ಬೆಂಗಳೂರಲ್ಲಿ ಆಯುಷ್ ಮಳಿಗೆ ಉದ್ಘಾಟಿಸಿದ ನಟಿ ತಮನ್ನಾ
ಬೆಂಗಳೂರು, ಸೆಪ್ಟೆಂಬರ್ 09: ಬೆಂಗಳೂರಿನಲ್ಲಿ ಮೊಟ್ಟಮೊದಲ ಲಿವರ್ ಆಯುಷ್ ಥೆರಪಿ ಸ್ಟೋರ್ ಆರಂಭವಾಗಿದೆ. ತನ್ನದೇ ಬ್ರ್ಯಾಂಡ್ ಆಗಿರುವ ಲಿವರ್ ಆಯುಷ್ನ ಈ ಥೆರಪಿ ಸ್ಟೋರ್ 5000 ವರ್ಷದಷ್ಟು ಅತ್ಯಂತ ಪುರಾತನವಾದ ಆಯುರ್ವೇದ ಜ್ಞಾನವನ್ನು ತಂದಿದೆ. ಲಿವರ್ ಆಯುಷ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ತಮನ್ನಾ ಭಾಟಿಯಾ ಅವರು ಈ ಲಿವರ್ ಆಯುಷ್ ಸ್ಟೋರ್ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು, ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಮೂಲಕ ಗ್ರಾಹಕರು ಎದುರಿಸುತ್ತಿರುವ ಈ ಆಧುನಿಕವಾದ ಸೌಂದರ್ಯದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನೆರವಾಗಲಿದೆ. ಆಯುರ್ವೇದ ವಿಜ್ಞಾನದ ಪ್ರಚಾರದಲ್ಲಿ ತೊಡಗಿರುವ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿರುವ ಎವಿಪಿ-'ಆರ್ಯ ವೈದ್ಯ ಫಾರ್ಮಸಿ' ಜತೆ ಒಪ್ಪಂದ ಮಾಡಿಕೊಂಡಿದ್ದು, ಈ ಮೂಲಕ ಲಿವರ್ ಆಯುಷ್ನ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ನೀಡಲಿದೆ.
ಲಿವರ್ ಆಯುಷ್ ಥೆರಪಿ ಸ್ಟೋರ್ ವಿಶೇಷವಾದ ಆಯುರ್ವೇದ ಸೇವೆಗಳನ್ನು ನೀಡಲಿದೆ. ಇಲ್ಲಿ ಆಯುರ್ವೇದ ವೈದ್ಯರಿಂದ ಉಚಿತ ಕನ್ಸಲ್ಟೇಶನ್ ಸೇವೆಯೂ ಲಭ್ಯವಿದೆ. ಈ ಮೂಲಕ ತ್ವರಿತವಾಗಿ ದೋಷ ವಿಶ್ಲೇಷಣೆ ಮಾಡಿ ಅದನ್ನು ಶಮನ ಮಾಡುವ ಸೂಕ್ತ ಉತ್ಪನ್ನಗಳು ಮತ್ತು ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಅದೂ ಕೂಡ ಗ್ರಾಹಕರ ದೇಹಕ್ಕೆ ಹೊಂದಿಕೊಳ್ಳುವಂತಹ ಔಷಧಗಳನ್ನು ನೀಡಲಾಗುತ್ತದೆ.

ತಮನ್ನಾ ಭಾಟಿಯಾ: 'ಈ ಸ್ಟೋರ್ನಲ್ಲಿ ಆಯುರ್ವೇದ ಉತ್ಪನ್ನಗಳನ್ನು ಖರೀದಿಸುವ ಮುನ್ನ ಅವುಗಳ ಸಾಧಕಭಾದಕಗಳನ್ನು ಪರಿಶೀಲಿಸಬಹುದು. ಇವುಗಳಲ್ಲಿ ಬಳಸಿರುವ ಪದಾರ್ಥಗಳ ಸಂಪೂರ್ಣ ಮಾಹಿತಿಯನ್ನು ಪ್ರದರ್ಶಿಸಲಾಗುತ್ತಿದೆ. ಈ ಮಾಹಿತಿಗಳನ್ನು ಪಡೆಯುವ ಮೂಲಕ ಗ್ರಾಹಕರು ಆಯುರ್ವೇದ ಉತ್ಪನ್ನಗಳ ಬಗ್ಗೆ ಅತ್ಯುತ್ತಮವಾದ ಅನುಭವಗಳನ್ನು ಪಡೆಯಬಹುದಾಗಿದೆ. ಅಲ್ಲದೇ, ಇಲ್ಲಿನ ಪರಿಣತರಿಂದ ಉತ್ಪನ್ನಗಳ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಪಡೆಯಬಹುದಾಗಿದೆ.
ಈ ಸ್ಟೋರ್ ಗೆ ಭೇಟಿ ಕೊಟ್ಟರೆ ಅಲ್ಲಿ ಸೌಂದರ್ಯವರ್ಧಕ ಉತ್ಪನ್ನಗಳನ್ನು ಶಾಪಿಂಗ್ ಮಾಬಹುದಾಗಿದೆ. ವಿಶೇಷವಾಗಿ ಇಲ್ಲಿ ಉಚಿತವಾಗಿ ಆಯುರ್ವೇದದ ಬಗ್ಗೆ ಸಲಹೆ ಪಡೆಯುವುದರ ಜತೆಗೆ ದೋಷ ಅವಲೋಕನವನ್ನೂ ಮಾಡಿಸಿಕೊಳ್ಳಬಹುದಾಗಿದೆ. ಈ ಮೂಲಕ ಗ್ರಾಹಕರು ತಮಗೆ ಯಾವ ಥೆರಪಿ ಸೂಕ್ತ ಎಂಬುದನ್ನು ಅರಿತುಕೊಳ್ಳಬಹುದಾಗಿದೆ. ಇಂತಹ ಹಲವು ಬಗೆಯ ಶ್ರೀಮಂತಪೂರಿತವಾದ ಆಯುರ್ವೇದ ಜ್ಞಾನವನ್ನು ಒಳಗೊಂಡ ಉತ್ಪನ್ನಗಳು ಮತ್ತು ಸೇವೆಗಳನ್ನು ಪಡೆಯಬಹುದಾಗಿದೆ'' ಎಂದು ವಿವರಣೆ ನೀಡಿದರು.

'ಉತ್ತಮ ನೆನಪಿನ ಶಕ್ತಿ ಮತ್ತು ನಿದ್ರೆಗೆ ನೆರವಾಗುವ ಶಿರೋ ಪಿಚು' ಚಿಕಿತ್ಸೆಯನ್ನು ಪಡೆಯುವುದು ಸೂಕ್ತ. ಇದಲ್ಲದೇ, ಕಣ್ಣಿನ ಆರೋಗ್ಯವರ್ಧನೆಗೆ ನೇತ್ರ ಪಿಚು' ಬಗ್ಗೆ ತಿಳಿದುಕೊಂಡಿದ್ದೇನೆ. ಸೌಂದರ್ಯ ವರ್ಧನೆಗೆ ಅಗತ್ಯವಾದ ಚಿಕಿತ್ಸೆಗಳನ್ನು ಬಯಸುವವರು ಮುಖಲೇಪನ' ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ. ಈ ಚಿಕಿತ್ಸೆ ಪಡೆದರೆ ಚರ್ಮಕ್ಕೆ ಪುನಶ್ಚೇತನ ನೀಡಿ ಕಾಂತಿಯನ್ನು ಹೆಚ್ಚಿಸುತ್ತದೆ'' ಎಂದು ತಮನ್ನಾ ತಿಳಿಸಿದರು.
ಲಿವರ್ ಆಯುಷ್ ಸ್ಟೋರ್ನ ವಿಳಾಸ: ನಂ: 241, ಚಿನ್ಮಯ ಮಿಷನ್ ಹಾಸ್ಪಿಟಲ್ ರಸ್ತೆ, ಶಾಂತಿಸಾಗರದ ಪಕ್ಕ, ಇಂದಿರಾನಗರ, ಬೆಂಗಳೂರು- 560038.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ












Click it and Unblock the Notifications