ಬ್ರಹ್ಮಣಿ ಧರಿಸಿದ್ದ ಕಣ್ಣು ಕೋರೈಸುವ ವಜ್ರಾಭರಣದ ಬೆಲೆ?
ಬೆಂಗಳೂರು, ನವೆಂಬರ್ 17: 'ಒಂದೇ ಕಡೆ ಎಷ್ಟೊಂದು ವಜ್ರಗಳನ್ನು ಎಂದೂ ನೋಡಿಲ್ಲ' ಎಂದು ಹಿರಿಯ ಅಧಿಕಾರಿಯೊಬ್ಬರು ಗಾಲಿ ರೆಡ್ಡಿ ಮಗಳ ಮದುವೆ ವೈಭವ ಕಂಡು ಉದ್ಗರಿಸಿದ್ದಾರೆ. ಬೆಂಗಳೂರಿನ ಐಷಾರಾಮಿ ಮದುವೆಯ ಲೆಕ್ಕಾಚಾರ ಹಾಗಿರಲಿ, ವಧು ಬ್ರಹ್ಮಿಣಿ ತೊಟ್ಟ ಉಡುಗೆ, ಧರಿಸಿದ್ದ ಆಭರಣಗಳು ಎಲ್ಲರ ಕಣ್ಣರಳುವಂತೆ ಮಾಡಿದ್ದು ಸುಳ್ಳಲ್ಲ.
ದುಂದು ವೆಚ್ಚ, ಅದ್ದೂರಿ ಮದುವೆಗೆ ಕಡಿವಾಣ ಎಂಬ ಮಾತುಗಳನ್ನು ನಾಚಿಸುವಂತೆ ಮೈತುಂಬಾ ಒಡವೆಗಳನ್ನು ಹೇರಿಕೊಂಡು ಬ್ರಹ್ಮಣಿ ಅರಮನೆ ಮೈದಾನದಲ್ಲಿ ಕುಬೇರನ ಪುತ್ರಿಯಂತೆ ಕಾಣುತ್ತಿದ್ದಳು. [ಹೊಗಳಿಕೆ ಟೀಕೆ ಅಪಹಾಸ್ಯಕ್ಕೀಡಾದ ರೆಡ್ಡಿ ಮಗಳ ಮದುವೆ!]

ಮದುವೆ ಕರೆಯೋಲೆ ಖರ್ಚು ಲಕ್ಷಗಳಲ್ಲಿ ಮುಗಿದರೆ, ಮದುವೆ ಸಂಪೂರ್ಣ ಖರ್ಚು ವೆಚ್ಚ ಸುಮಾರು 500 ಕೋಟಿ ರು ಮೀರಿದೆ ಎಂಬ ಅಂದಾಜು ಲೆಕ್ಕ ಸಿಕ್ಕಿದೆ. ಈ ನಡುವೆ ಮದುವೆ ದಿನದಂದು ಕೆಂಪು ಬಣ್ಣದ ಲೆಹಂಗಾ ತೊಟ್ಟು ಸಿಕ್ಕಾಪಟ್ಟೆ ಆಭರಣಗಳನ್ನು ಧರಿಸಿದ್ದ ಬ್ರಹ್ಮಣಿ ಮೈಮೇಲೆ ಇದ್ದ ಒಡವೆಗಳ ಮೌಲ್ಯ ಸುಮಾರು 90 ಕೋಟಿ ರು ಎನ್ನಲಾಗಿದೆ. [ಗಾಲಿ ರೆಡ್ಡಿ ಮಗಳ ಮದ್ವೆಗೆ ಪರಂ ಎಂಟ್ರಿ, ಪೊಲೀಸರು ಗರಂ]
ಮದುವಣಗಿತ್ತಿಯ ಮನೆಯಲ್ಲಿ ಸುಮಾರು 2 ಡಜನ್ ವಜ್ರದ ಬಳೆಗಳು, 6 ವಜ್ರಖಚಿತ ನೆಕ್ಲೇಸುಗಳು, ಉಂಗುರ, ಒಲೆ, ಡಾಬು ಹಾಗೂ ವಿಶೇಷ ವಿನ್ಯಾಸದ ಸರಗಳು ಕಂಡು ಬಂದಿವೆ.
ಈಗಾಗಲೇ ಗಾಲಿ ರೆಡ್ಡಿ ಮದುವೆ ಮನೆ ಖರ್ಚು ವೆಚ್ಚದ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ದೂರು ಸಲ್ಲಿಕೆಯಾಗಿದೆ. ಈ ನಡುವೆ ತನಿಖಾಧಿಕಾರಿಗಳ ಸಮ್ಮುಖದಲ್ಲೇ ಗೃಹ ಸಚಿವ ಜಿ ಪರಮೇಶ್ವರ ಅವರು ಕರ್ನಾಟಕ ಸರ್ಕಾರದ ಪ್ರತಿನಿಧಿಯಾಗಿ ಮದುವೆ ಮನೆಯಲ್ಲಿ ಉಪಸ್ಥಿತರಿದ್ದದ್ದು ಪೊಲೀಸರೇ ಮುಜುಗರ ತಂದಿದೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications