ಮೋದಿ ಸಮಾವೇಶ : ಸಂಚಾರ ವ್ಯವಸ್ಥೆ ಹೇಗೆ?
ಬೆಂಗಳೂರು, ನ.16 : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಭಾರತ ಗೆಲ್ಲಿಸ ಸಮಾವೇಶಕ್ಕಾಗಿ ಅರಮನೆ ಆವರಣ ಸಕಲ ರೀತಿಯಲ್ಲಿ ಸಜ್ಜಾಗಿದೆ. ಸಮಾವೇಶದಿಂದಾಗಿ ನಗರದ ಸಂಚಾರ ವ್ಯವಸ್ಥೆಗೆ ಯಾವುದೇ ತೊಂದರೆ ಆಗದಂತೆ ಸಂಚಾರಿ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಭಾನುವಾರ ಬೆಳಗ್ಗೆ 6ರಿಂದ ರಾತ್ರಿ 10ರ ವರೆಗೆ ಬಳ್ಳಾರಿ ರಸ್ತೆಯತ್ತ ಮುಖಮಾಡದಿರುವುದು ಒಳಿತು.
ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಬಿ. ದಯಾನಂದ್ ನಗರದ ಸಂಚಾರಿ ವ್ಯವಸ್ಥೆಯ ಕುರಿತು ಮಾಹಿತಿ ನೀಡಿದರು. ಬಳ್ಳಾರಿ ರಸ್ತೆಯ ಕಾವೇರಿ ಜಂಕ್ಷನ್, ಮೇಖ್ರಿ ವೃತ್ತ, ಹೆಬ್ಬಾಳದವರೆಗೆ ಬೇರೆ ವಾಹನಗಳ ಸಂಚಾರ ನಿರ್ಬಂಧಿಸಿ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ಆಂಬ್ಯುಲೆನ್ಸ್ ವಾಹನಗಳಿಗೆ ಮಾತ್ರ ಇಲ್ಲಿ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಅರಮನೆ ಸುತ್ತ ಮುತ್ತಲ ರಸ್ತೆಗಳಾದ ಅರಮನೆ ರಸ್ತೆ, ಬಳ್ಳಾರಿ ರಸ್ತೆ, ರಮಣ ಮಹರ್ಷಿ ರಸ್ತೆ, ಚೌಡಯ್ಯ ರಸ್ತೆ, ಜಯಮಹಲ್ ರಸ್ತೆ, ಸರ್ ಸಿವಿ ರಾಮನ್ ರಸ್ತೆ, ಕೆಕೆ ರಸ್ತೆ, ವಸಂತ ನಗರ 1ನೇ ಮುಖ್ಯ ರಸ್ತೆ, ಪ್ಯಾಲೇಸ್ ಕ್ರಾಸ್ ರಸ್ತೆಗಳನ್ನು ಬಳಸದೆ ಬದಲಿ ರಸ್ತೆಗಳನ್ನು ಬಳಸುವಂತೆ ಸಾರ್ವಜನಿಕರಿಗೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ಇಲ್ಲಿ ಪಾರ್ಕಿಂಗ್ ಮಾಡಬಹುದು
* ಖಾಸಗಿ ಬಸ್ಸುಗಳು ಅರಮನೆ ಮೈದಾನದಲ್ಲಿರುವ ಸರ್ಕಸ್ ಗ್ರೌಂಡ್, ಹಳೆಮಾವಿನ ಕಾಯಿ ಮಂಡಿ, ಶಾರುಖ್ಖಾನ್ ಮೈದಾನದಲ್ಲಿ ಪಾರ್ಕಿಂಗ್ ಮಾಡಬಹುದು.
* ಅರಮನೆ ಮುಖ್ಯದ್ವಾರದಿಂದ( ವಸಂತನಗರ ಕಡೆಯಿಂದ) ಪ್ರವೇಶಿಸುವ ಕಾರುಗಳು ಅರಮನೆ ಮುಂಭಾಗದ ಮೈದಾನದಲ್ಲಿ ನಿಲುಗಡೆ ಮಾಡಬಹುದು.
* ವಸಂತ ನಗರ 1ನೇ ಮುಖ್ಯ ರಸ್ತೆಯಲ್ಲಿರುವ ಕೊಡವ ಸಮಾಜ ಮುಂಭಾಗದ ಆಟದ ಮೈದಾನ.
* ದ್ವಿಚಕ್ರ ವಾಹನಗಳಿಗೆ ಟೆನಿಸ್ ಪೆವಿಲಿಯನ್ ಮೈದಾನ, ಬಿಡಿಎ ಬಳಿ ಇರುವ ರೈಲ್ವೆ ಪ್ಯಾರಲಲ್ ರಸ್ತೆಯಲ್ಲಿ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
* ಟೆಂಪೋ ಟ್ರಾವೆಲರ್, ಟ್ರಾಕ್ಸ್ ವಾಹನಗಳು ಬಳ್ಳಾರಿ ರಸ್ತೆಯಲ್ಲಿರುವ ಪಶು ವೈದ್ಯ ಮಹಾವಿದ್ಯಾಲಯದ ಆವರಣದಲ್ಲಿರುವ ಹಾಕಿ ಮತ್ತು ಫುಟ್ಬಾಲ್ ಮೈದಾನದ.
* ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ಗಳು ಹೆಬ್ಬಾಳ ಬಳಿಯಿರುವ ಬಿಎಂಟಿಸಿ 28 ಘಟಕದಲ್ಲಿ ನಿಲ್ಲಿಸಬೇಕು.
ಪಾರ್ಕಿಂಗ್ ಗೆ ಇಲ್ಲಿ ನಿಷೇಧ
ಬಳ್ಳಾರಿ ರಸ್ತೆಯಲ್ಲಿ ಹೆಬ್ಬಾಳ ಜಂಕ್ಷನ್ನಿಂದ ಎಚ್ಕ್ಯೂಟಿಸಿ ಜಂಕ್ಷನ್ವರೆಗೆ ರಸ್ತೆಯ ಎರಡೂ ಬದಿ. ಪಶು ವೈದ್ಯ ಮಹಾವಿದ್ಯಾಲಯ ಮಾರ್ಗ, ರಮಣ ಮಹರ್ಷಿ ರಸ್ತೆಯಲ್ಲಿ ಮೇಖ್ರಿ ವೃತ್ತದಿಂದ ಕಾವೇರಿ ಚಿತ್ರಮಂದಿರ ಜಂಕ್ಷನ್ ವರೆಗೆ ರಸ್ತೆಯ ಎರಡೂ ಬದಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ಚೌಡಯ್ಯ ರಸ್ತೆಯಲ್ಲಿ ರಾಜ ಭವನ ಜಂಕ್ಷನ್ ನಿಂದ ಕಾವೇರಿ ಚಿತ್ರ ಮಂದಿರ ಜಂಕ್ಷನ್ ರಸ್ತೆಯ, ಸರ್ ಸಿವಿ ರಾಮನ್ ರಸ್ತೆಯಲ್ಲಿ ಮೇಖ್ರಿ ವೃತ್ತದಿಂದ ಬಿಎಚ್ಇಎಲ್ ವೃತ್ತದವರೆಗೆ, ಜಯಮಹಲ್ ಮುಖ್ಯ ರಸ್ತೆಯಲ್ಲಿ ಮೇಖ್ರಿ ವೃತ್ತದಿಂದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣವರೆಗಿನ ರಸ್ತೆ, ನಂದಿದುರ್ಗ ರಸ್ತೆಯಲ್ಲಿ ಜೆ.ಸಿ. ನಗರ ಪೊಲೀಸ್ ಠಾಣೆ ಜಂಕ್ಷನ್ ನಿಂದ ಹಜ್ ಕ್ಯಾಂಪ್ ಜಂಕ್ಷನ್ವರೆಗೆ, ಬಸವೇಶ್ವರ ವೃತ್ತದಿಂದ ಪ್ಯಾಲೇಸ್ ಮುಖ್ಯ ಗೇಟ್ವರೆಗೆ, ಬಿಡಿಎ ಜಂಕ್ಷನ್ನಿಂದ ವಸಂತ ನಗರ ರೈಲ್ವೆ ಕೆಳಸೇತುವೆವರೆಗಿನ ಎಲ್ಲಾ ರಸ್ತೆಗಳ ಎರಡು ಬದಿಯಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.
ಸಾಮಾನ್ಯ ವಾಹನಗಳ ಮಾರ್ಗ
ನಗರದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ವಾಹನಗಳು ಬಸವೇಶ್ವರ ವೃತ್ತ (ಚಾಲುಕ್ಯ ವೃತ್ತ) ಹಳೆ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಜಂಕ್ಷನ್ ಎಡ ತಿರುವು- ವಿಂಡ್ಸರ್ ಮ್ಯಾನರ್ ಜಂಕ್ಷನ್, ಕಾವೇರಿ ಚಿತ್ರಮಂದಿರ ಜಂಕ್ಷನ್ ಎಡ ತಿರುವು, ಬಾಷ್ಯಂ ಸರ್ಕಲ್ ಬಲ ತಿರುವು, ಜೀವರಾಜ ಆಳ್ವ ರಸ್ತೆ, ಸದಾಶಿವನಗರ ಪೊಲೀಸ್ ಠಾಣೆ ಜಂಕ್ಷನ್ ತಿರುವು ಸಿ.ವಿ. ರಾಮನ್ ರಸ್ತೆ ಮೇಖ್ರಿ ವೃತ್ತ ಎಡ ತಿರುವು ಬಳ್ಳಾರಿ ರಸ್ತೆ ಮೂಲಕ ಸಾಗಬಹುದು.
* ಎಂಜಿ ರಸ್ತೆ, ಕಾಮರಾಜ ರಸ್ತೆ, ಥಾಮಸ್ ಕೆಫೆ, ವೀಲರ್ ರಸ್ತೆ, ಐಟಿಸಿ ಫ್ಲೈಓವರ್ ಮಾರುತಿ ಸೇವಾನಗರ ಐಓಸಿ ಮೇಲು ರಸ್ತೆ, ಬಾಣಸವಾಡಿ ಮುಖ್ಯ ರಸ್ತೆ ಎಡ ತಿರುವು, ಹೊರ ವರ್ತುಲ ರಸ್ತೆ ಹೆಣ್ಣೂರು ನಾಗವಾರ ಜಂಕ್ಷನ್ ಬಲ ತಿರುವು ಥಣಿಸಂದ್ರ ಮುಖ್ಯ ರಸ್ತೆ ಹೆಗಡೆನಗರ ಕಟ್ಟಿಗೇನಹಳ್ಳಿ ಎಡ ತಿರುವು ಬಾಗಲೂರು ಕ್ರಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮೂಲಕ ಸಾಗಬಹುದು.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳಲು
* ವಿಮಾನ ನಿಲ್ದಾಣದಿಂದ ಪೂರ್ವ ಮತ್ತು ಆಗ್ನೇಯ ಕಡೆಗೆ ಸಾಗುವ ವಾಹನಗಳು ಹೆಬ್ಬಾಳ ಫ್ಲೈಓವರ್ ಎಡ ತಿರುವು ನಾಗವಾರ ಜಂಕ್ಷನ್ ಹೆಣ್ಣೂರು ವರ್ತುಲ ರಸ್ತೆ ಜಂಕ್ಷನ್ ಕಲ್ಯಾಣನಗರ ರಾಮಮೂರ್ತಿನಗರ ಕೆ.ಆರ್.ಪುರನಿಂದ ಮುಂದಕ್ಕೆ ಸಾಗಬಹುದು.
* ದಕ್ಷಿಣ ಮತ್ತು ಉತ್ತರದ ಕಡೆಗೆ ಸಾಗುವ ವಾಹನಗಳು ಹೆಬ್ಬಾಳ ಫ್ಲೈ ಓವರ್ ಬಲ ತಿರುವು, ಬಿಇಎಲ್ ವೃತ್ತ ಎಡ ತಿರುವು, ನ್ಯೂ ಬಿಇಎಲ್ ರಸ್ತೆ ಸದಾಶಿವನಗರ ಪೊಲೀಸ್ ಠಾಣೆ ಬಲ ತಿರುವು, ಸಿಎನ್ಆರ್ ರಾವ್ ವೃತ್ತ ಎಡ ತಿರುವು, ಸರ್ಕಲ್ ಮಾರಿಯಮ್ಮ ವೃತ್ತ ಬಲ ತಿರುವು, ಕೆ.ಸಿ. ಜನರಲ್ ಆಸ್ಪತ್ರೆ ಜಂಕ್ಷನ್ ಎಡ ತಿರುವು, ಗೀತಾಂಜಲಿ ಚಿತ್ರ ಮಂದಿರ ಬಲ ತಿರುವು, ಆನಂದರಾವ್ ವೃತ್ತ ಮೂಲಕ ಮೆಜೆಸ್ಟಿಕ್ ತಲುಪಬಹುದು.
ಭಾರಿ ವಾಹನಗಳ ಮಾರ್ಗಗಳು
* ಚಿಕ್ಕಬಳ್ಳಾಪುರದ ಕಡೆಯಿಂದ ತುಮಕೂರು ರಸ್ತೆಗೆ ಹೋಗುವ ಸರಕು ಸಾಗಾಣಿಕೆ ವಾಹನಗಳು ಬಳ್ಳಾರಿ ರಸ್ತೆ-ದೊಡ್ಡಬಳ್ಳಾಪುರ ರಸ್ತೆ ಜಂಕ್ಷನ್ -ದೇವನಹಳ್ಳಿ ಜಂಕ್ಷನ್ ಬಲ ತಿರುವು ದೊಡ್ಡಬಳ್ಳಾಪುರ ರಸ್ತೆ ದೊಡ್ಡಬಳ್ಳಾಪುರ ದೊಡ್ಡಬೆಳವಂಗಲ ದಾಬಸ್ಪೇಟೆ ಮೂಲಕ ತುಮಕೂರು ರಸ್ತೆಗೆ ತಲುಪಬೇಕು.
* ತುಮಕೂರು ರಸ್ತೆ ದಾಬಸ್ಪೇಟೆ ಎಡ ತಿರುವು ದೊಡ್ಡಬೆಳವಂಗಲ ದೊಡ್ಡಬಳ್ಳಾಪುರ ದೇವನಹಳ್ಳಿ ಜಂಕ್ಷನ್ ಬಳ್ಳಾರಿ ರಸ್ತೆ, ಚಿಕ್ಕಬಳ್ಳಾಪುರದ ಕಡೆಯಿಂದ ಹಳೇ ಮದ್ರಾಸ್ ರಸ್ತೆಗೆ ಹೋಗಲು ಬಳ್ಳಾರಿ ರಸ್ತೆ ಎಡ ತಿರುವು ದೇವನಹಳ್ಳಿ ಬೂದಿಗೆರೆ ಕ್ರಾಸ್ ಎನ್. ಎಚ್ 207 ಹಳೆ ಮದ್ರಾಸ್ ರಸ್ತೆಯಲ್ಲಿ ಹೋಗಬಹುದು.
* ತುಮಕೂರು ರಸ್ತೆಯಲ್ಲಿ ಬರುವ ವಾಹನಗಳು ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ಮಾದವಾರ ಬಳಿ ನೈಸ್ ರಸ್ತೆ ಮೂಲಕ ಮೈಸೂರು ರಸ್ತೆ ಕಡೆಗೆ ತೆರಳಬಹುದು.
* ಹೊಸೂರು ರಸ್ತೆಯಲ್ಲಿ ಬರುವ ವಾಹನಗಳು ಎಲೆಕ್ಟ್ರಾನಿಕ್ ಸಿಟಿ ಬಳಿ ನೈಸ್ ರಸ್ತೆಯಲ್ಲಿ ಹೋಗಿ ತುಮಕೂರು ರಸ್ತೆ ಸೇರಬಹುದಾಗಿದೆ. ಅದೇ ರೀತಿ ದೊಡ್ಡಬಳ್ಳಾಪುರ ರಸ್ತೆ, ಮೇಜರ್ ಉಣ್ಣಿಕೃಷ್ಣನ್ ರಸ್ತೆ ಯಲಹಂಕ ನ್ಯೂಟೌನ್ ವಿದ್ಯಾರಣ್ಯಪುರ ಮುಖ್ಯ ರಸ್ತೆಯಿಂದ ತುಮಕೂರು ರಸ್ತೆಗೆ ಸೇರಬಹುದು.
ಹೊರ ಜಿಲ್ಲೆಗಳಿಂದ ಆಗಮಿಸುವ ವಾಹನಗಳು
* ಮೈಸೂರು ರಸ್ತೆ ಮಾರ್ಗವಾಗಿ ಆಗಮಿಸುವ ವಾಹನಗಳು ನಾಯಂಡಹಳ್ಳಿ ಜಂಕ್ಷನ್ ಎಡ ತಿರುವು, ಸುಮನಹಳ್ಳಿ ಜಂಕ್ಷನ್ ಡಾ. ರಾಜ್ಕುಮಾರ್ ಸಮಾಧಿಯಲ್ಲಿ ಬಲ ತಿರುವು, ತುಮಕೂರು ರಸ್ತೆ ಗೊರಗುಂಟೆ ಪಾಳ್ಯ ಜಂಕ್ಷನ್ ಎಡ ತಿರುವು, ಬಿಇಎಲ್ ಜಂಕ್ಷನ್ ಹೊರ ವರ್ತುಲ ರಸ್ತೆ ಹೆಬ್ಬಾಳ ಫ್ಲೈಓವರ್ ರಸ್ತೆ.
* ತುಮಕೂರು ರಸ್ತೆ ಎಡ ತಿರುವು, ಗೊರಗುಂಟೆಪಾಳ್ಯ ಜಂಕ್ಷನ್ ಎಡ ತಿರುವು, ಬಿಇಎಲ್ ಜಂಕ್ಷನ್ ಹೊರ ವರ್ತುಲ ರಸ್ತೆ, ಹೆಬ್ಬಾಳ ಫ್ಲೈಓವರ್ ರಸ್ತೆ.
* ಕನಕಪುರ ರಸ್ತೆ ಹೊರ ವರ್ತುಲ ರಸ್ತೆ ಜಂಕ್ಷನ್ ಎಡ ತಿರುವು, ಕದಿರೇನಹಳ್ಳಿ ಪದ್ಮನಾಭನಗರ ಜಂಕ್ಷನ್ ಪಿಇಎಸ್ ಕಾಲೇಜ್ ಜಂಕ್ಷನ್ ನಾಯಂಡಹಳ್ಳಿ ಜಂಕ್ಷನ್ ಎಡ ತಿರುವು, ಸುಮನಹಳ್ಳಿ ಜಂಕ್ಷನ್ ಡಾ. ರಾಜ್ಕುಮಾರ್ ಸಮಾಧಿ ಬಲ ತಿರುವು, ತುಮಕೂರು ರಸ್ತೆ ಗೊರಗುಂಟೆಪಾಳ್ಯ ಜಂಕ್ಷನ್ ಎಡ ತಿರುವು, ಬಿಇಎಲ್ ಜಂಕ್ಷನ್ ಹೊರ ವರ್ತುಲ ರಸ್ತೆ ಹೆಬ್ಬಾಳ ಮೇಲು ರಸ್ತೆ.
* ಬನ್ನೇರುಘಟ್ಟ ರಸ್ತೆ ಎಡ ತಿರುವು, ಪುಟ್ಟೇನಹಳ್ಳಿ ಅಂಡರ್ ಪಾಸ್ ಕನಕಪುರ ರಸ್ತೆ ಹೊರ ರ್ತುಲ ರಸ್ತೆ ಜಂಕ್ಷನ್ ಎಡ ತಿರುವು, ಕದಿರೇನಹಳ್ಳಿ ಪದ್ಮನಾಭನಗರ ಜಂಕ್ಷನ್ ಪಿಇಎಸ್ ಕಾಲೇಜ್ ಜಂಕ್ಷನ್ ನಾಯಂಡಹಳ್ಳಿ ಜಂಕ್ಷನ್ ಎಡ ತಿರುವು, ಸುಮನಹಳ್ಳಿ ಜಂಕ್ಷನ್ ಡಾ. ರಾಜ್ಕುಮಾರ್ ಸಮಾಧಿ ಬಲ ತಿರುವು, ತುಮಕೂರು ರಸ್ತೆ ಗೊರಗುಂಟೆಪಾಳ್ಯ ಜಂಕ್ಷನ್ ಎಡ ತಿರುವು, ಬಿಇಎಲ್ ಜಂಕ್ಷನ್ ಹೊರ ವರ್ತುಲ ರಸ್ತೆ ಹೆಬ್ಬಾಳ ಫ್ಲೈಓವರ್ ರಸ್ತೆ.
* ಬನ್ನೇರುಘಟ್ಟ ರಸ್ತೆ ಜಯದೇವ ಮೇಲ್ಸೇತುವೆ ಬಲ ತಿರುವು, ಸಿಲ್ಕ್ ಬೋರ್ಡ್ ಜಂಕ್ಷನ್ ಮಾರತ್ಹಳ್ಳಿ ಹೆಣ್ಣೂರು ಜಂಕ್ಷನ್ ನಾಗಾವಾರ ಜಂಕ್ಷನ್ ಮೇಲು ರಸ್ತೆ. ಹೊಸೂರು ರಸ್ತೆ ಸಿಲ್ಕ್ ಬೋರ್ಡ್ ಜಂಕ್ಷನ್ ಮಾರತ್ಹಳ್ಳಿ ಹೆಣ್ಣೂರು ಜಂಕ್ಷನ್ ನಾಗಾವಾರ ಜಂಕ್ಷನ್ ಮೇಖ್ರಿ ಸರ್ಕಲ್.
*ಹಳೆ ಮದ್ರಾಸ್ ರಸ್ತೆ ಕೆ.ಆರ್ ಪುರ ಸೇತುವೆ ಹೆಣ್ಣೂರು ಜಂಕ್ಷನ್ ನಾಗಾವಾರ ಜಂಕ್ಷನ್ ಹೆಬ್ಬಾಳ ಫ್ಲೈಓವರ್. ಬಳ್ಳಾರಿ ರಸ್ತೆ ದೇವನಹಳ್ಳಿ ಚಿಕ್ಕಜಾಲ ಹುಣಸಮಾರನಹಳ್ಳಿ ಕೋಗಿಲು ಜಂಕ್ಷನ್ ಕೋಡಿಗೆಹಳ್ಳಿ ಗೇಟ್ ಹೆಬ್ಬಾಳ ಫ್ಲೈಓವರ್ ರಸ್ತೆ ಮೇಖ್ರಿ ಸರ್ಕಲ್.
*ದೊಡ್ಡಬಳ್ಳಾಪುರ ರಸ್ತೆ ಮೇಜರ್ ಉಣ್ಣಿಕೃಷ್ಣನ್ ರಸ್ತೆ ಜಂಕ್ಷನ್ ಯಲಹಂಕ ಪೊಲೀಸ್ ಠಾಣೆ ಜಂಕ್ಷನ್ ಬಲ ತಿರುವು, ಯಲಹಂಕ ಬೈಪಾಸ್ ಜಂಕ್ಷನ್ ಬಳ್ಳಾರಿ ರಸ್ತೆ ಕೋಡಿಗೆ ಹಳ್ಳಿ ಗೇಟ್ ಹೆಬ್ಬಾಳ ಮೇಲು ರಸ್ತೆ ಮೇಖ್ರಿ ಸರ್ಕಲ್.
-
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ವಲಸೆ ಕಾರ್ಮಿಕರಿಂದಾಗಿ ಉದ್ಯೋಗ ನಷ್ಟವಾಗುತ್ತಿರುವ ಬಗ್ಗೆ ಅಧಿಕೃತ ದೂರು ಸಲ್ಲಿಕೆಯಾಗಿಲ್ಲ: ಕಾರ್ಮಿಕ ಇಲಾಖೆ ಸ್ಪಷ್ಟನೆ -
ಯುಗಾದಿ, ರಂಜಾನ್ ಹಬ್ಬಕ್ಕೆ 2000 ವಿಶೇಷ ಬಸ್: ಮುಂಗಡ ಟಿಕೆಟ್ ಗೆ ರಿಯಾಯ್ತಿ ಘೋಷಿಸಿದ KSRTC -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ












Click it and Unblock the Notifications