ಕೇಜ್ರಿವಾಲ್ ಡಾಕ್ಟರ್ ಅಪಾಯಿಂಟ್ಮೆಂಟ್ ಕೇಳಿಲ್ಲವಂತೆ
ಬೆಂಗಳೂರು, ಫೆ.19: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬಹುಕಾಲದಿಂದ ಕೆಮ್ಮಿನ ಬಾಧೆಗೆ ಒಳಗಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಕೇಜ್ರಿವಾಲ್ ಕೆಮ್ಮಿನ ಪ್ರಸಂಗ ಕೇಳಿದ ಪ್ರಧಾನಿ ಮೋದಿ ಅವರು ಬೆಂಗಳೂರಿನ ಡಾ. ನಾಗೇಂದ್ರ ಅವರ ಆಡ್ರೆಸ್ ಕೊಟ್ಟಿರುವುದು ಎಲ್ಲವೂ ನಡೆದಿದೆ. ಅದರೆ, ಇನ್ನೂ ಕೂಡಾ ಕೇಜ್ರಿವಾಲ್ ಅವರು ಅಪಾಯಿಟ್ಮೆಂಟ್ ಬೇಕು ಎಂದು ಕೇಳಿಲ್ಲ ಎಂದು ಡಾ. ನಾಗೇಂದ್ರ ಅವರ ಕ್ಲಿನಿಕ್ ನಿಂದ ತಿಳಿದು ಬಂದಿದೆ.
ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ ಸಿಎಂ ಅರವಿಂದ್ ಅವರಿಗೆ ಸಲಹೆ ನೀಡಿದ್ದರ ಬಗ್ಗೆ ಭಾರಿ ಚರ್ಚೆ ನಡೆದಿದೆ. ಜೊತೆಗೆ ಮೋದಿ ಅವರು ಹೆಸರಿಸಿದ ಬೆಂಗಳೂರಿನ ಡಾಕ್ಟರ್ ಯಾರು? ಏತಕ್ಕೆ ಅದೇ ಡಾಕ್ಟರ್ ಸಂದರ್ಶಿಸಲು ಸೂಚಿಸಿದರು ಎಂಬುದರ ಬಗ್ಗೆ ಕೂಡಾ ಚರ್ಚೆ ಜಾರಿಯಲ್ಲಿದೆ.
ಈ ನಡುವೆ ಡಾ. ನಾಗೇಂದ್ರ ಅವರನ್ನು ಒನ್ ಇಂಡಿಯಾ ಪ್ರತಿನಿಧಿ ಸಂಪರ್ಕಿಸಿದಾಗ, ಅರವಿಂದ್ ಕೇಜ್ರಿವಾಲ್ ಕಡೆಯಿಂದ ಅಪಾಯಿಂಟ್ಮೆಂಟ್ ಕೋರಿ ಯಾವುದೇ ಮನವಿ ಬಂದಿಲ್ಲ. ಮನವಿ ಬಂದರೆ ಎಲ್ಲಾ ರೋಗಿಗಳನ್ನು ಕಾಣುವಂತೆ ಅವರನ್ನು ಕಂಡು ಅವರ ಸಮಸ್ಯೆ ಬಗೆಹರಿಸಲು ಯತ್ನಿಸುತ್ತೇನೆ. ಬಹುಕಾಲದಿಂದ ಕೆಮ್ಮಿನ ಸಮಸ್ಯೆ ಇದ್ದರೆ ಬರೀ ಮದ್ದಿನಿಂದ ಪ್ರಯೋಜನವಾಗುವುದಿಲ್ಲ. ಅದಕ್ಕೆ ದೈಹಿಕ ಕಸರತ್ತು, ಧ್ಯಾನ ಎಲ್ಲವೂ ಸೇರಿಕೊಳ್ಳಬೇಕು ಎಂದು ಡಾ. ನಾಗೇಂದ್ರ ಹೇಳಿದ್ದಾರೆ.

ಕೇಜ್ರಿವಾಲ್ ಕೆಮ್ಮು ಫೇಮಸ್: ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ತಂಪು ಹವೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಮಫ್ಲರ್ ಬಳಸುವುದು ಸಕತ್ ಫೇಮಸ್ ಆಗಿದೆ. ಜೊತೆಗೆ ಅವರ ಕೆಮ್ಮಿನ ಬಗ್ಗೆ ಅನೇಕ ಕಡೆ ಸೀರಿಯಸ್ ಆಗಿ ಚರ್ಚೆಗಳು ನಡೆದಿವೆ.
ಡಾ. ನಾಗೇಂದ್ರ ಬಗ್ಗೆ ಮೋದಿ ಮೆಚ್ಚುಗೆ: ಈ ಹಿಂದೆ ಸಮಾರಂಭವೊಂದರಲ್ಲಿ ಮೋದಿ ಅವರಿಗೆ ಡಾ.ನಾಗೇಂದ್ರ ಅವರ ಪರಿಚಯವಾಗಿದೆ. ನಾಗೇಂದ್ರ ಅವರ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥೆಯಲ್ಲಿ ರೋಗಿಗಳ ಆರೈಕೆ ಮಾಡುವ ವಿಧಾನಕ್ಕೆ ಪ್ರಧಾನಿ ಮೋದಿ ಅವರು ಮಾರು ಹೋಗಿದ್ದರು. ನಾಯಿ ಕೆಮ್ಮು, ದೀರ್ಘಕಾಲಿಕ ಆಸ್ತಮಾ, ಒಣ ಕೆಮ್ಮು, ಸ್ಮೋಕರ್ಸ್ ಕೆಮ್ಮು ಹೀಗೆ ವಿವಿಧ ಕೆಮ್ಮು ರೋಗಕ್ಕೆ ಆರೋಗ್ಯ ಕೇಂದ್ರದಲ್ಲಿ ನೀಡುವ ಚಿಕಿತ್ಸೆಯನ್ನು ಮೋದಿ ಕಂಡಿದ್ದರು. ಹೀಗಾಗಿ ಅರವಿಂದ್ ಅವರಿಗೆ ಡಾ. ನಾಗೇಂದ್ರರನ್ನು ಸಂಪರ್ಕಿಸಲು ಸಲಹೆ ನೀಡಿದ್ದಾರೆ.
ಡಾ. ನಾಗೇಂದ್ರ ಬಗ್ಗೆ: ಡಾ. ಎಚ್ ಆರ್ ನಾಗೇಂದ್ರ ಅವರು ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥೆಯ ಡೀಮ್ಡ್ ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿದ್ದಾರೆ.
ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದರೂ ವಿವೇಕಾನಂದ ಕೇಂದ್ರ ಸೇರಿದ ಮೇಲೆ ಯೋಗ, ಧ್ಯಾನ, ಸಂಶೋಧನೆಯಲ್ಲಿ ತೊಡಗಿಕೊಂಡರು. ಯೋಗ ಚಿಕಿತ್ಸೆಗಾಗಿ ಇವರಿಗೆ ಅನೇಕ ಪ್ರಶಸ್ತಿಗಳು ಸಂದಿವೆ.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು?












Click it and Unblock the Notifications