ಬೆಂಗಳೂರಿನಲ್ಲಿ ಪ್ರಾಣಿಗಳಿಗಾಗಿ ಆಂಬ್ಯುಲೆನ್ಸ್ ಸೇವೆ ಆರಂಭಿಸಿದ ನಟಿ
ಫೆಬ್ರವರಿ 14 ರಂದು ಪ್ರಾರಂಭವಾಗಲಿರುವ ಆಂಬ್ಯುಲೆನ್ಸ್ಗಳು ದಕ್ಷಿಣ ಬೆಂಗಳೂರಿನಲ್ಲಿ ಇರುತ್ತವೆ. ನಗರದಾದ್ಯಂತದ ದೂರುಗಳನ್ನು ಆಲಿಸಿ ಸ್ಪಂದಿಸುತ್ತವೆ.
ಬೆಂಗಳೂರು, ಫೆಬ್ರವರಿ 11: ಬೆಂಗಳೂರಿನಲ್ಲಿ ಗಾಯಗೊಂಡ ಇಲ್ಲವೇ ತಕ್ಷಣದ ನೆರವಿನ ಅಗತ್ಯವಿರುವ ಪ್ರಾಣಿಗಳಿಗಾಗಿ 24/7 ಆಂಬ್ಯುಲೆನ್ಸ್ ಸೇವೆಯನ್ನು ಖ್ಯಾತ ನಟಿ ಸಂಯುಕ್ತಾ ಹೊರನಾಡು ಅವರು ಪ್ರಾಣಾ ಅನಿಮಲ್ ಫೌಂಡೇಶನ್ ಮತ್ತು ಸಹಾಯವಾಣಿಯನ್ನು ಪ್ರಾರಂಭಿಸುತ್ತಿದ್ದಾರೆ.
ಪ್ರಾಣಾ ಅನಿಮಲ್ ಫೌಂಡೇಶನ್ ಬೆಂಗಳೂರು ನಗರದಲ್ಲಿ ಆಂಬ್ಯುಲೆನ್ಸ್ಗಳ ಕೊರತೆ ಮತ್ತು ಪ್ರಾಣಿಗಳಿಗೆ ಸರಿಯಾದ ಚಿಕಿತ್ಸಾ ಸೌಲಭ್ಯಗಳನ್ನು ಪರಿಗಣಿಸಿ ಸೇವೆಗಳನ್ನು ಪ್ರಾರಂಭಿಸಲಾಗುತ್ತಿದೆ.
ಹೆಚ್ಚಿನ ಸಂರಕ್ಷಣಾ ಕೇಂದ್ರಗಳು ಮತ್ತು ಮನೆಗಳು ಉತ್ತರ ಹಾಗೂ ಪೂರ್ವ ಬೆಂಗಳೂರಿನಲ್ಲಿ ನೆಲೆಗೊಂಡಿವೆ. ತುರ್ತು ಆರೈಕೆಯ ವಿಳಂಬದಿಂದಾಗಿ ಅನೇಕ ಪ್ರಾಣಿಗಳು ಸಾಯುತ್ತಿವೆ. ಹೀಗಾಗಿ ಅನಿಮಲ್ ಫೌಂಡೇಶನ್ ಆರಂಭಿಸಲು ಪ್ರೇರೇಪಿಸಿತು ಎಂದು ಪ್ರಾಣಾ ಅನಿಮಲ್ ಫೌಂಡೇಶನ್ ಸಂಸ್ಥಾಪಕಿ ಹಾಗೂ ಕನ್ನಡದ ಖ್ಯಾತ ನಟಿ ಸಂಯುಕ್ತ ಹೊರನಾಡು ಹೇಳಿದ್ದಾರೆ.

ಸರಾಸರಿಯಾಗಿ ಒಂದು ಆಶ್ರಯ ಕೇಂದ್ರವು ಪ್ರತಿದಿನ ಪ್ರಾಣಿಗಳ ಆಪಘಾತ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು 50 ಕರೆಗಳನ್ನು ಸ್ವೀಕರಿಸುತ್ತದೆ. ಅವುಗಳಲ್ಲಿ ಹೆಚ್ಚಿನವು ಸೌಲಭ್ಯಗಳ ಕೊರತೆಯಿಂದಾಗಿ ಗಮನಿಸದೆ ಹೋಗುತ್ತವೆ. ಹಸುಗಳು ಮತ್ತು ಇತರ ದೊಡ್ಡ ಪ್ರಾಣಿಗಳನ್ನು ರಕ್ಷಣಾ ಕೇಂದ್ರಗಳಿಗೆ ಸ್ಥಳಾಂತರಿಸುವುದು ಸವಾಲಿನ ಕಾರಣದಿಂದ ದೊಡ್ಡ ಆಂಬ್ಯುಲೆನ್ಸ್ಗಳ ಅಗತ್ಯವಿದೆ ಎಂದು ನಟಿ ಸಂಯುಕ್ತಾ ಹೇಳಿದರು.
ಫೆಬ್ರವರಿ 14 ರಂದು ಪ್ರಾರಂಭವಾಗಲಿರುವ ಆಂಬ್ಯುಲೆನ್ಸ್ಗಳು ದಕ್ಷಿಣ ಬೆಂಗಳೂರಿನಲ್ಲಿ ಇರುತ್ತವೆ. ನಗರದಾದ್ಯಂತದ ದೂರುಗಳನ್ನು ಆಲಿಸಿ ಸ್ಪಂದಿಸುತ್ತವೆ. ಪ್ರತಿಷ್ಠಾನವು ಚಿಕಿತ್ಸೆ ಸೌಲಭ್ಯಗಳನ್ನು ಒದಗಿಸಲು ನಾಲ್ಕು ಆಸ್ಪತ್ರೆಗಳೊಂದಿಗೆ ಕೈಜೋಡಿಸಿದೆ. ಅವರು 24/7 ಪಶುವೈದ್ಯಕೀಯ ಚಿಕಿತ್ಸಾಲಯವನ್ನು ಪ್ರಾರಂಭಿಸಲು ಯೋಜಿಸಿದ್ದಾರೆ ಎಂದರು.

ಬೆಂಗಳೂರಿನಲ್ಲಿ ಪ್ರಾಣಾ ಅನಿಮಲ್ ಫೌಂಡೇಶನ್ 24/7 ಆಂಬ್ಯುಲೆನ್ಸ್ ಸೇವೆ ಮತ್ತು ಸಹಾಯವಾಣಿಯನ್ನು ನಟಿ ಸಂಯುಕ್ತ ಹೊರನಾಡು ಅವರು ಫೆಬ್ರವರಿ 14ರಂದು ಪ್ರಾರಂಭಿಸಲಿದ್ದಾರೆ. ಇದರ ಉದ್ಘಾಟನೆಗೆ ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್ ಅವರನ್ನು ಕರೆಸಲಾಗುತ್ತಿದೆ. ಕನ್ನಡದ ನಟಿಯೊಬ್ಬರು ತಾವು ದುಡಿದ ಹಣ ಹಾಗೂ ತಮ್ಮ ಸಮಯವನ್ನು ಮೂಕ ಜೀವಿಗಳ ವೇದನೆಗೆ ಸ್ಪಂದಿಸಲು ಮೀಸಲು ಇಟ್ಟಿರುವುದು ಶ್ಲಾಘನೀಯವಾಗಿದೆ.
ನಟಿ ಸಂಯುಕ್ತ ಹೊರನಾಡು ಅವರಿಗೆ ಪ್ರಾಣಿಗಳೆಂದರೆ ಬಹು ಇಷ್ಟ. ಹೀಗಾಗಿ ಅವರು ಸತತ ಐದು ವರ್ಷಗಳಿಂದಲೂ ಸಮಾಜಮುಖಿಯಾಗಿ ತೊಡಗಿಸಿಕೊಂಡಿದ್ದಾರೆ. ಇದಕ್ಕೆ ಅವರಿ ಅವರ ಸ್ನೇಹಿತರಾದ ಅನಿರುದ್ಧ್ ಹಾಗೂ ಅದಿತಿನಾಗ್ ಕೂಡ ಸಾಥ್ ನೀಡಿದ್ದಾರೆ. ಚಿಕ್ಕಂದಿನಿಂದಲೂ ಅವರು ಪಶುವೈದ್ಯರಾಗಬೇಕು ಎಂದುಕೊಂಡಿದ್ದರು. ಕೊರೋನಾ ಸಮಯದಿಂದಲೂ ಅವರು ಪ್ರಾಣಿಗಳಿಗೆ ನೆರವು ನೀಡುತ್ತಿದ್ದಾರೆ. ಈ ಕೆಲಸವೇ ಅವರಿಗೆ ಫೌಂಡೇಶನ್ ಆರಂಭಿಸಲು ಪ್ರೇರಣೆಯಾಗಿದೆ.
-
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
Ramya: 'ಧುರಂಧರ್-2' ನೋಡಿ ಹಣ, ಸಮಯ ವ್ಯರ್ಥ ಮಾಡಬೇಡಿ: ನಟಿ ರಮ್ಯಾ ಪೋಸ್ಟ್ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply












Click it and Unblock the Notifications