ಬೆಂಗಳೂರಿನಲ್ಲಿ ಡ್ರೋನ್, ಬಲೂನ್ ಹಾರಾಟಕ್ಕೆ ನಿರ್ಬಂಧ: ಯಾಕೆ ಗೊತ್ತಾ?
ಬೆಂಗಳೂರು,
ಜನವರಿ.01:
ಸಿಲಿಕಾನ್
ಸಿಟಿಯಲ್ಲಿ
ಹೊಸ
ವರ್ಷಾಚರಣೆ
ಸಂಭ್ರಮ
ಜೋರಾಗಿದೆ.
2020ರ
ಗತ್ತು
ಗಮ್ಮತ್ತಿನಲ್ಲಿ
ತೇಲುತ್ತಿದ್ದ
ಬೆಂಗಳೂರಿನ
ಮಂದಿ
ಪೊಲೀಸರು
ಖಡಕ್
ಎಚ್ಚರಿಕೆ
ಸಂದೇಶವನ್ನು
ರವಾನಿಸಿದ್ದಾರೆ.
ಇನ್ನು,
ಎರಡು
ದಿನ
ನಗರದಲ್ಲಿ
ಡ್ರೋನ್,
ಬಲೂನ್
ಹಾರಾಟಕ್ಕೆ
ನಿರ್ಬಂಧ
ವಿಧಿಸಿದ್ದಾರೆ.
ಬೆಂಗಳೂರಿನಲ್ಲಿ
ನಗರ
ಪೊಲೀಸ್
ಆಯುಕ್ತ
ಭಾಸ್ಕರ್
ರಾವ್
ಈ
ಬಗ್ಗೆ
ಆದೇಶ
ಹೊರಡಿಸಿದ್ದಾರೆ.
ಜನವರಿ.02
ಹಾಗೂ
03ರಂದು
ನಗರದಲ್ಲಿ
ಡ್ರೋನ್
ಹಾಗೂ
ಬಲೂನ್
ಗಳ
ಹಾರಾಟವನ್ನು
ನಿಷೇಧಿಸಲಾಗಿದೆ.
ಮತ್ತೆ
ಚರ್ಚೆಗೆ
ಬಂದ
ಸಿದ್ದಗಂಗಾ
ಶ್ರೀಗಳಿಗೆ
ಭಾರತರತ್ನ
ಪ್ರಶಸ್ತಿ
ವಿಚಾರ
ರಾಜ್ಯದಲ್ಲಿ
ಬಿಜೆಪಿ
ಸರ್ಕಾರ
ಅಧಿಕಾರಕ್ಕೆ
ಬಂದ
ಬಳಿಕ
ಮೊದಲ
ಬಾರಿ
ರಾಜ್ಯಕ್ಕೆ
ಪ್ರಧಾನಮಂತ್ರಿ
ನರೇಂದ್ರ
ಮೋದಿ
ಭೇಟಿ
ನೀಡಲಿದ್ದಾರೆ.
ಎರಡು
ದಿನ
ರಾಜ್ಯ
ಪ್ರವಾಸ
ಕೈಗೊಂಡಿರುವ
ಪ್ರಧಾನಮಂತ್ರಿ
ತುಮಕೂರಿಗೆ
ತೆರಳಿ
ಸಿದ್ದಗಂಗಾ
ಮಠದ
ಶಿವಕುಮಾರ್
ಸ್ವಾಮೀಜಿಗಳ
ಗದ್ದುಗೆ
ದರ್ಶನ
ಪಡೆಯಲಿದ್ದಾರೆ.
ಬೆಂಗಳೂರಿನಲ್ಲಿ
ಎರಡು
ದಿನ
ನಿಷೇಧಾಜ್ಞೆ:
ದೇಶಾದ್ಯಂತ
ಕೇಂದ್ರ
ಸರ್ಕಾರ
ಜಾರಿಗೊಳಿಸಿರುವ
ಪೌರತ್ವ
ತಿದ್ದುಪಡಿ
ಕಾಯ್ದೆ
ವಿರುದ್ಧ
ಪ್ರತಿಭಟನೆ
ತೀವ್ರಗೊಂಡಿದೆ.
ಸಿಲಿಕಾನ್
ಸಿಟಿಯಲ್ಲಿ
ಕೇಂದ್ರದ
ವಿರುದ್ಧ
ವ್ಯಾಪಕ
ಪ್ರತಿಭಟನೆಗಳು
ನಡೆದಿವೆ.
ಇದರ
ಮಧ್ಯೆ
ಪ್ರಧಾನಮಂತ್ರಿ
ನರೇಂದ್ರ
ಮೋದಿ
ರಾಜ್ಯ
ಪ್ರವಾಸ
ಕೈಗೊಂಡಿದ್ದಾರೆ.
ಈ
ಹಿನ್ನೆೆಲೆ
ಎರಡು
ದಿನಗಳ
ಕಾಲ
ಬೆಂಗಳೂರಿನಲ್ಲಿ
144
ಕಾಯ್ದೆ
ಅಡಿ
ನಿಷೇಧಾಜ್ಞೆ
ಹೊರಡಿಸಲಾಗಿದೆ.
ನಗರದಲ್ಲಿ
ಡ್ರೋನ್
ಹಾರಿ
ಬಿಡದಂತೆ
ಮಾಲೀಕರಿಗೆ
ಸೂಚಿಸಲಾಗಿದೆ.
ಜೊತೆಗೆ
ಬಲೂನ್
ಗಳನ್ನು
ಹಾರಿಸದಂತೆ
ನಗರ
ಪೊಲೀಸ್
ಆಯುಕ್ತರಾದ
ಭಾಸ್ಕರ್
ರಾವ್
ಖಡಕ್
ಆಗಿ
ಆದೇಶಿಸಿದ್ದಾರೆ.