ಬೆಂಗಳೂರು ಪಿಂಚಣಿದಾರರ ಸ್ವರ್ಗ ಅಲ್ಲ, ನರಕ!
ಬೆಂಗಳೂರು, ಜೂನ್ 14: ರಾಜ್ಯದ ರಾಜಧಾನಿ ಅನೇಕ ದಶಕಗಳಿಂದ ಕಾಪಾಡಿಕೊಂಡು ಬಂದಿದ್ದ ಪಿಂಚಣಿದಾರರ ಸ್ವರ್ಗ ಎಂಬ ಅನ್ವರ್ಥನಾಮಕ್ಕೆ ಧಕ್ಕೆಯೊದಗಿದೆ. ಅದೇ ರಾಷ್ಟ್ರದ ರಾಜಧಾನಿ ದಿಲ್ಲಿಗೆ ಈಗ ಈ ಸ್ಥಾನಮಾನ ಪ್ರಾಪ್ತಿಯಾಗಿದೆ. ಬೆಂಗಳೂರು ಪಿಂಚಣಿದಾರರಿಗೆ ಈಗ ನರಕಸದೃಶವಾಗಿದೆ. ಅದೇ ದೆಹಲಿ ಪಿಂಚಣಿದಾರರಿಗೆ ಸ್ವರ್ಗ ಸಮವಾಗಿದೆ.
ಏಷ್ಯಾದ ಮಾಹಿತಿ ತಂತ್ರಜ್ಞಾನ ರಾಜಧಾನಿ ಬೆಂಗಳೂರು ಇದೀಗ ನಾಡಿನ ಹಿರಿಯ ಚೇತನಗಳಿಗೆ ಅತ್ಯಂತ ಕೆಟ್ಟ ಸ್ಥಳವಾಗಿ ಪರಿಣಮಿಸಿದೆ. ಸರಕಾರೇತರ Help Age India ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ಈ ಅಂಶ ಬಯಲಾಗಿದೆ. ಬೆಂಗಳೂರಿನಲ್ಲಿ ವಯಸ್ಸಾದವರ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ದೌರ್ಜನ್ಯಗಳು ನಡೆಯುತ್ತಿವೆ. ದೌರ್ಭಾಗ್ಯವೆಂದರೆ ಇಂತಹ ದೌರ್ಜನ್ಯವೆಸಗುತ್ತಿರುವವರು ಬೇರೆ ಯಾರೋ ಅಲ್ಲ. ಸ್ವಂತ ಮಕ್ಕಳು ಮತ್ತು ಸೊಸೆಯಂದಿರು.
Help Age India survey ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕೊತಾ, ಚೆನ್ನೈ, ಹೈದರಾಬಾದ್ ಮೆಟ್ರೋ ನಗರಗಳಲ್ಲಿ ಕೈಗೊಳ್ಳಲಾಗಿತ್ತು. ಸಮೀಕ್ಷೆಗಾಗಿ ಸುಮಾರು 1,200 ಹಿರಿಯರನ್ನು ಸಂಪರ್ಕಿಸಲಾಗಿದೆ. (ಊರು ಹೋಗು, ಕಾಡು ಬಾ ಅಂತಿದೆ)

ಬೆಂಗಳೂರಿನಲ್ಲಿ ಸಮೀಕ್ಷೆಗೆ ಉತ್ತರಿಸಿದವರ ಪೈಕಿ ಶೇ. 75ರಷ್ಟು ವೃದ್ಧರು, 'ಸ್ವಂತ ಮಕ್ಕಳು ಮತ್ತು ಸೊಸೆಯಂದಿರೇ ತಮ್ಮನ್ನು ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದಾರೆ' ಎಂದಿದ್ದಾರೆ. ಅದೇ ದಿಲ್ಲಿಯಲ್ಲಿ ಶೇ. 22ರಷ್ಟು ಮಂದಿ ಮಕ್ಕಳು, ಸೊಸೆಯಂದಿರಿಂದ ಕಷ್ಟ ಅನುಭವಿಸುತ್ತಿದ್ದಾರೆ. ಸಮೀಕ್ಷೆಯ ಪ್ರಕಾರ ಶೇ. 59ರಷ್ಟು ಮಂದಿ ಮಕ್ಕಳು ಮತ್ತು ಶೇ. 61ರಷ್ಟು ಮಂದಿ ಸೊಸೊಯಂದಿರು ಹಿರಿಯ ಪುರುಷರು ಮತ್ತು ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ.
ಶೇ. 41ರಷ್ಟಿ ಮಂದಿ ವೃದ್ಧರು ಬೈಗುಳ ತಿಂದರೆ ಶೇ. 33 ಮಂದಿಯನ್ನು ಅಗೌರವದಿಂದ ನಡೆಸಿಕೊಳ್ಳಲಾಗುತ್ತಿದೆ. ಇನ್ನು, ಶೇ. 29ರಷ್ಟು ಮಂದಿ ತಿರಸ್ಕಾರಕ್ಕೆ ಒಳಗಾಗುತ್ತಿದ್ದಾರೆ. ಆತಂಕದ ವಿಷಯವೆಂದರೆ ಶೇ. 41ರಷ್ಟು ಮಂದಿ ತಮ್ಮ ಮನೆತನದ ಗೌರವ ಹಾಳಾಗುವುದು ಬೇಡವೆಂದು ತಮಗಾಗುತ್ತಿರುವ ನೋವನ್ನು ಮೌನವಾಗಿ ಸಹಿಸಿಕೊಳ್ಳುತ್ತಿದ್ದು, ಅದನ್ನು ಹೊಸಲಿನಾಚೆಗೆ ಹೋಗಲು ಬಿಟ್ಟಿಲ್ಲ. ಆದರೆ ಆಪ್ತರ ಮುಂದೆ ತಮ್ಮ ದುಃಖ ತೋಡಿಕೊಂಡು ಸಹಿಸಿಕೊಳ್ಳುತ್ತಾರೆ.
ಇನ್ನು, ಶೇ. 41ರಷ್ಟು ಮಂದಿ ತಮಗಾಗಿ ಸಹಾಯವಾಣಿಗಳು ಇವೆ ಎಂಬುದನ್ನು ಅರಿತಿದ್ದಾರೆ. ಆದರೆ ಕೇವಲ ಶೇ. 12ರಷ್ಟು ಮಂದಿ ಮಾತ್ರ ಅದರ ನೆರವನ್ನು ಪಡೆದಿದ್ದಾರೆ. ಬೆಂಗಳೂರಿನ ಐದೂ ಪೊಲೀಸ್ ಉಪ ವಲಯಗಳಲ್ಲಿ ಕಷ್ಟದಲ್ಲಿರುವ ಹಿರಿಯ ಚೇತನಗಳಿಗೆ ನೆರವಾಗಲು ಸಹಾಯವಾಣಿಗಳನ್ನು ತೆರೆಯುವ ಬಗ್ಗೆ ನಗರ ಪೊಲೀಸರು ಆಲೋಚಿಸುತ್ತಿದ್ದಾರೆ.

-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications