ಯಲಹಂಕ ವಾಯುನೆಲೆ ಬಳಿ ಪ್ರಾಣಿಗಳ ಮೂಳೆ ಪುಡಿ ಮಾಡುವ ಘಟಕ ಸ್ಥಗಿತ
ಬೆಂಗಳೂರು, ಏ.2: ಏರೋ ಇಂಡಿಯಾ ಪ್ರದರ್ಶನ ಸಂದರ್ಭದಲ್ಲಿ ಯುದ್ಧ ವಿಮಾನ ಅಪಘಾತಕ್ಕೀಡಾದ ಹಿನ್ನೆಲೆಯಲ್ಲಿ ವಾಯುಸೇನೆಯು ಹೊಸ ರಕ್ಷಣಾ ಕ್ರಮಕ್ಕೆ ಮುಂದಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಯಲಹಂಕ ವಾಯುನೆಲೆಯ ಸುತ್ತಮುತ್ತಲಿನ ರಜಾಕ್ ಪಾಳ್ಯ ಇನ್ನಿತರೆ 10 ಕಿ.ಮೀ ವ್ಯಾಪ್ತಿಯಲ್ಲಿ ಪ್ರಾಣಿಗಳ ಮೂಳೆ ಪುಡಿ ಮಾಡುವ ಘಟಕ ಹಾಗೂ ಕಸಾಯಿಖಾನೆಗಳನ್ನು ಕೂಡಲೇ ಮುಚ್ಚುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಈ ಪ್ರಾಣಿಗಳ ಮೂಳೆ ಸಂಸ್ಕರಣೆ ಇನ್ನಿತರೆ ಘಟಕಗಳ ಬಳಿಯಿಂದ ಹದ್ದು ಹಾಗೂ ಇನ್ನಿತರೆ ಹಕ್ಕಿಗಳು ವಾಯುನೆಲೆಯ ಸುತ್ತಲೂ ಬರುತ್ತಿವೆ. ಈ ಹಕ್ಕಿ ಯುದ್ಧ ವಿಮಾನಕ್ಕೆ ಬಡಿದಾಗ ಅಪಘಾತಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಕಾರಣಗಳಿಂದ ಕೂಡಲೇ ಇವುಗಳನ್ನು ಮುಚ್ಚಿಸಲು ಸೂಚನೆ ನೀಡಲಾಗಿದೆ.












Click it and Unblock the Notifications