ಗಿನ್ನಿಸ್ ದಾಖಲೆ ಮುರಿಯುವುದೆ ಯೋಧರ ಬೆಲ್ಟ್ ಬಕ್ಕಲ್?
ಬೆಂಗಳೂರು, ಡಿಸೆಂಬರ್ 10 : ದಾಖಲೆಗಳು ಇರುವುದೇ ಮುರಿಯುವುದಕ್ಕಾಗಿ, ಹಾಗೆ ಮುರಿಯುವ ದಾಖಲೆಗಳನ್ನು, ಹೊಸದಾಗಿ ನಿರ್ಮಾಣವಾಗುವುದನ್ನು ನೋಡುವುದೆಂದರೆ ಅದೊಂದು ಐತಿಹಾಸಿಕ ಕ್ಷಣದಲ್ಲಿ ಸಾಕ್ಷಿಯಾದಂತೆ. ಇಂತಹ ಕ್ಷಣವೊಂದು ನವಯುಗ್ ಮಿಲಿಟರಿಯ ಇ-ಕಾಮರ್ಸ್ ಪೋರ್ಟಲ್ ಉದ್ಘಾಟನೆಯ ವೇಳೆ ಲಭಿಸಿದೆ.
ಹೆಬ್ಬಾಳದ ಮಾನ್ಯತಾ ಟೆಕ್ಪಾರ್ಕ್ ಸಮೀಪದ ವೈಟ್ ಆರ್ಚರ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ಗುರುವಾರ, ಡಿ.10ರಂದು ನಡೆದ ಎಂಎಸ್ಎಂಇ ಡಿಫೆನ್ಸ್ ಎಕ್ಸ್ಪೊ-2015ರಲ್ಲಿ ಬೃಹದಾಕಾರದ ಟೋಪಿ, ಗಜಗಾತ್ರದ ಏಪ್ರನ್ (ಅಡುಗೆ ಶುಚಿಯಾಗಿರಲು ಧರಿಸುವ ಉಡುಗೆ, ಹೊರವಸ್ತ್ರ), ಬೆಲ್ಟ್ನ ಬೃಹದಾಕಾರದ ಬಕಲ್, ಭಾರೀ ಆಕಾರದ ಮೊಸಾಯಿಕ್ ಈ ನಾಲ್ಕು ವಿಭಾಗಗಳಲ್ಲಿ ಗಿನ್ನೆಸ್ ದಾಖಲೆ ಪ್ರಯತ್ನಗಳು ನಡೆದವು.
ಗಿನ್ನೆಸ್ ದಾಖಲೆಯ ಪ್ರಯತ್ನಗಳೆಂದರೆ ಅಲ್ಲೊಂದು ದೊಡ್ಡ ಕೌತುಕವೇ ನೆಲೆಸಿರುತ್ತದೆ. ಅದಕ್ಕೆ ಸಾಕ್ಷಿಯಾಗಲು ನೂರಾರು ಕಣ್ಣುಗಳು ಎದುರು ನೋಡುತ್ತಿರುತ್ತವೆ. ಈ ಪ್ರಯತ್ನ ಡಿಫೆನ್ಸ್ ಎಕ್ಸ್ಪೋದಲ್ಲೇ ಆಯೋಜನೆಗೊಂಡಿರುವುದು ವಿಶೇಷ.
ದೇಶವನ್ನು ಕಾಯುವ ಯೋಧರಿಗೆ ಗೌರವ ಸೂಚಿಸುವುದಕ್ಕಾಗಿ ಇದನ್ನು ಆಯೋಜಿಸಲಾಗಿತ್ತು ಎನ್ನುತ್ತಾರೆ ಕಾರ್ಯಕ್ರಮಗಳ ಸಂಘಟಕ ನವಯುಗ ಸಂಸ್ಥೆಯ ಪ್ರವರ್ತಕ ನರೇಂದ್ರ ಪಾಲ್ ಸಿಂಗ್. [ವಿಶ್ವದ ಬಲಿಷ್ಠ ಮಿಲಿಟರಿ ಶಕ್ತಿ ಹೊಂದಿರುವ ದೇಶಗಳು]

ಏನಿದೆ ಈ ಇ-ಕಾಮರ್ಸ್ ಪೋರ್ಟಲ್ನಲ್ಲಿ
ಇದೀಗ ಸಂಸ್ಥೆಯು ಇ-ಕಾಮರ್ಸ್ ಪೋರ್ಟಲ್ ಆರಂಭಿಸುತ್ತಿದ್ದು, ಇನ್ನು ಮುಂದೆ ಒಂದೇ ಒಂದು ಕ್ಲಿಕ್ನಲ್ಲಿ ಸೈನಿಕರು ಇರುವ ಸ್ಥಳಕ್ಕೆ ಅಗತ್ಯವಾದ ವಸ್ತುಗಳ ಪೂರೈಕೆ ಸಾಧ್ಯವಾಗಲಿದೆ.

ಒಂದೇ ಕ್ಲಿಕ್ನಲ್ಲಿ ಯೋಧರಿಗೆ ಎಲ್ಲ ಸರಕು ಲಭ್ಯ
ಕೇವಲ ಒಂದೇ ಒಂದು ಕ್ಲಿಕ್ನಲ್ಲಿ ಯೋಧರಿಗೆ ಅಗತ್ಯವಿರುವ ಎಲ್ಲಾ ಸರಕುಗಳನ್ನು, ಸೌಲಭ್ಯಗಳನ್ನು ಒದಗಿಸುವ ಜಗತ್ತಿನ ಮೊದಲ ಕಂಪೆನಿ ಎಂಬ ಹೆಗ್ಗಳಕೆಗೆ ನವಯುಗ್ ಮಿಲಿಟರಿ ಸಂಸ್ಥೆ ಪಾತ್ರವಾಗಿದೆ.

ಮರುಭೂಮಿಯಲ್ಲೇ ಇರಲಿ, ಹಿಮಾಲಯದಲ್ಲೇ ಇರಲಿ
ಸೈನಿಕರು ರಾಜಸ್ಥಾನದ ಮರುಭೂಮಿಯಲ್ಲಿರಲಿ, ಕಾಶ್ಮೀರದ ಹಿಮಾಚ್ಛಾದಿತ ಪರ್ವಗಳಲ್ಲಿರಲಿ, ಜಗತ್ತಿನ ಯಾವದೇ ಮೂಲೆಯಲ್ಲಿ ಸೇವೆ ಸಲ್ಲಿಸುತ್ತಿರಲಿ, ಅವರಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ.

1973ರಿಂದಲೇ ಕಾರ್ಯನಿರತ ಕಂಪನಿ
ಭಾರತದ ಯೋಧರು ಎಲ್ಲೇ ಇರಲಿ, ಅವರಿಗೆ ಸಮವಸ್ತ್ರ ಮತ್ತು ಇತರ ಪರಿಕರಗಳನ್ನು ಒದಗಿಸುವ ಕಾರ್ಯವನ್ನು ನವಯುಗ್ ಮಿಲಿಟರಿ ಕಂಪೆನಿ 1973ರಿಂದ ಈ ಕಾರ್ಯದಲ್ಲಿ ತೊಡಗಿದೆ.
-
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ.












Click it and Unblock the Notifications