ಟಿಕೆಟ್ ಕೊಡಲಿಲ್ಲ, ಆದರೂ ಲಿಂಬಾವಳಿ ಸ್ಟಾರ್ ಪ್ರಚಾರಕ!
ಬೆಂಗಳೂರು: ಮತದಾನಕ್ಕೆ ಕೌಂಟ್ಡೌನ್ ಶುರುವಾಗುತ್ತಿದ್ದಂತೆ ಅಭ್ಯರ್ಥಿಗಳ ಎದೆಬಡಿತ ಏರುತ್ತಿದೆ. ಬಿಜೆಪಿ ಈ ಬಾರಿ ಗುಜರಾತ್ ಮಾಡೆಲ್ ಜಾರಿ ಮಾಡಿದ್ದರಿಂದ ಕರ್ನಾಟಕ ರಣಕಣ ರಂಗೇರಿದೆ. ಗುಜರಾತ್ ಮಾಡೆಲ್ ಹಿನ್ನೆಲೆ ಟಿಕೆಟ್ ಪಡೆಯದ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ತೆಗೆದುಕೊಂಡಿರುವ ಆ ಒಂದು ತೀರ್ಮಾನ ಸಂಚಲನ ಸೃಷ್ಟಿಸಿದೆ.
ಸತತ 3 ಬಾರಿ ಮಹದೇವಪುರ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿರುವ ಅರವಿಂದ ಲಿಂಬಾವಳಿ ಹುಟ್ಟೂರು ಬಾಗಲಕೋಟೆ. ಅರವಿಂದ ಲಿಂಬಾವಳಿ ಆರಂಭದಲ್ಲಿ ಹೋರಾಟಗಳ ಮೂಲಕವೇ ರಾಜಕೀಯಕ್ಕೆ ಹತ್ತಿರವಾಗಿದ್ದವರು. ಆರ್ಎಸ್ಎಸ್ ಸೇರ್ಪಡೆ ಲಿಂಬಾವಳಿ ಅವರ ಜೀವನದಲ್ಲಿ ತಿರುವು ನೀಡಿತ್ತು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದ ಲಿಂಬಾವಳಿ ಅವರಿಗೆ ಟಿಕೆಟ್ ತಪ್ಪಿದ್ದು ಶಾಕ್ ನೀಡಿತ್ತು. ಆದರೂ ಲಿಂಬಾವಳಿ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ ಬಿಜೆಪಿ ಹೈಕಮಾಂಡ್.

ಸ್ಟಾರ್ ಪ್ರಚಾರಕರ ಪಟ್ಟ ನೀಡಿದ್ದೇಕೆ?
ಅರವಿಂದ ಲಿಂಬಾವಳಿಗೆ ಟಿಕೆಟ್ ಮಿಸ್ ಆಗುತ್ತಿದ್ದಂತೆ ಭೋವಿ ಸಮುದಾಯ ಆಕ್ರೋಶ ಹೊರಹಾಕಿತ್ತು. ಇದು ಬಿಜೆಪಿ ವರಿಷ್ಠರಿಗೂ ಸಂಕಷ್ಟದ ಮುನ್ಸೂಚನೆ ನೀಡಿತ್ತು. ಆದರೆ ಮಹದೇವಪುರ ಕ್ಷೇತ್ರದಲ್ಲಿ ಪರಿಸ್ಥಿತಿಯನ್ನ ಸೂಕ್ಷ್ಮವಾಗಿ ನಿಭಾಯಿಸಿದ ಬಿಜೆಪಿ ಹೈಕಮಾಂಡ್, ಲಿಂಬಾವಳಿ ಅವರ ಪತ್ನಿ ಮಂಜುಳಾ ಅರವಿಂದ ಲಿಂಬಾವಳಿ ಅವರಿಗೆ ಟಿಕೆಟ್ ನೀಡಿ ಆಕ್ರೋಶದ ಬೆಂಕಿ ತಣಿಸಿತ್ತು. ಆದರೆ ಮತ್ತೊಂದು ಅಚ್ಚರಿಯ ನಿರ್ಧಾರ ಎಂಬಂತೆ ಟಿಕೆಟ್ ನೀಡದಿದ್ದರು ಕೂಡ ಅರವಿಂದ ಲಿಂಬಾವಳಿಗೆ ಸ್ಟಾರ್ ಪ್ರಚಾರಕರ ಪಟ್ಟ ನೀಡಲಾಗಿದೆ. ಈ ಬಗ್ಗೆ ಒಂದಷ್ಟು ಮಾಹಿತಿ ತಿಳಿಯೋಣ.
ಪಕ್ಷ ಸಂಘಟನೆಯ ಉದ್ದೇಶ
ಮೊದಲೇ ಹೇಳಿದಂತೆ ಆರ್ಎಸ್ಎಸ್ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲದಿಂದ ಬೆಳೆದು ಬಂದಿರುವ ಲಿಂಬಾವಳಿ ಅವರಿಗೆ ಪಕ್ಷ ಸಂಘಟನೆಯ ಶಕ್ತಿ ಇರುತ್ತದೆ. ಟಿಕೆಟ್ ನೀಡದಿದ್ದರೂ ಕುಟುಂಬ ಸದಸ್ಯರಿಗೆ ಟಿಕೆಟ್ ಕೊಟ್ಟು ಲಿಂಬಾವಳಿ ಬಂಡಾಯ ಏಳದಂತೆ ನೋಡಿಕೊಂಡ ವರಿಷ್ಠರು, ಇದೇ ಸಂದರ್ಭದಲ್ಲಿ ಲಿಂಬಾವಳಿಗೆ ಸ್ಟಾರ್ ಪ್ರಚಾರಕರ ಪಟ್ಟ ಕಟ್ಟಿ ಪಕ್ಷ ಸಂಘಟನೆ ಜವಾಬ್ದಾರಿ ನೀಡಿದ್ದಾರೆ. ಬೆಂಗಳೂರಿನ ಪ್ರಮುಖ ಕ್ಷೇತ್ರಗಳಲ್ಲಿ ಒಂದಾದ ಮಹದೇವಪುರ ಕ್ಷೇತ್ರವನ್ನು ಬಿಜೆಪಿ ಪಕ್ಷದ ಭದ್ರಕೋಟೆ ರೂಪಿಸಿರುವ ಮಾಜಿ ಸಚಿವ ಅರವಿಂದ ಲಿಂಬಾವಳಿ, ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಭೋವಿ ಸಮುದಾಯದ ಮತ ಪಡೆಯಲು?
ಇನ್ನು ಭೋವಿ ಸಮುದಾಯದ ಶಾಸಕರಿಗೆ ಟಿಕೆಟ್ ನೀಡಿಲ್ಲ ಎಂಬ ಆರೋಪದಿಂದ ಮುಕ್ತವಾಗಿ, ಇನ್ನೊಂದು ಕಡೆ ಇದೇ ಸಮಯದಲ್ಲಿ ಭೋವಿ ಸಮುದಾಯದ ಮತಗಳು ಬಿಜೆಪಿಗೆ ಬೀಳುವಂತೆ ಮಾಡಲು ಬಿಜೆಪಿ ವರಿಷ್ಠರು ಈ ಕ್ರಮ ಕೈಗೊಂಡಿರುವ ಸಾಧ್ಯತೆ ಇದೆ. ಅರವಿಂದ ಲಿಂಬಾವಳಿ ಅವರಿಗೆ ಸ್ಟಾರ್ ಪ್ರಚಾರಕನ ಪಟ್ಟ ನೀಡುವ ಮೂಲಕ ಭೋವಿ ಸಮುದಾಯದ ಮತ ಹೆಚ್ಚಾಗಿರುವ ಕ್ಷೇತ್ರಗಳಲ್ಲಿ ಕ್ಯಾಂಪೇನ್ ಮಾಡಿಸಬಹುದು. ಈ ಮೂಲಕ ತಮ್ಮ ಸಮುದಾಯದ ನಾಯಕನ ಮಾತನ್ನು ಮತದಾರರು ಕೇಳುವಂತೆ ಮಾಡಬಹುದು ಎಂಬ ಪ್ಲ್ಯಾನ್ ಇರಬಹುದು.
ತಪ್ಪು ಸಂದೇಶ ಹೋಗದಂತೆ ತಡೆ!
ಹಾಲಿ ಶಾಸಕರಿಗೆ ಬಿಜೆಪಿ ವರಿಷ್ಠರು ಟಿಕೆಟ್ ನೀಡದೇ ಇರುವ ನಿರ್ಧಾರದಿಂದ ಕಾರ್ಯಕರ್ತರು ಮತ್ತಿತರರಿಗೆ ತಪ್ಪು ಸಂದೇಶ ನೀಡಿದಂತೆ ಆಗುತ್ತದೆ. ಈಗಾಗಲೇ ಬಂಡಾಯದ ಕುಲುಮೆಯಲ್ಲಿ ಬಿಜೆಪಿ ನಾಯಕರು ಪರದಾಡಿದ್ದಾರೆ. ಇದೇ ಕಾರಣಕ್ಕೆ ಅರವಿಂದ ಲಿಂಬಾವಳಿಗೆ ಸ್ಟಾರ್ ಪ್ರಚಾರಕರ ಪಟ್ಟ ನೀಡಿ, ಹೊರಗೆ ತಪ್ಪು ಸಂದೇಶ ಹೋಗದಂತೆ ತಡೆಯುವ ರಣತಂತ್ರ ಬಿಜೆಪಿ ವರಿಷ್ಠರದ್ದಾಗಿರಬಹುದು. ಇದೆಲ್ಲದರ ಜೊತೆಗೆ ಸತತ 3 ಬಾರಿ ಶಾಸಕರಾಗಿ ಹಾಗೂ ಸಚಿವರಾಗಿಯೂ ಕಾರ್ಯನಿರ್ವಹಿಸಿರುವ ಅರವಿಂದ ಲಿಂಬಾವಳಿ ಅವರ ಅನುಭವದ ಲಾಭ ಪಡೆಯುವುದು.

ಹೀಗೆ ವಿವಿಧ ಆಯಾಮದಲ್ಲಿ ರಣತಂತ್ರ ರೂಪಿಸಿ ಬಿಜೆಪಿ ವರಿಷ್ಠರು ಸ್ಟಾರ್ ಪ್ರಚಾರಕರ ಪಟ್ಟಿ ರೆಡಿ ಮಾಡಿದ್ದಾರೆ. ಸದ್ಯ ಬಂಡಾಯದ ಬೆಂಕಿ ತಣ್ಣಗಾಗಿಸಿರುವ ಬಿಜೆಪಿ ಹೈಕಮಾಂಡ್, ಮತದಾನಕ್ಕೂ ಮುನ್ನ ಗೆಲುವಿಗಾಗಿ ಪ್ರಚಾರದ ರಣಬೇಟೆ ಆರಂಭಿಸಿದೆ. ಇದನ್ನೆಲ್ಲಾ ಗಮನಿಸುತ್ತಿರುವ ಮತದಾರ ಪ್ರಭು ಯಾವ ರೀತಿ ಉತ್ತರ ನೀಡುತ್ತಾನೆ ಎಂಬುದನ್ನ ಕಾದು ನೋಡಬೇಕು. ಮೇ 10ರಂದು ವಿಧಾನಸಭಾ ಚುನಾವಣೆ ಮತದಾನ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications