ಸಾರಿಗೆ ಮುಷ್ಕರ: ಆಟೋ ಚಾಲಕರು ಹೇಳುವುದೇನು?
ಬೆಂಗಳೂರು, ಏ. 29: "ಎಲ್ಲಾರೂ ಬಂದ್ ಮಾಡ್ತಾರಂತೆ, ಕೆಎಸ್ ಆರ್ ಟಿಸಿ, ಬಿಎಂಟಿಸಿಯವರೂ ಬೆಂಬಲ ಕೊಟ್ಟಿದ್ದಾರೆ, ನಮ್ಮವರೂ ಮುಷ್ಕರ ಮಾಡಿ ಅಂತ ಹೇಳಿದ್ದಾರೆ. ಹಾಗಾಗಿ ಮಾಡ್ತಾ ಇದ್ದೇವೆ" ಇದು ಸೌತ್ ಎಂಡ್ ಸರ್ಕಲ್ ಬಳಿ ಬಾಡಿಗೆಗಾಗಿ ಕಾಯುತ್ತಿದ್ದ ಸಾಮಾನ್ಯ ಆಟೋ ಚಾಲಕನ ಪ್ರಾಮಾಣಿಕ ಹೇಳಿಕೆ.
ಹೌದು...ಗುರುವಾರ ಯಾಕೆ ಮುಷ್ಕರಕ್ಕೆ ಕರೆ ನೀಡಿದ್ದಾರೆ ಎಂಬುದು ನೂರರಲ್ಲಿ 99 ಆಟೋ ಚಾಲಕರಿಗೆ ಗೊತ್ತಿಲ್ಲ. ಕೇಂದ್ರ ಸರ್ಕಾರದ ಹೊಸ ಕಾನೂನು ಜಾರಿ ವಿರೋಧಿಸಿ ಬಂದ್ ಮಾಡಲಾಗುತ್ತಿದೆ ಎಂದು ಅವರಿಗೆ ತಿಳಿಸುವ ಗೋಜಿಗೆ ಯಾರೂ ಹೋಗಿಲ್ಲ.[ಮುಷ್ಕರಕ್ಕೆ ಬೆಂಬಲ ನೀಡಿದ ಸಂಘಟನೆಗಳು ಯಾವವು?]

ಗುರುವಾರದ ಮುಷ್ಕರ ಇಟ್ಟುಕೊಂಡು ಆಟೋ ಚಾಲಕರನ್ನು ಮಾತನಾಡಿಸಿದ ಒನ್ಇಂಡಿಯಾಕ್ಕೆ ಸಿಕ್ಕಿದ್ದು ಬಗೆಬಗೆಯ ಉತ್ತರ. ಅವುಗಳ ಕೆಲ ಸ್ಯಾಂಪಲ್ ಇಲ್ಲಿದೆ. ಅವರದ್ದೇ ಮಾತಿನಲ್ಲಿ ಹೇಳಿಕೆಗಳನ್ನು ಹಾಗೇ ಇಡಲಾಗಿದೆ.
* ಬಂದ್, ಹೌದು ಸ್ವಾಮಿ ನಮಗೇನೂ ಗೊತ್ತಿಲ್ಲ. ಯುನಿಯನ್ ಅವರು ಗಾಡಿ ಓಡಿಸಬೇಡ ಎಂದು ಹೇಳಿದ್ದಾರೆ. ಹಾಗಾಗಿ ನಾಳೆ ಗಾಡಿ ತೆಗೆಯಲ್ಲ. ನಿಮಗೆ ಗೊತ್ತಲ್ಲ ಎದುರಿನ ಗಾಜು ಪುಡಿಯಾದರೆ ಎಷ್ಟು ದಂಡ ಕಟ್ಟಬೇಕು ಅಂತ!(ನಾಗರಾಜ್)

* ನಮ್ಮಲ್ಲಿ ಎಲ್ಲರೂ ಬಂದ್ ಗೆ ಸಪೋರ್ಟ್ ಇಲ್ಲಾ, ಕೆಎಸ್ ಆರ್ ಟಿಸಿ ಯವರು ಯೂನಿಯನ್ ಗೆ ಆಮಿಷ ತೋರಿಸಿದ್ದಾರೆ. ಅವರು ಹೇಳಿದ್ರೂ ಅಂಥ ಬಂದ್ ಮಾಡಿಕೊಂಡು ಕೂತ್ರೆ ನಮ್ಮ ಹೊಟ್ಟೆ ಪಾಡು ಏನು? (ಇರ್ಫಾನ್)[ಜಾರಿಯಾಗಬೇಕಾದ ಕಾನೂನು ಯಾವುದು]
* ಪೊಲೀಸರು ಹೆಚ್ಚಿಗೆ ದುಡ್ಡು ಕೀಳ್ತಾರೆ, ಹಳೆ ಗಾಡಿ ಗುಜರಿಗೆ ಹಾಕಬೇಕು ಅಂಥ ಹೇಳ್ತಿದ್ದಾರಲ್ಲಾ ಅದಕ್ಕೆ ಮಷ್ಕರ ಮಾಡ್ತಾ ಇರೋದು. ಮುಷ್ಕರ ಆದ್ರೆ ನಮಗೆ ನಷ್ಟವೇ ಆದರೆ ಒಳ್ಳೆದಾತ್ತದಲ್ಲಾ!(ನಿಂಗೇ ಗೌಡ)
* ಇನ್ನು ನಿರ್ಧಾರ ಮಾಡಿಲ್ಲಾ. ಮೊನ್ನೆ ನಮ್ಮವರ ಆಟೋ ಹಿಂಬದಿ ಮೇಲೆ ಬಂದ್ ಎಂದು ಪಾಂಪ್ಲೆಟ್ ಕಂಡಾಗಲೇ ವಿಷಯ ಗೊತ್ತಾಗಿದ್ದು. ನಾಳೆ ಬಂದ್ ಮಾಡಿದ್ರೇ ಮಾಡ್ಕಳ್ಲಿ, ಇವತ್ತೇ ನೈಟ್ ಡಬಲ್ ಡ್ಯೂಟಿ ಮಾಡ್ತೇನೆ (ರಿಯಾಜ್)

* ಬೆಳಗ್ಗೆಯಿಂದ ಒಂದು ಬೋಣಿನೂ ಆಗಿಲ್ಲ. ಬಂದ್ ಬಗ್ಗೆ ಕೇಳೋಕೆ ಬಂದ್ರು, ನಮ್ಮ ಪರಿಸ್ಥಿತಿ ನಮಗಾಗಿದೆ. ಯಾರ್ ಏನಾದ್ರೂ ಮಾಡ್ಲಿರೀ ನಮಗೆ ಒಂದು ದಿನದ ದುಡಿಮೆ ಪುಗ್ಸಟೆ ಕೋಡ್ತಾರಾ?(ದೇವಯ್ಯ)
ಪ್ರತಿಯೊಬ್ಬರ ಬಳಿಯೂ ಯಾಕಾಗಿ ಮುಷ್ಕರ ಮಾಡ್ತಿದ್ದಾರೆ? ಕಾನೂನು ಮಂಡನೆಗೆ ಕಾರಣವೇನು? ಎಂಬ ಹಿನ್ನೆಲೆ-ಮುನ್ನೆಲೆಯನ್ನು ತಿಳಿಹೇಳಿ ಬರುವಾಗ ಉಸ್ಸಪ್ಪಾ ಎಂಬ ಸರದಿ ನಮ್ಮದಾಗಿತ್ತು.
ಆಟೋಗಳ ಹಿಂದಿನ ಬೋರ್ಡ್ ನಲ್ಲಿ ಏನಿದೆ?
ಕೇಂದ್ರ ಸರ್ಕಾರದ ಸಾರಿಗೆ ಮತ್ತು ಸುರಕ್ಷತಾ ಕಾನೂನು ವಿರೋಧಿಸಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ಮತ್ತಷ್ಟು ಬೇಡಿಕೆಗಳು ಸೇರಿಕೊಂಡಿವೆ. ಕಾನೂನು ಬಾಹಿರ ವಿದೇಶಿ ಟ್ಯಾಕ್ಸಿ ಕಂಪನಿಗಳನ್ನು ನಿಯಂತ್ರಣ ಮಾಡಬೇಕು, ರಾಜೀವ್ ಗಾಂಧಿ ವಸತಿ ಯೋಜನೆಯಡಿ ಆಟೋ ಚಾಲಕರಿಗೆ ಮನೆ ನೀಡಬೇಕು ಎಂದು ಆಗ್ರಹಿಸಲಾಗಿದೆ. ಈ ಬೇಡಿಕೆಗಳುಳ್ಳ ಪಟ್ಟಿಯನ್ನು ಆಟೋರಿಕ್ಷಾ ಚಾಲಕರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ಬಿಡುಗಡೆ ಮಾಡಿದೆ.
-
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply












Click it and Unblock the Notifications