ಬೆಂಗಳೂರಿನಲ್ಲಿ ಆರೋಗ್ಯವಂತರೇ ಪರದಾಡುವಂಥ ಮತಗಟ್ಟೆ!
ಬೆಂಗಳೂರು, ಮೇ 12: ಚುನಾವಣಾ ಆಯೋಗ ಸುಗಮ ಮತದಾನಕ್ಕೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಹೇಳುತ್ತದೆ. ಆದರೆ ರಾಜಧಾನಿ ಬೆಂಗಳೂರಿನಲ್ಲೇ ಅಂಗವಿಕಲರು ಮಾತ್ರವಲ್ಲದೆ ಆರೋಗ್ಯವಾಗಿ, ಸದೃಢವಾಗಿರುವವರೂ ಕೂಡ ಮತ ಚಲಾಯಿಸಲು ಪರದಾಡುವಂತಹ ಮತಗಟ್ಟೆ ಒಂದಿದೆ.
ಬೆಂಗಳೂರಿನ ಕರಿಸಂದ್ರ ವಾರ್ಡ್ನ ಕಾವೇರಿನಗರದಲ್ಲಿರುವ ಮತಗಟ್ಟೆ ತಿರುಪತಿ ಬೆಟ್ಟದಂತಿದೆ. ಏರಲು ಸಾಧ್ಯವಾಗದೆ ಸಾಮಾನ್ಯರು, ವೃದ್ಧರು ಪರದಾಡುವಂತಾಗಿದೆ. ನೆಪ ಮಾತ್ರಕ್ಕೆ ಇಳಿಜಾರು ಮಾಡಲಾಗಿದೆ. ಅದನ್ನು ಏರಲೂ ಸಾಮಾನ್ಯರಿಂದಲೂ ಸಾಧ್ಯವಾಗುತ್ತಿಲ್ಲ.
ಯಾವುದೇ ಮತಗಟ್ಟೆಗಳಲ್ಲಿ ವ್ಹೀಲ್ಚೇರ್ಗಳಿಲ್ಲ, ಮಾದರಿ ಮತೆಗಟ್ಟೆಗಳಲ್ಲಿಯೂ ವ್ಹೀಲ್ಚೇರ್ಗಳಿಲ್ಲದೇ ಅವ್ಯವಸ್ಥೆ ಉಂಟಾಗಿದೆ. ಕಾವೇರಿನಗರದ ಮತಗಟ್ಟೆಯು ತಿರುಪತಿ ಬೆಟ್ಟದಂತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.













Click it and Unblock the Notifications