ಬೆಂಗಳೂರಿನಲ್ಲಿ ಕೇಜ್ರಿವಾಲ್ ಊಟಕ್ಕೆ 20 ಸಾವಿರ ರೂ!
ಬೆಂಗಳೂರು, ಮಾರ್ಚ್ 8: ಇದು ನಿಜಕ್ಕೂ ಬೆಂಗಳೂರಿಗರ ಭಾಗ್ಯ! ಕೇವಲ 20 ಸಾವಿರ ರೂಪಾಯಿ ನೀಡಿದರೆ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲಾರ ಜತೆ ಕುಳಿತು ಪುಷ್ಕಳ ಊಟ ಮಾಡಬಹುದು.
ಇದು ಆಮ್ ಆದ್ಮಿ ಅಂದರೆ ಜನಸಾಮಾನ್ಯನಿಗೆ ಅರಗಿಸಿಕೊಳ್ಳುವುದಕ್ಕೆ ತುಸು ಕಷ್ಟವೇ ಆದರೂ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲಾರ ಪಕ್ಕದಲ್ಲಿ ಕುಳಿತು ಊಟ ಮಾಡುವ ಭಾಗ್ಯ ಬೆಂಗಳೂರಿಗರಿಗೆ ಸಿಕ್ಕಿದೆ.

ಅಧಿಕಾರದ ಹಸಿವಿನಲ್ಲಿರುವ ಅರವಿಂದ್ ಕೇಜ್ರಿವಾಲಾ ಅವರು ಬೆಂಗಳೂರಿಗರಿಗೆ ಈ ಅಫರ್ ನೀಡಿದ್ದಾರೆ. ಆದರೆ ಹೀಗೆ ಸಂಗ್ರಹಿಸಿದ ಮೊತ್ತವನ್ನು ಪಾರ್ಟಿ ಫಂಡ್ ಗೆ ವಿನಿಯೋಗಿಸುವುದಾಗಿ ಎಎಪಿ ನಾಯಕರು ಹೇಳಿದ್ದಾರೆ. ಅಂದಹಾಗೆ, ಅರವಿಂದ್ ಮುಂದಿನ ಶನಿವಾರ/ ಭಾನುವಾರ (ಮಾರ್ಚ್ 15-16) ನಗರಕ್ಕೆ ಬರುತ್ತಿದ್ದಾರೆ.
ಪಕ್ಷದ ನಿಧಿ ಸಂಗ್ರಹಣೆಗಾಗಿ ಈ ವಿನೂತನ ಭೋಜನಕೂಟ ಏರ್ಪಡಿಸಿರುವ ಆಪ್ ಪಕ್ಷವು ಬಿಗದಿತ ಹಣ ಕೊಟ್ಟರೆ ತಮ್ಮ ನಾಯಕ ಅರವಿಂದ್ ಜತೆ ಊಟದ ಜತೆಗೆ ಸಂದರ್ಶನ ಸಹ ಮಾಡಬಹುದು ಎಂದು ತಿಳಿಸಿದೆ.
ಟೇಬಲ್ ಕೆಳಗಿಂದ ಅಲ್ಲ, ಟೇಬಲ್ ಮೇಲೆ ಪಾರದರ್ಶಕವಾಗಿ: ಎಎಪಿ ಸದಸ್ಯ, ಇನ್ಫಿ ಮಾಜಿ ಮುಖ್ಯಸ್ಥ ವಿ ಬಾಲಕೃಷ್ಣನ್ ಅವರು ಈ ಡಿನ್ನರ್ ಪಾರ್ಟಿ ಆಯೋಜಿಸಿದ್ದಾರೆ. ಸುಮಾರು 200 ಮಂದಿಗೆ ಆಹ್ವಾನವೂ ಹೋಗಿದೆ. 200 ಮಂದಿಯಿಂದ ತಲಾ 20,000 ರೂ ಸ್ವೀಕರಿಸಿದರೆ 40 ಲಕ್ಷ ರೂಪಾಯಿ ಸಂಗ್ರಹವಾಗಲಿದೆ ಎಂಬುದು ಆಪ್ ಲೆಕ್ಕಾಚಾರವಾಗಿದೆ.
ಖಾಸಗಿ ಹೋಟೆಲ್ ಒಂದರಲ್ಲಿ ಈ ಊಟ ಕಂ ಸಂವಾದವನ್ನು ಸುಮಾರು 1 ಗಂಟೆ ಕಾಲ ಆಯೋಜಿಸಲಾಗಿದೆ. ಉದ್ಯಮಿಗಳನ್ನು ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಮುಖರಿಗೆ ಮಾತ್ರ ಆಹ್ವಾನ ನೀಡಲಾಗಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications