ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನಂತಮೂರ್ತಿ ಕೃತಿ ಬಗ್ಗೆ ನಿಮಗನಿಸಿದ್ದು ಬರೆದು ಕಳಿಸಿ

By Mahesh
|
Google Oneindia Kannada News

ಬೆಂಗಳೂರು, ಜೂ.9: ಇವತ್ತಿನ ಹೊಸಕಾಲದ ಯುವಮನಸ್ಸುಗಳ ಓದು, ಗ್ರಹಿಕೆ, ವಿಮರ್ಶೆ, ಒಳನೋಟಗಳನ್ನು ಒಳಗೊಂಡ ಸಂಚಿಕೆಗಳನ್ನು ಹೊರತರುವ ಮೊದಲ ಪ್ರಯತ್ನವಾಗಿ 'ಅನೇಕ' , ಕನ್ನಡದ ಬಹುಮುಖ್ಯ ಬರಹಗಾರರಾದ ಯು.ಆರ್. ಅನಂತಮೂರ್ತಿಯವರಿಗೆ ನುಡಿಕಾಣಿಕೆಯೊಂದನ್ನು ಸಲ್ಲಿಸಲು ಪ್ರಯತ್ನಿಸುತ್ತಿದೆ.

ಇವತ್ತಿನ ಬದಲಾದ ರಾಜಕೀಯ ಕಾಲಘಟ್ಟದಲ್ಲಿ ಯು.ಆರ್. ಅನಂತಮೂರ್ತಿ ಅವರಿಗೆ ನೈತಿಕವಾದ ಬೆಂಬಲವೊಂದನ್ನು ಸೂಚಿಸುವುದೇ ಇದರ ಮುಖ್ಯ ಉದ್ದೇಶವೂ ಹೌದು. ಯು.ಆರ್. ಅನಂತಮೂರ್ತಿ ಅವರ ಕೃತಿಗಳ ಓದು/ವಿಮರ್ಶೆ, ರಾಜಕೀಯ ಮತ್ತು ಸಾಮಾಜಿಕ ನಿಲುವುಗಳು ಕುರಿತಂತೆ ಆಸಕ್ತರು ಬರಹಗಳನ್ನು ನೀಡಬಹುದು. ಆಯ್ದ ಬರಹಗಳು 'ಸಂಚಿಕೆ'ಯಲ್ಲಿ ಪ್ರಕಟವಾಗುತ್ತವೆ. ಇದು ಕಿರಿಯರು ಮಾಡುತ್ತಿರುವ ಅಭಿನಂದನಾ ಗ್ರಂಥವಾಗಿದೆ.[ಅನಂತಮೂರ್ತಿಗೆ ಪತ್ರ :ಯಾರು ನಿಜವಾದ ಫ್ಯಾಸಿಸ್ಟ್ ?]

Aneka invites articles on U.R Ananthamurthy commemorative edition

* ಬರಹಕ್ಕೆ ಯಾವುದೇ ಮಿತಿ ಹಾಗೂ ನಿರ್ಬಂಧಗಳಿಲ್ಲ.
* ಪೂರ್ವಾಗ್ರಹಪೀಡಿತವಾಗಿರಬಾರದೆಂಬುದು ನಮ್ಮ ವಿನಂತಿ.
* ಬರಹದೊಂದಿಗೆ ನಿಮ್ಮ ಪೂರ್ತಿ ವಿಳಾಸ ಮತ್ತು ಸಣ್ಣ ಪರಿಚಯ ಇರಲಿ.
* 23 ನೇ ಜೂನ್ 2014 ರ ಒಳಗೆ ತಲುಪಲಿ.
* ಯುಆರ್ ಅನಂತಮೂರ್ತಿ ಅವರ ಕುರಿತ ಕವಿತೆ , ಅವರ ಸಾಹಿತ್ಯ ಕುರಿತ ಟಿಪ್ಪಣಿ, ವಿಮರ್ಶೆ ಹಾಗೂ ಅವರ ಸಾಮಾಜಿಕ ಮತ್ತು ರಾಜಕೀಯ ನಿಲುವುಗಳ ಕುರಿತ ಬರಹಗಳನ್ನು ಕಳಿಸಬಹುದು.
* ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ರಾಜೇಂದ್ರ ಪ್ರಸಾದ್ ಫೇಸ್ ಬುಕ್ ಐಡಿ
* ನಿಮ್ಮ ಲೇಖನಗಳನ್ನು ಇಮೇಲ್ ಮಾಡಿ : [email protected]
* ವಿಳಾಸ : ರಾಜೇಂದ್ರ ಪ್ರಸಾದ್, ನೋ.72 , ಭೂಮಿಗೀತ, 6 ನೇ ತಿರುವು , ಉದಯಗಿರಿ , ಮಂಡ್ಯ -571 401

English summary
Enthusiastic young writers group 'Aneka' has invited write ups, articles, poems, critics on Jnanpith awardee Dr. U.R Ananthamurthy. Aneka group is intend to publish collection of articles as a commemorative edition which will be a moral booster to U.R Ananthamurthy said Aneka Group convenor Rajendra Prasad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X