ಬೆಂಗಳೂರು ಆಟೋ ಡ್ರೈವರುಗಳಿಬ್ರು ಏನ್ಮಾಡಿದ್ದಾರೆ ನೋಡಿ
ಬೆಂಗಳೂರು, ಮೇ 11: ನಮ್ಮ ಟ್ರಾಫಿಕ್ ಪೊಲೀಸರು ಬೆಂಗಳೂರು ಸಿಲಿಕಾನ್ ಸಿಟಿ ಖ್ಯಾತಿಗೆ ತಕ್ಕಂತೆ ಮಾಹಿತಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಯಾವುದೋ ಕಾಲವಾಗಿದೆ. ಅದರಲ್ಲೂ ಫೇಸ್ ಬುಕ್ ಮೂಲಕ ಪರಿಣಾಮಕಾರಿಯಾಗಿ ಜನಮನ ತಲುಪಿದ್ದಾರೆ.
ಆದರೆ ಇತ್ತೀಚೆಗೆ ಬೆಂಗಳೂರು ನಗರ ಜನಸಮುದ್ರವಾಗಿದ್ದು, ಅಪರಾಧಗಳಿಗೆ ಪ್ರಶಸ್ತ ಸ್ಥಳವಾಗಿದೆ ಎಂಬ ಕುಖ್ಯಾತಿಯನ್ನೂ ಸಂಪಾದಿಸಿದೆ. ಎಲ್ಲಿ ನೋಡಿದರೂ ಮೋಸ, ಅನ್ಯಾಯ, ಅಕ್ರಮ, ವಂಚನೆ ಬರೀ ಇವೇ ಆಗಿದೆ. ಬೆಂಗಳೂರಿನ ಜನರಂತೂ ಇದರಿಂದ ರೋಸಿಹೋಗಿದ್ದಾರೆ. ಆದರೆ ಇಂತಹ ಸಮಯದಲ್ಲೇ ಜನರ ವಿಶ್ವಾಸವನ್ನು ಗಟ್ಟಿಗೊಳಿಸುವ ಪ್ರಸಂಗಗಳೂ ಆಗಾಗ ನಡೆಯುತ್ತಿರುತ್ತವೆ.
ಅದರಲ್ಲೂ ಬೆಂಗಳೂರು ಸಂಚಾರ ವ್ಯವಸ್ಥೆಯ ಜೀವನಾಡಿಯಾದ ಆಟೋಗಳ ಬಗ್ಗೆ ಸದಾ ದೂರು ದುಃಖ ದುಮ್ಮಾನ ಇದ್ದೇ ಇರುತ್ತದೆ. ಇಂತಹ ಸಂದರ್ಭದಲ್ಲಿ ಕೆಲ ಆಟೋ ಚಾಲಕರು ಆಗಾಗ ಪ್ರಾಮಾಣಿಕತೆ ಮೆರೆದು ನಮ್ಮಂಥವರು ಬೆಂಗಳೂರಿನಲ್ಲಿ ಇನ್ನೂ ಇದ್ದಾರೆ ಎಂದು ನಿರೂಪಿಸುತ್ತಿರುತ್ತಾರೆ. ತಾಜಾ ಆಗಿ ಇಬ್ಬರು ಆಟೋ ಡ್ರೈವರುಗಳು ಪ್ರಾಮಾಣಿಕತೆ ಮೆರೆದು ಜನರಿಂದ ಅದೂ ಫೇಸ್ ಬುಕ್ ಗೆಳೆಯರಿಂದ ಶಹಬ್ಬಾಸ್ ಅನ್ನಿಸಿಕೊಂಡಿದ್ದಾರೆ. ಆ ಎರಡೂ ಪ್ರಸಂಗಗಳು ನಡೆದಿದ್ದು ಹೀಗೆ:
ಅರವಿಂದ್ ಅನ್ನುವರರು ಫೇಸ್ ಬುಕ್ ನಲ್ಲಿ ಹೀಗೆ ಬರೆದಿದ್ದಾರೆ:

ಗುರುವಾರ ರಾತ್ರಿ ವೇಳೆ ಏನಾಯಿತೆಂದರೆ ಆಟೋದಲ್ಲಿ ಪ್ರಯಾಣಿಸುವಾಗ ನಾನೊಂದು ಬ್ಯಾಗ್ ಕಳೆದುಕೊಂಡಿದ್ದೆ. ಅದರಲ್ಲಿ ಒಂದು ಮೊಬೈಲು, 55 ಸಾವಿರ ರೂ ಕ್ಯಾಷು, ಗೋಲ್ಡ್ ಚೈನ್, ಗೋಲ್ಡ್ ರಿಂಗ್, ಕ್ರೆಡಿಟ್ ಕಾರ್ಡ್, ಪಾಸ್ ಪೋರ್ಟ್ ಮತ್ತು ಇನ್ನೂ ಅನೇಕ ಮುಖ್ಯ ದಾಖಲೆಗಳು ಇದ್ದವು. ಆದರೆ ಅದು ವಾಪಸ್ ಸಿಗುತ್ತದೆ ಎಂಬ ನಂಬಿಕೆ ಕಳೆದುಕೊಂಡು ತಲೆಯ ಮೇಲೆ ಕೈಹೊತ್ತು ಕುಳಿತಿದ್ದೆ.
ಆದರೆ ಮಾರನೆಯ ದಿನ ಬೆಳಗ್ಗೆಯೇ ಸಯ್ಯದ್ ಪಾಷಾ ಎಂಬ ಮಹಾನುಭಾವ ನಗುನಗುತಾ ನನ್ನ ಕಡೆಗೆ ಬಂದಿದ್ದ. ವಿವೇಕನಗರದ ಸಯ್ಯದ್ ಪಾಷಾ ಸುಮಾರು 2 ಗಂಟೆ ಕಾಲ ಹುಡಕಾಡಿ ಕೊನೆಗೂ ನನ್ನ ಮನೆ ಪತ್ತೆ ಹಚ್ಚಿದ್ದ. ಮನೆಗೆ ಬಂದನವೇ ಪಾಷಾ ನನ್ನ ಬ್ಯಾಗನ್ನು ಮರಳಿಸಿದ. ಆತನ ಎದುರೇ ಬ್ಯಾಗನ್ನು ತೆರೆದು ನೋಡಿದಾಗ ಅದರಲ್ಲಿದ್ದ ಎಲ್ಲ ವಸ್ತಗಳೂ ಯಥಾಸ್ಥಿತಿಯಲ್ಲಿದ್ದುದ್ದು ಕಂಡು ನಾನು ಸ್ತಂಭೀಭೂತನಾದೆ. ಏನಪ್ಪಾ ಈ ಕಾಲಲ್ಲೂ ನಿನ್ನಂಥವರಿದ್ದಾರಲ್ಲಾ ಎಂದು ಆತನನ್ನೇ ಕೇಳುತ್ತಾ, ಆತನ ಕೈ ಹಿಡಿದೆ. ಯಸ್ ಬೆಂಗಳೂರಿನಲ್ಲಿ ಇನ್ನೂ ಇಂತಹ ಪ್ರಮಾಣಿಕತೆ ಮತ್ತು ಪ್ರಮಾಣಿಕ ಆಟೋ ಡ್ರೈವರುಗಳು ಇದ್ದಾರೆ. ಇಂತಹವರ ಸಂಖ್ಯೆ ಹೆಚ್ಚಾಗಲಿ.
ಆಟೋ ಡ್ರೈವರುಗಳು ಬಗೆಗಿನ ವಿಶ್ವಾಸ ಮರಳಿಸಿದ ಮೋಹನ್!

-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications