ಜಯನಗರದಲ್ಲಿ ಅನುಮತಿ ಇಲ್ಲದೆ ಮರಕಡಿದ ಬಿಬಿಎಂಪಿ: ಹೆಬ್ಳೀಕರ್ ಕಿಡಿ
ಬಿಬಿಎಂಪಿ ವಿರುದ್ಧ ಹಿರಿಯ ನಟ ಹಾಗೂ ಪರಿಸರ ತಜ್ಞ ಸುರೇಶ್ ಹೆಬ್ಳೀಕರ್ ಕಿಡಿ. ಜಯನಗರ 4ನೇ ಬ್ಲಾಕ್ ನಲ್ಲಿ ಅನುಮತಿಯಿಲ್ಲದೆ ಎರಡು ಮರ ಕತ್ತರಿಸಿದ್ದಕ್ಕೆ ಕಿಡಿ.
ಬೆಂಗಳೂರು, ಆಗಸ್ಟ್ 8: ಜಯನಗರದಲ್ಲಿ ಭಾನುವಾರ (ಆಗಸ್ಟ್ 6) ಯಾವುದೇ ಅನುಮತಿಯನ್ನು ಪಡೆಯದೇ, ಅಲ್ಲಿನ ನಾಗರಿಕರಿಗೂ ಈ ಬಗ್ಗೆ ತಿಳಿಸದೇ ಎರಡು ಬೃಹತ್ ಮರಗಳನ್ನು ಏಕಾಏಕಿಯಾಗಿ ಕತ್ತರಿಸಿದ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ವಿರುದ್ಧ ಹಿರಿಯ ನಟ ಹಾಗೂ ನಿಸರ್ಗ ಪ್ರೇಮಿ ಸುರೇಶ್ ಹೆಬ್ಳೀಕರ್ ಕಿಡಿಕಾರಿದ್ದಾರೆ.
ಜಯನಗರದ 4ನೇ ಟಿ ಬ್ಲಾಕ್ ನ 36ನೇ ಕ್ರಾಸ್ ನಲ್ಲಿ ಎಸ್ಎಸ್ಎಂವಿಆರ್ ಕಾಲೇಜಿನ ಹತ್ತಿರದಲ್ಲಿ ಯಾವುದೇ ಸಕಾರಣವಿಲ್ಲದೆ, ಬಿಬಿಎಂಪಿಯು ಎರಡು ಮರಗಳನ್ನು ಕತ್ತರಿಸಿದ್ದಾರೆ ನಾಗರಿಕರು ಆರೋಪಿಸಿದ್ದರು. ಇದು ಕೆಲವಾರು ಮಾಧ್ಯಮಗಳಲ್ಲಿಯೂ ಪ್ರತಿಧ್ವನಿಗೊಂಡಿದೆ.

ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಸುರೇಶ್ ಹೆಬ್ಳೀಕರ್, ''ಯಾವುದೇ ಸಕಾರಣವಿಲ್ಲದೆ ಬಿಬಿಎಂಪಿಯು ಹೀಗೆ ಮರಗಳನ್ನು ಕತ್ತರಿಸುವುದು ನಾಚಿಗೆಗೇಡಿನ ವಿಚಾರ. ಮರಗಳು ಕೇವಲ ಮರಗಳಲ್ಲ. ಅವು ನಮ್ಮ ಪರಿಸರದ ಅವಿಭಾಜ್ಯ ಅಂಗಗಳು. ಇದು ಏಕೆ ಬಿಬಿಎಂಪಿಗೆ ಅರ್ಥವಾಗುವುದಿಲ್ಲ'' ಎಂದು ಬೇಸರ ವ್ಯಕ್ತಪಡಿಸಿದರು.












Click it and Unblock the Notifications