿದ್ದ ಮೂವರು ಸದಸ್ಯರಿಗೂ ಕಾಂಗ್ರೆಸ್ ಈ ಬಾರಿಯೂ ಟಿಕೆಟ್ ನೀಡಿದೆ. ಕಳೆದ ಬಾರಿಯ ಮೂರು ಸ್ಥಾನಗಳ ಜೊತೆ ಈ ಬಾರಿ ಉಳಿದ ಕ್ಷೇತ್ರಗಳಲ್ಲಿಯೂ ಜಯಗಳಿಸಲು ಕಾರ್ಯತಂತ್ರ ರೂಪಿಸಿದೆ.
ವಾರ್ಡ್ವಾರು
ಅಭ್ಯರ್ಥಿಗಳ
ವಿವರ
:
ಲಕ್ಕಸಂದ್ರ
ವಾರ್ಡ್
(146)ರಲ್ಲಿ
ಕೆ.ಮಹೇಶ್
ಬಾಬು
ಅವರು
ಬಿಜೆಪಿ
ಅಭ್ಯರ್ಥಿಯಾಗಿದ್ದು,
ಬಿ.ಮೋಹನ್
ಕಾಂಗ್ರೆಸ್ನಿಂದ
ಸ್ಪರ್ಧಿಸಿದ್ದಾರೆ.
ಅನಂತ
ಅವರು
ಜೆಡಿಎಸ್
ಅಭ್ಯರ್ಥಿ.
ಸುದ್ದುಗುಂಟೇಪಾಳ್ಯ ವಾರ್ಡ್ (152)ರಲ್ಲಿ ಕಳೆದ ಬಾರಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದ ಜಿ.ಮಂಜುನಾಥ್ ಅವರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಬಿಜೆಪಿ ಕೆ.ಮಂಜುನಾಥ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಎಚ್.ಇ.ಕೃಷ್ಣಪ್ಪ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.
ಬಿಟಿಎಂ ಬಡಾವಣೆ ವಾರ್ಡ್ (176)ರಲ್ಲಿ ಕಳೆದ ಬಾರಿ ಆಯ್ಕೆಯಾಗಿದ್ದ ಕಾಂಗ್ರೆಸ್ ಸದಸ್ಯ ಜಿ.ಎನ್.ಆರ್.ಬಾಬು ಅವರು ಈ ಬಾರಿಯೂ ಮರು ಆಯ್ಕೆ ಬಯಸಿದ್ದಾರೆ. ಎಚ್.ಕೆ.ಮುತ್ತಪ್ಪ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದರೆ, ದೇವದಾಸ್ ಅವರು ಜೆಡಿಎಸ್ನಿಂದ ಕಣಕ್ಕಿಳಿದಿದ್ದಾರೆ.
ಮಡಿವಾಳ
ವಾರ್ಡ್ನಲ್ಲಿ
(172)ನಲ್ಲಿ
ಕಾಂಗ್ರೆಸ್
ಮತ್ತು
ಬಿಜೆಪಿ
ನಡುವೆ
ನೇರ
ಸ್ಪರ್ಧೆ
ಇದೆ.
ಕಾಂಗ್ರೆಸ್ನಿಂದ
ಬಿ.ಎಸ್.ಮಂಜುನಾಥ
ರೆಡ್ಡಿ
ಕಣಕ್ಕಿಳಿದಿದ್ದು
ಮರು
ಆಯ್ಕೆ
ಬಯಸಿದ್ದಾರೆ.
ಬಿಜೆಪಿಯಿಂದ
ಎನ್.ಬಾಬು
ರೆಡ್ಡಿ
ಅವರಿಗೆ
ಟಿಕೆಟ್
ನೀಡಿದ್ದು,
ಅಶ್ರಫ್
ಅಹಮದ್
ಜೆಡಿಎಸ್
ಅಭ್ಯರ್ಥಿಯಾಗಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಕಣದಲ್ಲಿಲ್ಲ : ಕೋರಮಂಗಲ ವಾರ್ಡ್ (151)ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ಪೈಪೋಟಿ ಇದೆ. ಇಲ್ಲಿ ಜೆಡಿಎಸ್ ಅಭ್ಯರ್ಥಿ ಚುನಾವಣಾ ಕಣದಲ್ಲಿಲ್ಲ. ಎಂ.ಚಂದ್ರಪ್ಪ ಅವರು ಕಾಂಗ್ರೆಸ್ನಿಂದ ಎಚ್.ಎಂ.ಗೋವಿಂದರಾಜು ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ.
ವಾರ್ಡ್ನಂ 147ರ ಆಡುಗೋಡಿಯಲ್ಲಿಯೂ ಜೆಡಿಎಸ್ ಅಭ್ಯರ್ಥಿ ಇಲ್ಲ. ಮೀಸಲಾತಿ ಬದಲಾವಣೆ ಆಗಿರುವುದರಿಂದ ಮಾಜಿ ಸದಸ್ಯ ಮುರುಗೇಶ್ ಅವರಿಗೆ ಟಿಕೆಟ್ ಕೈ ತಪ್ಪಿದ್ದು, ಕಾಂಗ್ರೆಸ್ ಮಂಜುಳಾ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿ ಅಭ್ಯರ್ಥಿ ಜಾನಕಮ್ಮ.
ಈಜಿಪುರ ವಾರ್ಡ್ (148)ನಲ್ಲಿ ಹಾಲಿ ಸದಸ್ಯಯಾಗಿದ್ದ ಸರೋಜ ಅವರ ಬದಲು ಕಾಂಗ್ರೆಸ್ ರಾಮಚಂದ್ರ ಅವರಿಗೆ ಟಿಕೆಟ್ ನೀಡಿದೆ. ಬಿಜೆಪಿಯಿಂದ ಶಾಂತರಾಜು, ಜೆಡಿಎಸ್ನಿಂದ ವೈ.ಎನ್.ಅಶೋಕ್ ಕುಮಾರ್ ಕಣದಲ್ಲಿದ್ದಾರೆ.
ಜಕ್ಕಸಂದ್ರ ವಾರ್ಡ್ (173)ನಲ್ಲಿ ಬಿಜೆಪಿಯಿಂದ ಸರಸ್ವತಮ್ಮ, ಜೆಡಿಎಸ್ನಿಂದ ಯಲ್ಲಮ್ಮ, ಕಾಂಗ್ರೆಸ್ನಿಂದ ಲಕ್ಷ್ಮೀ ಅವರು ಕಣದಲ್ಲಿದ್ದಾರೆ. 2010ರಲ್ಲಿ ಸರಸ್ವತಮ್ಮ ಅವರು ಜಯಗಳಿಸಿದ್ದರು. ಈ ಬಾರಿ ಪುನಃ ಅವರಿಗೆ ಟಿಕೆಟ್ ನೀಡಲಾಗಿದೆ.