ಬರಿಗೈನಲ್ಲಿ ಚರಂಡಿ ಸ್ವಚ್ಛಮಾಡಿದ ಪೊಲೀಸ್: ಟ್ವಿಟರ್ನಲ್ಲಿ ಮೆಚ್ಚುಗೆ
ಬೆಂಗಳೂರು, ಏಪ್ರಿಲ್ 30: ಮಳೆರಾಯ ಸೋಮವಾರ ಮಧ್ಯಾಹ್ನ ನಗರದಲ್ಲಿ ತನ್ನ ಪ್ರತಾಪ ತೋರಿಸಿದ್ದಾನೆ. ನಗರದ ವಿವಿಧೆಡೆ ಧಾರಾಕಾರವಾಗಿ ಮಳೆ ಅಬ್ಬರಿಸಿದೆ. ಎಂದಿನಂತೆ ರಸ್ತೆಗಳ ಮೇಲೆ ನದಿಯಂತೆ ನೀರು ತುಂಬಿ ಹರಿದಿದೆ. ವಾಹನ ಚಲಾಯಿಸಲು ಜನರು ಪರದಾಡುತ್ತಿದ್ದಾರೆ.
ಈ ನಡುವೆ ಸಂಚಾರ ಪೊಲೀಸರೊಬ್ಬರ ಕೆಲಸ ಟ್ವಿಟರ್ನಲ್ಲಿ ವ್ಯಾಪಕವಾಗಿ ಮೆಚ್ಚುಗೆಗೆ ಪಾತ್ರವಾಗಿದೆ. ಇಂದಿರಾನಗರದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ಚರಂಡಿ ಹಾಗೂ ರಸ್ತೆ ಒಂದೇ ಎಂಬಂತೆ ನೀರು ತುಂಬಿಕೊಂಡಿದೆ. ಕೆಲವೆಡೆ ಚರಂಡಿ ಕಟ್ಟಿಕೊಂಡಿದ್ದರಿಂದ ನೀರು ರಸ್ತೆಯ ಮೇಲೆ ಹರಿದಿದೆ. ಮಳೆ ನೀರು ಚರಂಡಿ ಸೇರದೆ ರಸ್ತೆಯ ಮೇಲೆಯೇ ಹರಿಯುತ್ತಿದ್ದರಿಂದ ಪೊಲೀಸ್ ಸಿಬ್ಬಂದಿಯೊಬ್ಬರು ಕಟ್ಟಿಕೊಂಡಿದ್ದ ಚರಂಡಿಯನ್ನು ಸ್ವಚ್ಛಗೊಳಿಸಿದ್ದಾರೆ.
Hats off to Bangalore police.
— Jayaram Srinivasan (@s_jayaram) 30 April 2018
Heavy rain in Indiranagar. Traffic police clearing drainage with hat tucked in his hand.#bbmp @CPBlr @BlrCityPolice @HALAirportTr @BBMP_MAYOR pic.twitter.com/N3NOJ7jXYY
ವಾರಾಂತ್ಯವರೆಗೂ ಬೆಂಗಳೂರಲ್ಲಿ ಮಳೆ ಮುಂದುವರೆಯುವ ಸಾಧ್ಯತೆ
ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ತಮ್ಮ ಟೋಪಿಯನ್ನು ಕಂಕುಳಲ್ಲಿ ಇರಿಸಿಕೊಂಡ ಪೊಲೀಸ್, ಚರಂಡಿಯಲ್ಲಿನ ಕಸವನ್ನು ತೆಗೆದು ರಸ್ತೆಯ ನೀರು ಚರಂಡಿಗೆ ಸೇರುವಂತೆ ಮಾಡಿದ್ದಾರೆ. ಈ ಘಟನೆಯ ಚಿತ್ರವನ್ನು ಜಯರಾಮ್ ಶ್ರೀನಿವಾಸನ್ ಎಂಬುವವರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ಬೆಂಗಳೂರು ನಗರ ಪೊಲೀಸರು ಸೇರಿದಂತೆ 19ಕ್ಕೂ ಅಧಿಕ ಮಂದಿ ರೀಟ್ವೀಟ್ ಮಾಡಿದ್ದಾರೆ.
ಪೊಲೀಸ್ ಸಿಬ್ಬಂದಿಯನ್ನು ಅಪರೂಪದ ಹೀರೊ ಎಂದು ಕೆಲವರು ಶ್ಲಾಘಿಸಿದ್ದಾರೆ. ಕಸದಿಂದ ತುಂಬಿಕೊಂಡಿರುವ ಚರಂಡಿಗಳನ್ನು ಸ್ವಚ್ಛಗೊಳಿಸದ ಸರ್ಕಾರ ಏನು ಮಾಡುತ್ತಿದೆ ಎಂದು ಕೆಲವರು ಬಿಬಿಎಂಪಿ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.