ನ.25ಕ್ಕೆ ಅಂಕಿತ ಪ್ರಕಾಶನದ 3 ಪುಸ್ತಕ ಬಿಡುಗಡೆ ಮಾಡಲಿದ್ದಾರೆ ನಟ ಯಶ್
ಬೆಂಗಳೂರು, ನವೆಂಬರ್ 20 : ಇದೇ ತಿಂಗಳ 25ನೇ ತಾರೀಕು ಅಂಕಿತ ಪ್ರಕಾಶನದ ಮೂರು ಪುಸ್ತಕಗಳು ಬಿಡುಗಡೆ ಆಗುತ್ತಿವೆ. ಜೋಗಿ ಅವರ ಸಲಾಮ್ ಬೆಂಗಳೂರು ಕಾದಂಬರಿ, ಅಂಕಿತ ಪ್ರತಿಭೆ ಮಾಲಿಕೆಯಲ್ಲಿ- ಜೋಗಿ ಅವರ ಸಂಪಾದಕತ್ವದಲ್ಲಿ ಶರತ್ ಭಟ್ ಸೇರಾಜೆ ಅವರ 'ಬಾಗಿಲು ತೆರೆಯೇ ಸೇಸಮ್ಮ' ವೈಚಾರಿಕ ಲಲಿತ ಪ್ರಬಂಧಗಳು ಹಾಗೂ ಸಚಿನ್ ತೀರ್ಥಹಳ್ಳಿ ಅವರ ನವಿಲು ಕೊಂದ ಹುಡುಗ ಕಥಾಸಂಕಲನ ಬಿಡುಗಡೆ ಆಗಲಿದೆ.
ಚಲನ ಚಿತ್ರ ನಟ ಯಶ್ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ಚಿತ್ರ ನಿರ್ದೇಶಕ ದುನಿಯಾ ಸೂರಿ, ಪತ್ರಕರ್ತರಾದ ವಿಕಾಸ್ ನೇಗಿಲೋಣಿ ಹಾಗೂ ಹರೀಶ್ ಕೇರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಲೇಖಕರಾದ ಜೋಗಿ, ಶರತ್ ಭಟ್ ಸೇರಾಜೆ ಹಾಗೂ ಸಚಿನ್ ತೀರ್ಥಹಳ್ಳಿ ಉಪಸ್ಥಿತರಿರುತ್ತಾರೆ. ಸ್ಥಳ-ಸಮಯ ಮತ್ತಿತರ ವಿವರಗಳು ಇಂತಿವೆ.

ಪುಸ್ತಕ ಬಿಡುಗಡೆ ದಿನಾಂಕ: 25-11-2018
ಸ್ಥಳ: ವಾಡಿಯಾ ಸಭಾಂಗಣ, ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು

ಪುಸ್ತಕ ಬಿಡುಗಡೆ ಸಮಯ: ಬೆಳಗ್ಗೆ 10.30ಕ್ಕೆ
ಉಪಾಹಾರ ವ್ಯವಸ್ಥೆ: ಬೆಳಗ್ಗೆ 9.30ಕ್ಕೆ












Click it and Unblock the Notifications