ಬೆಂಗಳೂರಲ್ಲಿ ಭಾನುವಾರ "ಮಜಾ ರೀಲ್ಸ್" ಮಾಡಲು ಹೋಗಿ ದುರಂತ ಅಂತ್ಯ
ಬೆಂಗಳೂರಿನಲ್ಲಿ ರೀಲ್ಸ್ ಮಾಡಲು ಹೋಗಿ ಮತ್ತೊಂದು ದುರಂತ ಸಂಭವಿಸಿದೆ. ಕಳೆದ ಕೆಲವು ವರ್ಷಗಳ ಹಿಂದೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಜನ ಸಾವನ್ನಪ್ಪುತ್ತಿದ್ದದ್ದು ವರದಿಯಾಗುತ್ತಿತ್ತು. ಇದೀಗ ಜನ ರೀಲ್ಸ್ ಮಾಡಲು ಹೋಗಿ ಸಾವನ್ನಪ್ಪುತ್ತಿರುವುದು ಹೆಚ್ಚಾಗುತ್ತಿದೆ. ಬೆಂಳಗೂರಿನಲ್ಲೂ ಯುವಕನೊಬ್ಬ ರೀಲ್ಸ್ ಮಾಡಲು ಹೋಗಿ ದುರಂತ ಅಂತ್ಯ ಕಂಡಿರುವುದು ವರದಿಯಾಗಿದೆ. ಇತ್ತೀಚಿನ ದಿನಗಳಲ್ಲಿ ರೀಲ್ಸ್ ಮಾಡುವಾಗ ಅಪಘಾತ ಸಂಭಿವಿಸಿರುವುದು, ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವಂತಹ ಘಟನೆಗಳು ವರದಿಯಾಗುತ್ತಲ್ಲೇ ಇವೆ.
ಇಲ್ಲಿನ ಪಣತ್ತೂರು ಕೆರೆಯಲ್ಲಿ ರೀಲ್ಸ್ ಮಾಡಲು ಹೋದ ಯುವಕ ಹುಚ್ಚಾಟ ಮಾಡಿ ಸಾವನ್ನಪ್ಪಿದ್ದಾನೆ. 22 ವರ್ಷದ ಅನಿಲ್ ಎನ್ನುವ ಯುವಕ ಕುಡಿದ ನಶೆಯಲ್ಲಿ ಕೆರೆಗೆ ಇಳಿದು ರೀಲ್ಸ್ ಮಾಡಲು ಮುಂದಾಗಿದ್ದು, ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಘಟನೆ ನಡೆದಿದ್ದು ಹೇಗೆ ?
ಭಾನುವಾರ ಸಂಜೆ ಮೂರು ಜನ ಗೆಳೆಯರು ಸೇರಿ ಪಣತ್ತೂರು ಕೆರೆಗೆ ಹೋಗಿದ್ದಾರೆ. ಮೂರು ಜನ ಕೆರೆಗೆ ಹೋಗುವ ಮುನ್ನವೇ ಪಾರ್ಟಿ ಮಾಡಿ ಹೋಗಿದ್ದರು ಎನ್ನಲಾಗಿದೆ. ಮೂರು ಜನ ಕುಡಿದು ಚೆನ್ನಾಗಿ ಕುಡಿದು ಹೋಗಿದ್ದರು. ಅಲ್ಲದೇ ಕುಡಿದ ನಶೆಯಲ್ಲೇ ಇಬ್ಬರು ರೀಲ್ಸ್ ಮಾಡಲು ಮುಂದಾಗಿದ್ದರೆ. ಕೆರೆಗೆ ಹೋದ ಮೂರು ಜನ ನೇಪಾಳದವರು ಎಂದು ಹೇಳಲಾಗಿದೆ. ನೇಪಾಳ ಮೂಲದ ಉಪೇಂದ್ರ, ದಿನೇಶ್ ಹಾಗೂ ಅನಿಲ್ ಎನ್ನುವವರು ಮೂರು ಜನ ಗೆಳೆಯರು ಭಾನುವಾರ ರಜೆ ದಿನವನ್ನು ಎಂಜಾಯ್ ಮಾಡಲು ಮುಂದಾಗಿದ್ದಾರೆ. ಬೆಳಿಗ್ಗೆಯಿಂದ ಸುತ್ತಾಡಿ, ಸಂಜೆ ಪಾರ್ಟಿ ಮಾಡಿ ಕೆರೆಯ ಬಳಿ ಬಂದಿದ್ದಾರೆ. ಕೆರೆಯಲ್ಲಿ ಇಳಿದು ರೀಲ್ಸ್ ಮಾಡಲು ಪ್ಲಾನ್ ಮಾಡಿದ್ದಾರೆ.
ಈ ವೇಳೆ ಅನಿಲ್ ಹಾಗೂ ದಿನೇಶ್ ಎನ್ನುವವರು ಕೆರೆಗೆ ಇಳಿದು ರೀಲ್ಸ್ ಮಾಡುತ್ತಿದ್ದರೆ, ಉಪೇಂದ್ರ ಎನ್ನುವ ವ್ಯಕ್ತಿ ರೀಲ್ಸ್ ಚಿತ್ರೀಕರಣ ಮಾಡಲು ಶುರುಮಾಡಿದ್ದಾನೆ. ಆದರೆ, ಕೆಲವೇ ನಿಮಿಷಗಳಲ್ಲಿ ಅನಿಲ್ ನೀರಿನಲ್ಲಿ ಮುಳುಗಿದ್ದಾನೆ. ಕುಡಿದ ನಶೆಯಲ್ಲಿ ಇದ್ದಿದ್ದರಿಂದ ಈಜಿ ದಡ ಸೇರಲು ಅಥವಾ ಮೇಲೆ ಏದ್ದೇಳಲು ಸಾಧ್ಯವಾಗಿಲ್ಲ. ಅನಿಲ್ ಮುಳುಗುವುದನ್ನು ನೋಡಿ ಗಾಬರಿಯಾಗಿರುವ ದಿನೇಶ್ ಕೂಡಲೇ ಅಲ್ಲಿಂದ ಮೇಲೆ ಬಂದಿದ್ದಾನೆ. ದಿನೇಶ್ ಹಾಗೂ ಉಪೇಂದ್ರ ಗಾಬರಿಯಲ್ಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಆದರೆ, ಪೊಲೀಸ್ ಬರುವುದರ ಒಳಗೆ ಅನಿಲ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಎನ್ನಲಾಗಿದೆ.
ಶೋಧ ಕಾರ್ಯಾಚರಣೆ
ಸಂಜೆ ವೇಳೆಗೆ ದುರಂತ ಸಂಭವಿಸಿದ್ದು, ರಾತ್ರಿ ಸುಮಾರು 9 ಗಂಟೆಗೆ ಅನಿಲ್ ಮೃತದೇಹ ಪತ್ತೆಯಾಗಿದೆ. ಸಂಜೆ ಈ ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಬೋಟ್ಗಳ ಮೂಲಕ ಪತ್ತೆ ಕಾರ್ಯಾಚರಣೆ ನಡೆದಿತ್ತು. ಸುಮಾರು ಮೂರ್ನಾಲ್ಕು ಗಂಟೆಗಳ ನಂತರ ಮೃತದೇಹ ಪತ್ತೆಯಾಗಿದೆ.
ಮೂವರು ಗೆಳೆಯರ ಪರಿಚಯವಾಗಿದ್ದು ಹೇಗೆ ?
ಈ ಮೂರು ಜನ ಯುವಕರು ಒಂದೇ ರೂಮ್ನಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಮೃತ ಅನಿಲ್ ಹಾಗೂ ದಿನೇಶ್ ಎನ್ನುವವರು ಇಲ್ಲಿನ ವಸತಿ ಸಮುಚ್ಛಯವೊಂದರಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಅದೇ ವಸತಿ ಸಮುಚ್ಛಯದಲ್ಲಿ ಉಪೇಂದ್ರ ಸೆಕ್ಯೂರಿಟಿ ಗಾರ್ಡನ್ ಆಗಿದ್ದ ಎನ್ನಲಾಗಿದೆ. ಭಾನುವಾರ ಹಿನ್ನೆಲೆ ರಿಲಾಕ್ಸ್ ಆಗುವ ಮೂಡನಲ್ಲಿ ಇದ್ದರು. ಆದರೆ, ಮೋಜು - ಮಸ್ತಿ ಮಾಡಲು ಹೋಗಿ ದುರಂತ ಅಂತ್ಯ ಕಂಡಿದೆ.
-
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ












Click it and Unblock the Notifications